ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಉಮ್ಮತ್ತೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಸುಳ್ಳು 11-ಬಿ ಖಾತೆ ಸೃಷ್ಟಿಸಿ ತಮಗೆ ಸೇರಿದ ಸ್ವತ್ತನ್ನು ಯಾರೋ ಮೂರನೆ ವ್ಯಕ್ತಿಗೆ ‘ಬಿ’ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿ ಸ್ವತ್ತಿನ ಮಾಲೀಕರು ಪ್ರತಿಭಟನೆ ನಡೆಸಿದರು.
ಸ್ವತ್ತಿನ ಮಾಲೀಕ ಮಣಿಪುತ್ರ ಮತ್ತು ಅವರ ಸಹೋದರ ಪ್ರಶಾಂತ್ ಮತ್ತಿತರರು ನಡೆಸಿದ ಪ್ರತಿಭಟನೆಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತಿತರರು ಬೆಂಬಲ ನೀಡಿದರು.
ಹುಣಸೂರು ತಾಲ್ಲೂಕು,
ಹನಗೋಡು ಹೋಬಳಿ 2ನೇ ಪಕ್ಷಿರಾಜಪುರ ಗ್ರಾಮದ ಮಣಿಪುತ್ರ ಬಿನ್ ಲೇಟ್: ಶುದ್ದರಾಜು ಅವರಿಗೆ ,ಸಂತರಾಜ್ ಮತ್ತು ಅಕ್ಕ ಮನಿಲಾ ರವರಿಗೆ ಸೇರಿದ ಸ್ವತ್ತನ್ನು 3ನೇ ವ್ಯಕ್ತಿಗೆ ಅಂದರೆ ನತಾನಿಯಲ್ ಬಿನ್ ಲೇಟ್: ಜೈಶಂಕರ್ ರವರಿಗೆ ಯಾವುದೇ ಹಕ್ಕುಬಾಧ್ಯತೆ ಇಲ್ಲದಿದ್ದರೂ ಸಹ ಉಮ್ಮತ್ತೂರು ಗ್ರಾಮ ಪಂಚಾಯಿತಿ ಪಿ.ಡಿ.ಒ. ಮಹದೇವ ರವರು ಯಾವುದೇ ಆರ್.ಡಿ. ವಂಶವೃಕ್ಷ ಪಡೆಯದೆ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಕೊಟ್ಟಿದ್ದಾರೆ, ಸದರಿ ಸ್ವತ್ತನ್ನು ‘ಬಿ’ ಖಾತೆ ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ. ‘ಬಿ’ ಖಾತೆ ದಾಖಲು ಮಾಡಲು ನನ್ನ ಅಕ್ಕ ಮನಿಲಾ ಅಥವಾ ನನ್ನ ಭಾವ ಸಂತರಾಜು ರವರ ಹೆಸರಿನಲ್ಲಿ ರೆವಿನ್ಯೂ ಆರ್.ಟಿ.ಸಿ. ಇರುವುದಿಲ್ಲ. ನನ್ನ ಹೆಸರಿಗೆ ವಿಲ್ ದಾಖಲಾಗಿದ್ದರೂ ಸಹ ಪರಿಗಣಿಸದೆ ಸುಳ್ಳು ಖಾತೆ ಸೃಷ್ಟಿಸಿರುತ್ತಾರೆ. ಇದರ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಪ್ರಶಾಂತ್ ಅವರು ಮಾಧ್ಯಮಗಳಿಗೆ ತಿಳಿಸಿದರು.

ಖಾತೆ ವಜಾ ಮಾಡಬೇಕು ಹಾಗೂ ಭ್ರಷ್ಟಾಚಾರ ಎಸಗಿರುವ ಪಿ.ಡಿ.ಒ ಮಹದೇವ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಶಾಂತ್ ಆಗ್ರಹಿಸಿದ್ದಾರೆ.