ಬೆಳಗಾವಿ: ಡಿ ಕೆ.ಶಿವಕುಮಾರ್ ಮುಖ್ಯ ಮಂತ್ರಿ ಆಗ್ತಾರೋ ಬಿಡ್ತಾರೊ ಗೊತ್ತಿಲ್ಲ.ಆದರೆ ಬಗೆಗೆ ದಿನಕ್ಕೊಂದು ಹೇಳಿಕೆಗಳು ಚರ್ಚೆ ಹುಟ್ಟು ಹಾಕುತ್ತಿರುವುದಂತೂ ಸತ್ಯ.
ಬೆಳಗಾವಿ ಅಧಿವೇಶನದ ಎರಡನೇ ದಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕುರಿತು ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮುಖ್ಯಮಂತ್ರಿ ಎಂದು ಹೇಳಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.
ಚನ್ನರಾಜ ಹಟ್ಟಿಹೊಳಿ ಜಾಲತಾಣದಲ್ಲಿ ಈ ರೀತಿ ಬರೆದುಕೊಂಡಿದ್ದು ಆಕಸ್ಮಿಕವಾಗಿ ಏನಲ್ಲ, ಜಾಣತನ ತೋರಿದ್ದಾರೆ ಎಂದು ರಾಜಕೀಯ ನಾಯಕರು ಮಾತನಾಡುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ಬಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅವರ ಸಹೋದರ ಗುರುತಿಸಿಕೊಂಡು ಡಿಕೆಶಿ ಮುಖ್ಯಮಂತ್ರಿ ಗಾದಿಗೆ ಸಪೋರ್ಟ್ ನೀಡುತಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣದ ತಮ್ಮ ಬರಹವನ್ನು ನಂತರ ಬದಲಾಯಿಸಿರುವ ಚನ್ನರಾಜ ಹಟ್ಟಿಹೊಳಿ ನಂತರ ಉಪ ಮುಖ್ಯಮಂತ್ರಿ ಎಂದು ಬರೆದುಕೊಂಡು ತೇಪೆ ಹಾಕಿದ್ದಾರೆ.
ಆದರೆ ಅವರು ಒಮ್ಮೆ ಬರೆದದ್ದು ವೈರಲ್ ಆಗಿಬಿಟ್ಟಿದೆ!
ಡಿಕೆಶಿಯನ್ನು ಸಿಎಂ ಎಂದು ಬರೆದಚನ್ನರಾಜ ಹಟ್ಟಿಹೊಳಿ!