ಮೈಸೂರು: ಫ್ಲೆಕ್ಸ್,ಬ್ಯಾನರ್ ಗಳು ಮೈಸೂರು ಸ್ವಚ್ಚ,ಸುಂದರ, ಸಾಂಸ್ಕೃತಿಕ ನಗರ ಎಂಬ ಹೆಸರಿಗೆ ಕಪ್ಪು ಚುಕ್ಕೆಯಾಗಿಬಿಟ್ಟಿವೆ.
ಸಚಿವರು,ಸಂಸದರು, ಶಾಸಕರು, ತಾವೇ ಮಾಡಿರುವ ಗೌರವಿಸಿ ಕಾಪಾಡಬೇಕಿದ್ದ ಕಾನೂನು ಗಳನ್ನು ಗಾಳಿಗೆ ತೂರಿ, ದರ್ಪ ಮೆರೆದಿದ್ದಾರೆ.
ಸಂಸದರಾದ ಸುನೀಲ್ ಬೋಸ್ ಜನ್ಮ ದಿನದ ಪ್ರಯುಕ್ತ ಅವರ ಹಿಂಬಾಲಕರು ಅವರವರ ಫ್ಲೆಕ್ಸ್ ಗಳನ್ನು ಹಾಕಿಕೂಂಡಿದ್ದರೆ, ಮತ್ತೂಂದು ಕಡೆ ಶಾಸಕರಾದ ಹರೀಶ್ ಗೌಡ ಅವರು,
ಸಚಿವರಾದ ರಿಜ್ವಾನ್ ಹರ್ಷದ್ ಮೈಸೂರಿಗೆ ಆಗಮಿಸುವ ಸಂಧರ್ಭದಲ್ಲಿ
ಸಿಕ್ಕ ಸಿಕ್ಕ ರಸ್ತೆ, ಗಲ್ಲಿಗಳಲ್ಲಿ
ದೀಪದ ಕಂಬಗಳಿಗೆ ತಾನೊಬ್ಬ ಚುನಾಯಿತ ಜನಪ್ರತಿನಿಧಿ ಎನ್ನುವುದನ್ನೂ ಮರೆತು
ಫ್ಲೆಕ್ಸ್ ಹಾಕಿಕೊಂಡಿದ್ದಾರೆ.ಇದು ಅಕ್ಷಮ್ಯ ಅಪರಾಧ ಎಂದು ಸಾಮಾಜಿಕ ಕಾರ್ಯಕರ್ತ
ಸಂದೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೆಲ್ಲ ನೋಡಿ ಕಣ್ಣು , ಬಾಯಿ ಮುಚ್ಚಿ ಕುಳಿತಿರುವ ನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳದ್ದು ಸಹ ಅಪರಾಧವೆ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹೇಳಿದ್ದಾರೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದಂತೆ ಜನಪ್ರತಿನಿಧಿಗಳು,ಅಧಿಕಾರಿಗಳಿಗೂ 10 ಲಕ್ಷ ದಂಡ ವಿಧಿಸಲಿ ಎಂದು ಸಂದೇಶ್ ಆಗ್ರಹಿಸಿದ್ದಾರೆ.
ಈಗಿನ ಪರಿಸ್ಥಿತಿ ಯಲ್ಲಿ ಯಾರಿಗೆ ದೂರು ನೀಡುವುದು,
ಮೈಸೂರಿನ ಕಾನೂನು ರಕ್ಷಕರು ಯಾರು? ಜನ ಸಾಮಾನ್ಯರಿಗೊಂದು ಕಾನೂನು, ಜನ ಪ್ರತಿನಿಧಿಗಳಿದೊಂದು ಕಾನೂನೆ..!?
ನ್ಯಾಯಲಯವು ಕೂಡಲೆ ಮದ್ಯೆ ಪ್ರವೇಶಿಸಿ ಜಿಲ್ಲಾಡಳಿತಕ್ಕೆ ಜನ ಪ್ರತಿನಿಧಿಗಳಿಗೆ ಛೀಮಾರ ಹಾಕಲಿ ಎಂದು ಸಂದೇಶ್ ಕೋರಿದ್ದಾರೆ.
