ಬೆಂಗಳೂರು: ಬೆಂಗಳೂರಿನ ಬಸವ ಯೋಗ ಆಶ್ರಮದ ವತಿಯಿಂದ ಡಿಸೆಂಬರ್ 29 ರಂದು ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಎರಡು ಗಂಟೆವರೆಗೆ ಗುರು ವಂದನೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಬೆಂಗಳೂರಿನ ನೆಲಮಂಗಲ ರಸ್ತೆ, ಲಕ್ಷ್ಮಿಪುರ ಬಸವಯೋಗ ಆಶ್ರಮದಲ್ಲಿ ನಡೆಯಲಿದೆ.
ಗುರುವಂದನೆ ಕಾರ್ಯಕ್ರಮವನ್ನು ಶಿವಶರಣ ಉರಿಲಿಂಗ ಪೆದ್ದಿಗಳು ನಿರ್ವಹಿಸುವರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಅಲ್ಲಮಪ್ರಭು ಸ್ವಾಮೀಜಿ ವಹಿಸುವರು.
ಮೊದಲಿಗೆ ಬಸವ ಗುರು ಪೂಜೆ, ನಂತರ ಗುರು ವಂದನೆ, ತದನಂತರ ವಚನ ಮಥನ ನಡೆಯಲಿದ್ದು, ನಂತರ ಪ್ರವಚನ ನಡೆಯಲಿದೆ
