ಧಾರವಾಡ: ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆ ವತಿಯಿಂದ ಧಾರವಾಡ ರೈಲು ನಿಲ್ದಾಣದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಕನ್ನಡ ರಾಜ್ಯೋತ್ಸವವನ್ನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾ.ಹ ಕೊಂಡಕೇರ,ಉಪಾಧ್ಯಕ್ಷ ಮಹೇಶ ಎಸ್ ತಳವಾರ,ಖಜಾಂಚಿ ಶಿವರಾಜ ಮರಿ ಉಜ್ಜಪ್ಪನವರ,ಎಸ್ ಎಸ್ ಇ ಶಿವಾಜಿ ಮಾಯೆಕರ್, ಸಂಘದ ಸದಸ್ಯರಾದ ಹನುಮಂತ ಅಡಗಲ್,ಮಂಜುನಾಥ ಮುತ್ತಣ್ಣವರ,ಸುಬ್ಬಣ್ಣ ಬಳ್ಳಾರಿ,ಪ್ರದೀಪ್ ಕಾಂಬ್ಳೆ ಸೇರಿದಂತೆ ಅನೇಕ ಕನ್ನಡ ಪ್ರೇಮಿಗಳು, ಹಿರಿಯರು ಉಪಸ್ಥಿತರಿದ್ದರು.
