ನಂಜನಗೂಡು: ನಂಜನಗೂಡು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯುನ್ಮಾನ ಉಪನ್ಯಾಸಕರಾದ
ಪವರ್ ಚಂದು ವಿ ಅವರಿಗೆ ಪ್ರಾಂಶುಪಾಲರಾಗಿ ಪದೋನ್ನತಿ ಸಿಕ್ಕಿದೆ.
ವಿದ್ಯುನ್ಮಾನ ಉಪನ್ಯಾಸಕರಾಗಿ ಸರ್ಕಾರಿ ಪದಪೂರ್ವ ಕಾಲೇಜಿನಲ್ಲಿ 20 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದರು. ಈಗ ಪ್ರಾಂಶುಪಾಲರಾಗಿ ಪದೋನ್ನತಿ ಪಡೆದು ಕೊಪ್ಪಳ ಜಿಲ್ಲೆಯ ಹನುಮಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆಯಾಗಿದ್ದಾರೆ.

ಹಾಗಾಗಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಪವರ್ ಚಂದು ವಿ ಅವರಿಗೆ ಸನ್ಮಾನಿಸಿದರು.

ಈ ವೇಳೆ ಉಪನ್ಯಾಸಕರಾದ ಎನ್. ನಾಗರಾಜು, ಡಾ.ಟಿ.ಕೆ.ರವಿ,ಹರೀಶ್, ಸುಲೋಚನ ಮಿಲ್ಟನ್, ಹರ್ಷಿತ್ ನಿಂಗಯ್ಯ, ಮಹಾದೇವಸ್ವಾಮಿ, ದಿವ್ಯ ಮತ್ತಿತರರು ಕೂಡಾ ಅಭಿನಂದಿಸಿದರು.