ಮೈಸೂರು: ಮೈಸೂರಿನ ಜೆ ಎಲ್ ಬಿ ರಸ್ತೆ ಮುಡಾ ಆವರಣದಲ್ಲಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ತಾತಿ ನಾಯ್ಡು ಮಾತನಾಡಿ, ಬ್ಯಾಂಕ್ ನಡೆದುಬಂದ ದಾರಿ, ಅದರ ಸಾಧನೆಗಳನ್ನು ಅಂಕಿ ಅಂಶಗಳ ಸಹಿತ ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ
ತಾತಿನಾಯ್ಡು ಅವರನ್ನು ಸನ್ಮಾನಿಸಿ ಮಾತನಾಡಿದ ಸಮಾಜಸೇವಕರಾದ ಕೆ. ರಘುರಾಮ್ ವಾಜಪೇಯಿ ಅವರು, ಬ್ಯಾಂಕ್ ನ ಕಾರ್ಯವೈಖರಿ, ಅದರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭಾಶಯ ಕೋರಿದರು.
ಅಲ್ಲದೆ ಬ್ಯಾಂಕ್ ನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಅಸಿಸ್ಟೆಂಟ್ ಮ್ಯಾನೇಜರ್ ಅನ್ನಪೂರ್ಣ ಹಾಗೂ ಸಿಬ್ಬಂದಿಗಳಾದ ಜಾಹ್ನವಿ, ಸೋಮ ಸುಂದರ್, ಸತೀಶ್ ಅವರುಗಳನ್ನು ಕೆ. ರಘುರಾಮ್ ವಾಜಪೇಯಿ ಗೌರವಿಸಿದರು.
ಈ ವೇಳೆ ಹಿರಿಯ ಪತ್ರಕರ್ತರಾದ ಹೊಮ್ಮ ಮಂಜುನಾಥ್, ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ವಿಕ್ರಂ ಅಯ್ಯಂಗಾರ್, ಕೆ.ಎಂ. ನಿಶಾಂತ್, ಎಸ್. ಎನ್. ರಾಜೇಶ್, ಧನುಷ್, ವಿನಯ್ ಕುಮಾರ್ ಮತ್ತಿತರರು ಹಾಜರಿದ್ದರು.
