ಮೈಸೂರು: ಭಗವಾನ್ ಮಹಾವೀರರು ಅಹಿಂಸೆಯ ಪ್ರತಿಪಾದಕರಾಗಿದ್ದು ವಿಶ್ವದಲ್ಲಿ ಶಾಂತಿ ಮತ್ತು ಅಹಿಂಸೆ ಬಯಸಿ ತ್ಯಾಗ ತಪಸ್ಸು ಮಾಡಿರುವರು, ಈ ಆಧುನಿಕ ಕಾಲದಕ್ಲಿ ನಾವೆಲ್ಲ ಮಹನೀಯರ ತತ್ವಾದರ್ಶನವನ್ನು ಅಳವಡಿಸಿಕೊಂಡು ಅಹಿಂಸಾ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು.
ನಗರದ ಚಾಮುಂಡಿಪುರಂನಲ್ಲಿರುವ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿರುವ ಭಗವಾನ್1008 ಶ್ರೀ ಪಾಶ್ವನಾಥ ಜಿನ ಮಂದಿರದಲ್ಲಿ ಜೈನ ಬ್ರಾಹ್ಮಣ ಸ್ವಯಂಸೇವಾ ಸ್ನೇಹ ಬಳಗದ ಆಶ್ರಯದಲ್ಲಿ ಭಗವಾನ್ ಶ್ರೀ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ ಆಚರಿಸಿದ ವೇಳೆ ಮಹಾವೀರ ಸ್ವಾಮಿ ತೀರ್ಥಂಕರರ ಉತ್ಸವಕ್ಕೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮ.ವಿ ರಾಮಪ್ರಸಾದ್ ಅವರೊಂದಿಗೆ
ಚಾಲನೆ ನೀಡಿ ಶ್ರೀವತ್ಸ ಮಾತನಾಡಿದರು.
ಮಹಾವೀರದ ತತ್ವ ದರ್ಶನವನ್ನು ನಾವೆಲ್ಲ ಪಾಲಿಸೋಣ ಎಂದು ಕರೆ ನೀಡಿದರು.
ಇದೇ ವೇಳೆ 1008 ಪಾಶ್ವನಾಥ ತೀರ್ಥಂಕರರಿಗೆ ಹಾಗೂ ಮಹಾವೀರ ಸ್ವಾಮಿ ತೀರ್ಥಂಕರರಿಗೆ ನವ ಕಳಸ ಪಂಚಾಮೃತ ಅಭಿಷೇಕ ಪೂಜೆ
ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್,ಜೈನ್ ಬ್ರಾಹ್ಮಣ ಸ್ವಯಂಸೇವಾ ಸ್ನೇಹ ಬಳಗದ ಅಧ್ಯಕ್ಷರಾದ ಸಂಜೀವ್ ಕುಮಾರ್, ಕಾರ್ಯದರ್ಶಿಗಳಾದ ಮೀನಾಶ್ರೀ, ರವಿಕಾಂತ್, ಕುಮಾರ್, ನರೇಂದ್ರ ಕುಮಾರ್, ಸ್ವರೂಪ್, ಸುಧಾಕರ್, ಶಿಲ್ಪ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.
