ಮೈಸೂರು: ಹಿಂದುತ್ವ ಅವನತಿ ಕಡೆ ಸಾಗುತ್ತಿದ್ದಾಗಗ ತತ್ವ, ಸಂದೇಶಗಳ ಮೂಲಕ ಹಿಂದುಗಳನ್ನು ಜಾಗೃತಿ ಗೊಳಿಸಿದ ದಾರ್ಶನಿಕರು ಶ್ರೀ ಶಂಕರ, ರಾಮಾನುಜಾ ಚಾರ್ಯರು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಬಣ್ಣಿಸಿದರು.
ತಮ್ಮದೇ ಆದ ದಾರ್ಶನಿಕತೆ
ಕಟ್ಟಿಕೊಟ್ಟ ದೈವ ಸಂಭೂತರು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಹೇಳಿದರು.

ನಗರದ ಸರಸ್ವತಿಪುರಂ ಪಂಪಾಪತಿ ರಸ್ತೆಯಲ್ಲಿರುವ ಸಾನಿಧ್ಯ ವೃದ್ಧಾಶ್ರಮದಲ್ಲಿ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು ಹಾಗೂ
ಶ್ರೀ ರಾಮಾನುಜಾಚಾರ್ಯರ
ಜಯಂತಿ ಅಂಗವಾಗಿ ಹಿರಿಯ ನಾಗರಿಕರಿಗೆ ದಿನಸಿ ಸಾಮಗ್ರಿ, ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.
ಶಂಕರಾಚಾರ್ಯರು ಆದಿಶಂಕರ ಎಂದೆ ಗುರುತಿಸಲ್ಪಟ್ಟವರು. ಏಳನೇ ವಯಸ್ಸಿನಲ್ಲೇ ವೇದಗಳ ಅಧ್ಯಯನಕ್ಕಾಗಿ ಮನೆ ಬಿಟ್ಟು ಹೊರಟ ಶ್ರೀ ಶಂಕರರು ಅದ್ವೈತ ಸಿದ್ದಾಂತ ಪ್ರತಿಪಾದಿಸಿದರು ಎಂದು ತಿಳಿಸಿದರು.

ಶ್ರೀ ಪೆರಂದೂರಿ ನಲ್ಲಿ ಜನಿಸಿದ ಶ್ರೀ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ದಾಂತ ಸಾರಿದರು ಈ ಇಬ್ಬರು ಮಹನೀಯರು ತಮ್ಮ ಕಾಲಾವಧಿಯಲ್ಲಿ ಹಿಂದೂ ಧರ್ಮಕ್ಕಾಗಿ ಲೋಕ ಸಂಚಾರ ಮಾಡಿದರು.ನಾವೆಲ್ಲಾ ಇದನ್ನು ಅನುಸರಿಸಬೇಕು ಎಂದು ವಿಕ್ರಮ್ ಅಯ್ಯಂಗಾರ್ ಕರೆ ನೀಯ.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ,ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಸಾನಿಧ್ಯ ವೃದ್ಧಾಶ್ರಮದ ಚಂದ್ರಶೇಖರ್, ಭುವನೇಶ್ವರಿ,ಗಾಯಕ ಯಶ್ವಂತ್ ಕುಮಾರ್,ಛಾಯಾ, ಹಿರಿಯ ಕ್ರೀಡಾಪಟು ಮಹಾದೇವ್, ಕ್ರೀಡಾ ತರಬೇತಿದಾರ ಜಗದೀಶ್, ಮಹೇಶ್, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಹಾಜರಿದ್ದರು.