ಮೈಸೂರು: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ದಿವಾಳಿ ಯಾಗಿರುವ ಕಾಂಗ್ರೆಸ್ ಸರಕಾರ ಈಗ ಜನನ, ಮರಣ ಪ್ರಮಾಣಪತ್ರದ ಶುಲ್ಕವನ್ನು 10ಪಟ್ಟು ಏರಿಕೆ ಮಾಡಿದೆ ಎಂದು ಯುವಭಾರತ್ ಸಂಘಟನೆ
ಸಂಚಾಲಕ ಜೋಗಿ ಮಂಜು ದೂರಿದ್ದಾರೆ.
ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ ಹಾಲು ದರ ಏರಿಕೆ ಮಾಡಿ, ಜನನ, ಮರಣ ಪ್ರಮಾಣಪತ್ರ ದಲ್ಲೂ ಹಣ ಗಳಿಸಲು ಈ ಸರ್ಕಾರ ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ಜೋಗಿ ಟೀಕಿಸಿದ್ದಾರೆ.
ಈ ಮೊದಲು ಜನನ, ಮರಣ ಪ್ರಮಾಣಪತ್ರ ಪಡೆಯಲು 5 ರೂ. ಶುಲ್ಕವಿತ್ತು ಆದರೆ ಈಗ ಅದನ್ನು 50 ರೂ.ಗೆ ಏರಿಸಿದ್ದಾರೆ. ಅಲ್ಲದೇ ದಂಡದ ಶುಲ್ಕವೂ ಏರಿಕೆಯಾಗಿದೆ, ಬಡವರು
ಏನು ಮಾಡಬೇಕು ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.
5 ಗ್ಯಾರಂಟಿ ಕೊಟ್ಟು 10 ಪಟ್ಟು ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರ ಜನವಿರೋಧಿಯಾಗಿದೆ. ಈ ಕೂಡಲೇ ಏರಿಸಿದ ಶುಲ್ಕ ಹಿಂದಕ್ಕೆ ಪಡೆದು ಮೊದಲಿನ ಶುಲ್ಕವನ್ನೇ ಮುಂದುವರಿಸ ಬೇಕೆಂದು ಒತ್ತಾಯಿಸಿದ್ದಾರೆ.
ನಗರಪಾಲಿಕೆ ನೀರಿನದರ ಹೆಚ್ಚಳ,ಕಂದಾಯ ಹೆಚ್ಚಳ ಮಾಡಿದ್ದಾಯಿತು,ಈಗ ಜನನ ಮರಣ ಪ್ರಮಾಣ ಪತ್ರ ಹೆಚ್ಚಳ ಮಾಡಿ ಬಡವರ ಮೇಲೆ ಬರೆ ಎಳೆದಿದ್ದಾರೆ ಎಂದು ಜೋಗಿಮಂಜು ಕಿಡಿಕಾರಿದ್ದಾರೆ.
ಮಾರ್ಗಸೂಚಿಯಲ್ಲಿ 2 ರೂ ಇದ್ದ ಪರಿಷ್ಕೃತ ದರ 20 ರೂ,
5 ರೂ ಇದ್ದ ಪರಿಷ್ಕೃತ ದರ 50.ಒಂದು ವೇಳೆ
ವಿಳಂಬವಾದರೆ ದಂಡ 50 ರೂ ಕಟ್ಟಬೇಕು. ಇದು ಅವೈಜ್ಞಾನಿಕ.ಹಾಗಾಗಿ ಅಧಿಕೃತವಾಗಿ ಹಣ ಸುಲಿಗೆ ಕೇಂದ್ರವಾಗಿ ಪರಿಣಮಿಸಿದೆ ಎಂದು ಅವರು ಕಿಡಿಕಾರಿದ್ದಾರೆ
ಒಬ್ಬ ಮನುಷ್ಯ ಹುಟ್ಟಿದ ದಿನ ಪತ್ರ ಪಡೆಯುವುದರೊಂದಿಗೆ ಸುಲಿಗೆ ಪ್ರಾರಂಭವಾಗಿ ಕಡೆಗೆ ಅವರ ಸಾವಿನ ಪ್ರಮಾಣ ಪತ್ರ ಪಡೆಯುವವರೆಗೂ ಹಣ ಸುಲಿಗೆ ಮಾಡುತ್ತಿರುವುದು ಮನುಕುಲಕ್ಕೆ ಅವಮಾನ ಎಂದು ಜೋಗಿ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷಗಳಿಂದ ನಗರಪಾಲಿಕೆ ಯಲ್ಲಿ ಸದಸ್ಯರುಗಳಿಲ್ಲದ ಕಾರಣ ಇಂತಹ ಅವೈಜ್ಞಾನಿಕ ನಿರ್ಣಯವನ್ನು ಅಧಿಕಾರಿಗಳು ಅವರ ಮನಸೊ ಇಚ್ಚೆ ಮಾಡುತ್ತಿರುವುದು ಸರಿ ಇಲ್ಲ, ಈಗ ಮಾಡಿರುವ ಪರಿಷ್ಕೃತ ದರವನ್ನು ಕಡಿಮೆ ಮಾಡಬೇಕು ಇಲ್ಲದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಯಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕಾನೂನಿನ ಹೋರಾಟ ಮಾಡಬೇಕಾಗುತ್ತದೆ ಎಂದು ಜೋಗಿಮಂಜು ಎಚ್ಚರಿಸಿದ್ದಾರೆ.
