ಮೈಸೂರು: ದೇಶದಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ತತ್ವ ಸಿದ್ಧಾಂತಗಳ ಪ್ರಚಾರಕ್ಕೆ ಹಗಲಿರುಳು ಶ್ರಮಿಸಿದ ಆದಿ ಶಂಕರಾಚಾರ್ಯರು ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು.
ಸಹಸ್ರಾರು ವರ್ಷದ ಹಿಂದೆಯೇ 7ನೇ ಶತಮಾನದಲ್ಲಿ ಹಿಂದೂ ರಾಷ್ಟ್ರದ ಪ್ರಾತಃ ಸ್ಮರಣೀಯ ಆಚಾರ್ಯರಾಗಿ ವೇದ ಉಪನಿಷತ್ ಶಾಸ್ತ್ರ ಹಿಂದೂ ಧರ್ಮವನ್ನ ಪುನರ್ ಪ್ರತಿಪಾದಿಸಿದರು ಎಂದು ತಿಳಿಸಿದರು.
ನಗರದ ಅಗ್ರಹಾರದಲ್ಲಿ ಮಂಗಳವಾರ ಅಭಿನವ ಶಂಕರ ನಿಲಯದ ಶಂಕರ ಮಠದಲ್ಲಿ ಶಂಕರಾಚಾರ್ಯರ ಜಯಂತ್ಯುತ್ಸವ ಅಂಗವಾಗಿ
ಶಂಕರ ರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಪೂಜಿಸುವವನೆ ನಿಜವಾದ ಸನ್ಯಾಸಿಯಾಗುತ್ತಾನೆ ಅಂತಹ ಮಹಾನ್ ಕಾರ್ಯವನ್ನು ಶಂಕರರು ಮಾಡಿದರು. ತಮ್ಮ 12ನೇ ವಯಸ್ಸಿನಲ್ಲಿಯೆ ಎಲ್ಲ ಶಾಸ್ತ್ರಗಳನ್ನು ಓದಿ ಕಾಲ್ನಡಿಗೆಯಲ್ಲಿಯೆ ದೇಶ ಸಂಚಾರ ಮಾಡಿ ಸಮಗ್ರ ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಿದರು ಎಂದು ತಿಳಿಸಿದರು.
ನಂತರ ಭಕ್ತರಿಗೆ ಪೂಜೆ, ಅಭಿಷೇಕ, ತೀರ್ಥ ಪ್ರಸಾದ ಜರುಗಿತು.
ಅಗ್ರಹಾರದ ಶಂಕರ ಮಠದ ರಸ್ತೆಯಿಂದ ಪ್ರಾರಂಭಗೊಂಡು ರಾಮಾನುಜ ರಸ್ತೆ ಹಾಗೂ ಉತ್ತರಾದಿ ಮಠ ರಸ್ತೆಯಲ್ಲಿ ನಾದಸ್ವರದೊಂದಿಗೆ ಶಂಕರರ ರಥೋತ್ಸವ ಸಾಗಿತು.
ಅಭಿನವ ಶಂಕರ್ ಆಲಯದ ಧರ್ಮಾಧಿಕಾರಿಗಳಾದ ಎಚ್ ರಾಮಚಂದ್ರ, ಭಾಸ್ಕರ್,ಡಿ ಟಿ ಪ್ರಕಾಶ್ ,ಎಂ.ಆರ್ ಬಾಲಕೃಷ್ಣ,ಎನ್ ಎಂ ನವೀನ್ ಕುಮಾರ್,
ವಿಕ್ರಂ ಅಯ್ಯಂಗಾರ್,ವ್ಯವಸ್ಥಾಪಕರಾದ ಶೇಷಾದ್ರಿ,ಪಾರ್ಥನಾರಾಯಣ,ಡಾ.ಲಕ್ಷ್ಮಿ,
ಸುಧೀಂದ್ರ,ಶ್ರೀನಿವಾಸ್ ಬಾಷ್ಯಂ,ಪ್ರಶಾಂತ್ ,ಅಚ್ಯುತ,ಅಜಯ್ ಶಾಸ್ತ್ರಿ,ಸತ್ಯನಾರಾಯಣ್ ,ವಾಸುದೇವಮೂರ್ತಿ,ಜಯಸಿಂಹ ,ರಂಗನಾಥ್, ಕಡಕೋಳ ಜಗದೀಶ್ ,ಕೇಬಲ್ ರಮೇಶ್ ಮತ್ತಿತರರು ಹಾಜರಿದ್ದರು.
