ಸಿಂಧೂರ್ ಕಾರ್ಯಾಚರಣೆ:ನಿಮಿಷಾಂಭ ದೇಗುಲದಲ್ಲಿ ಸೈನಿಕರಿಗಾಗಿ ವಿಶೇಷ ಪೂಜೆ

Spread the love

ಮಂಡ್ಯ: ಭಾರತೀಯ ಸೇನೆಯಿಂದ ನಡೆದ ಸಿಂಧೂರ್ ಆಪರೇಷನ್ ಯಶಸ್ವಿಯಾದ ಹಿನ್ನಲೆ ರಾಜ್ಯ ಸರ್ಕಾರದಿಂದ ಮುಜರಾಯಿ ದೇಗುಲಗಳಲ್ಲಿ ಸೈನಿಕರಿಗಾಗಿ ಪೂಜೆ ಸಲ್ಲಿಕೆಗೆ ಆದೇಶವಾಗಿದೆ.

ಹಾಗಾಗಿ ಶ್ರೀರಂಗಪಟ್ಟಣದ ನಿಮಿಷಾಂಭ ದೇಗುಲದಲ್ಲಿ ಸೈನಿಕರ ಹೆಸರಲ್ಲಿ ಪೂಜೆ ಸಲ್ಲಿಸಲಾಯಿತು.

ರಾಜ್ಯದ ಪ್ರಸಿದ್ಧ ದೇಗುಲದಲ್ಲಿ ಒಂದಾದ ಮಂಡ್ಯ ಜಿಲ್ಲೆಯ ನಿಮಿಷಾಂಭ
ದೇಗುಲದಲ್ಲಿ ಇಂದು ಮುಂಜಾನೆ ಸೈನಿಕರಿಗಾಗಿ ದೇವಿಗೆ ಮೊದಲ ಪೂಜೆ ಸಲ್ಲಿಕೆಯಾಯಿತು.

ಸೈನಿಕರಿಗಾಗಿ ಸಂಕಲ್ಪ ಮಾಡಿ ದೇವಿಗೆ ದೇಗುಲದ ಅರ್ಚಕರು ಮೊದಲ ಪೂಜೆ ಸಲ್ಲಿಸಿದರು.

ದೇಶ ಕಾಯುವ ಯೋಧರಿಗೆ ಯಾವುದೇ ತೊಂದರೆ ಆಗದಂತೆ ದೇವಿಯಲ್ಲಿ ಪ್ರಾರ್ಥಿಸಿ ಸಂಕಲ್ಪ ಮಾಡಿದರು.