ಮೈಸೂರು: ಮೈಸೂರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಕ್ತಿ ಭಾವದಿಂದ ಶಂಕರ ಜಯಂತಿ ಆಚರಿಸಲಾಯಿತು.
ಶಂಕರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಿಹಿ ವಿತರಿಸಿ, ಶಂಕರಾಚಾರ್ಯರ ಭಜನೆಯನ್ನು ಹಾಡಲಾಯಿತು.
ವಿದುಷಿ ನಾಗಲಕ್ಷ್ಮಿಯವರು ಶಂಕರರ ಬದುಕು, ಸಾಧನೆ, ರಚನೆಗಳ ಕುರಿತು ಮಾತಾಡಿದರು. ಅದ್ವೈತ ವೇದಾಂತ, ಇಂದಿಗೆ ಅದರ ಪ್ರಸ್ತುತತೆ, ಅದರಲ್ಲಿ ಪ್ರಸ್ತಾಪಿಸಿರುವ ಸಮಾನತೆ ಸೇರಿದಂತೆ ಅನೇಕ ವಿಚಾರಗಳನ್ನು ಮಂಡಿಸಿದರು.
ಶಾಸಕ ಟಿ ಎಸ್ ಶ್ರೀವತ್ಸ ಅವರು ಮಾತನಾಡಿ ಪಕ್ಷದ ಕಚೇರಿಯಲ್ಲಿ ಅನೇಕ ಮಹಾನುಭಾವರ ಜಯಂತಿಯನ್ನು ಆಚರಿಸುತ್ತೇವೆ, ತನ್ಮೂಲಕ ಪಕ್ಷದ ಕಾರ್ಯಕರ್ತರಿಗೆ ಎಲ್ಲಾ ಮಹನೀಯರ ವಿಚಾರ ತಲುಪಿ ಸಮಾನತೆ, ಭ್ರಾತೃತ್ವದ ಭಾವನೆ ಬೆಳೆಯುತ್ತದೆ ಎಂದು ತಿಳಿಸಿದರು.
ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ, ಪ್ರಕೋಷ್ಟಗಳ ರಾಜ್ಯ ಸಹ ಸಂಚಾಲಕರಾದ ಎನ್ ವಿ ಫನೀಶ್, ವಿಭಾಗ ಪ್ರಭಾರಿ ಸ್ವಾಮಿ ಮರುಳಾಪುರ, ಸಹ-ಪ್ರಭಾರಿ ಡಾ.ಈ.ಸಿ ನಿಂಗರಾಜಗೌಡ, ನಗರ ಪ್ರಧಾನ ಕಾರ್ಯದರ್ಶಿಗಳಾದ ಸಿ.ಕೆ ರುದ್ರಮೂರ್ತಿ, ವಿ. ಸೋಮಸುಂದರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹೆಚ್.ಜಿ ಗಿರಿಧರ್, ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಹಿರಿಯ ಮುಖಂಡರಾದ ಗೋಪಾಲ್ ರಾವ್, ಮಾಜಿ ಮಹಾ ಪೌರರಾದ ಶಿವಕುಮಾರ್, ಬ್ರಾಹ್ಮಣ ಸಂಘಟನೆಗಳ ಮುಖಂಡರಾದ ಡಿ ಟಿ ಪ್ರಕಾಶ್, ಡಾ. ಲಕ್ಷ್ಮಿದೇವಿ, ನಂ ಶ್ರೀಕಂಠಕುಮಾರ್, ಕೆ ಆರ್ ಸತ್ಯನಾರಾಯಣ, ಸಾಹಿತಿ ಲೀಲಾ ಪ್ರಕಾಶ್, ಬಿಜೆಪಿ ಪದಾಧಿಕಾರಿಗಳಾದ ಎಂ ಆರ್ ಬಾಲಕೃಷ್ಣ, ಕೆ ಎಂ ನಿಶಾಂತ್, ಬ್ರಾಹ್ಮಣ ಯುವ ಮುಖಂಡರಾದ ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಜಯಸಿಂಹ ಸೇರಿದಂತೆ ಬಿಜೆಪಿ ಮಂಡಲ ಅಧ್ಯಕ್ಷರು, ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿವಿಧ ಬ್ರಾಹ್ಮಣ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
