ಮೈಸೂರು,ಏ.2: ಸೇವೆಯಿಂದ ನಿವೃತ್ತಿ ಗೊಳ್ಳುವ ಅಧಿಕಾರಿಗಳು, ಸಿಬ್ಬಂದಿಗೆ ಬೀಳ್ಕೊಡುಗೆ ನೀಡುವುದು ಸರ್ವೇಸಾಮಾನ್ಯ, ಆದರೆ ಮೈಸೂರಿನ ಪೊಲೀಸರು ತಮಗೆ ಸೇವೆ ನೀಡಿದ ವಾಹನವನ್ನು ಮನುಷ್ಯರಂತೆ ನಡೆಸಿಕೊಂಡು ಮಾದರಿಯಾಗಿದ್ದಾರೆ.
ಸೇವೆಯಿಂದ ನಿವೃತ್ತಿಗೊಂಡ ಗರುಡ ವಾಹನಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಡಲಾಗಿದೆ.
ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಗರುಡಾ ವಾಹನವನ್ನ ಹೂವಿನ ಹಾರದಿಂದ ಅಲಂಕರಿಸಿ ಅದರ ಸೇವೆಯ ದಿನಗಳನ್ನ ಸ್ಮರಿಸಿದ್ದಾರೆ.
15 ವರ್ಷಗಳ ಕಾಲ ಸೇವೆ ಸಲ್ಲಿಸಿದ ವಾಹನಕ್ಕೆ ಪೊಲೀಸ್ ನಿರೀಕ್ಷಕರಾದ ಕೆ.ಆರ್. ರಘು , ಪಿಎಸ್ಐ ಗಳಾದ ಜೈಕೀರ್ತಿ, ಪ್ರಭು ಮತ್ತು ಇತರೆ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟರು.ನಿಜಕ್ಕೂ ಇದು ಹೃದಯತುಂಬಿ ಬಂದ ಕ್ಷಣವಾಗಿತ್ತು.
ವಿವಿದ ಠಾಣೆಗಳಲ್ಲಿ ಸೇವೆ ಸಲ್ಲಿಸಿದ 39 ಗರುಡಾ ವಾಹನಗಳು ಸೇವೆಯಿಂದ ನಿವೃತ್ತಿಯಾಗಲಿವೆ.