ಮೈಸೂರು: ಶ್ರೀ ಶಂಕರ ಜಯಂತಿ ಅಂಗವಾಗಿ ಚಾಮರಾಜಪುರಂ ನಲ್ಲಿರುವ ಶ್ರೀ ಪ್ರಸನ್ನ ವಿಶ್ವೇಶ್ವರಸ್ವಾಮಿ ದೇವಸ್ಥಾನದ ವತಿಯಿಂದ ಶ್ರೀ ಶಂಕರಾಚಾರ್ಯರ ರಥಯಾತ್ರೆ ಹಮ್ಮಿಕೊಳ್ಳಲಾಯಿತು.
ಚಾಮರಾಜಪುರಂ, ಕೃಷ್ಣಮೂರ್ತಿಪುರಂ, ಲಕ್ಷ್ಮಿಪುರಂ ಮತ್ತು ಜಯನಗರ ಬಡಾವಣೆಯ ಮುಖ್ಯಬೀದಿಗಳಲ್ಲಿ ಸಾಗಿದ ಶ್ರೀಶಂಕರಾಚಾರ್ಯರ ರಥಯಾತ್ರೆಯಲ್ಲಿ ಪುರೋಹಿತರ ವೇದಬಳಗ, ಮಹಿಳಾ ಭಜನಾ ತಂಡ, ನಾದಸ್ವರ, ಮಂಗಳಾವಾದ್ಯ ಜನರ ಗಮನ ಸೆಳೆಯಿತು,
ಶ್ರೀಶಂಕರ ರಥಯಾತ್ರೆಯಲ್ಲಿ
ಎಂ ಎನ್ ಜಯರಾಮ್, ಶ್ರೀಮಧು, ಮೋಹನ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಬಿ.ಎನ್ ಜಯರಾಮ್, ನಂಜುಂಡಸ್ವಾಮಿ, ಮಂಜುನಾಥ್, ಮುರಳಿ ಮತ್ತಿತರರು ಪಾಲ್ಗೊಂಡಿದ್ದರು.
