ಕೊಳ್ಳೇಗಾಲ: ನಮ್ಮ ಬಾಳಿಗೆ ಬೆಳಕಾದ ಗುರುವನ್ನು ನಾವು ಯಾವಾಗಲು ಸ್ಮರಿಸಬೇಕು, ಗುರು ಎಂದರೆ
ಗುರಿ ತೋರುವವರು ಸಮಾಜದ ಉನ್ನತಿಗೆ ಗುರುಗಳ ಮಾರ್ಗದರ್ಶನ ಮುಖ್ಯ ಎಂದು ಡಾ. ಮಧುಸೂಧನ್ ಹೇಳಿದರು.
ಪಟ್ಟಣದ ಜೆಎಸ್ಎಸ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ನಮ್ಮ ಜೀವನಕ್ಕೆ ಮಾರ್ಗದರ್ಶಕರಾದ ಗುರುಗಳಿಗೆ ಕೃತಜ್ಞನತೆ ಸಲ್ಲಿಸುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಟ ಪರಂಪರೆಯಾಗಿದೆ. ಜೆಎಸ್ಎಸ್ ಸಂಸ್ಥೆಗೆ ಭವ್ಯ ಪರಂಪರೆಯಿದ್ದು, ನಾಡಿನಾದ್ಯಂತ ಜ್ಞಾನ, ಅನ್ನ, ಅಕ್ಷರ
ದಾಸೋಹವನ್ನು ನಡೆಸಿಕೊಂಡು ಬರುತ್ತಾ ಹಲವರ ಬದುಕಿಗೆ ದಾರಿದೀಪವಾಗಿದೆ. ಇಲ್ಲಿ ಕಲಿತವರು ಉನ್ನತ ಬದುಕಿನೆಡೆಗೆ ಸಾಗಬೇಕು. ಕಲಿತದನ್ನು ಕಲಿಸಿದವರನ್ನು ಜೀವನದುದ್ದಕ್ಕೂ ಸ್ಮರಿಸಿಕೊಳ್ಳಬೇಕು. ಅಂತಹ ಸ್ಮರಣೆಯ ಕಾರ್ಯವೇ ಗುರುಪೂರ್ಣಿಮ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ನಮಗೆ ಜ್ಞಾನ, ಸಂಸ್ಕಾರ, ಅಧ್ಯಾತ್ಮಿಕ ಬೆಳವಣಿಗೆಗೆ ದಿಕ್ಕನ್ನು ತೋರುವವರು, ಅಂತಹ ಗುರು ಶಿಕ್ಷಣ ನೀಡುವ ವ್ಯಕ್ತಿಯಲ್ಲ, ವ್ಯಕ್ತಿತ್ವ ರೂಪಿಸುವ ಶಿಲ್ಪಿ. ಅಜ್ಞಾನ ನೀವಾರಿಸಿ ಜ್ಞಾನ ನೀಡುವ ದಾರಿದೀಪ, ನೀತಿ ಸತ್ಯದ ಮಾರ್ಗದರ್ಶಕರು ಅಂತಹ ಗುರುವಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಮಹದೇವಸ್ವಾಮಿ ರವರು ಮಾತನಾಡಿ,
ಗುರುಪೂರ್ಣಿಮೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರವಾದ ದಿನವಾಗಿದೆ. ಆಷಾಢ ಮಾಸದ ಹುಣ್ಣಿಮೆಯಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನ ಮಹರ್ಷಿ ವೇದವ್ಯಾಸರ ಸಂಸ್ಮರಣೆ ದಿನವೆಂದು, ಜನ್ಮದಿನವೆಂದು ಆಚರಿಸಲಾಗುತ್ತಿದೆ. ಈ ದಿನ ಶಿಷ್ಯರು ತನ್ನ ಗುರುಗಳಿಗೆ ಗೌರವ ಸಲ್ಲಿಸುವ, ಸಂಸ್ಮರಿಸುವ ದಿನವಾಗಿದೆ ಎಂದು ಹೇಳಿದರು.
ಗುರು ಅಜ್ಞಾನ ಅಂಧಕಾರವನ್ನು ದೂರಮಾಡಿ
ಬೆಳಕನ್ನು ನೀಡುವವರು ಹಾಗೂ ಜೀವನದಲ್ಲಿ ನಮ್ಮ ವ್ಯಕ್ತಿತ್ವ, ನೈತಿಕ ಮೌಲ್ಯವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವ. ಜ್ಞಾನ, ಸಂಸ್ಕಾರ, ಸತ್ಯದ ಕಡೆಗೆ ಕೊಂಡ್ಯೊಯುವ ಬದುಕಿಗೆ
ಬೆಳಕನ್ನು ನೀಡಿ ಸತ್ಯ, ಧರ್ಮ, ಜ್ಞಾನದ ಮಾರ್ಗದಲ್ಲಿ ನಡೆಯಲು ಪ್ರೇರೆಪಿಸುವವರೇ ಗುರುಗಳು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿನಿಯರುಗಳು ಭಾಗವಹಿಸಿದ್ದರು.
