ಕೊಳ್ಳೇಗಾಲ: ನಿಮ್ಮನ್ನು ನಂಬಿ ಅಧಿಕಾರಿಗಳು ಕಡತಗಳಿಗೆ ಸಹಿ ಹಾಕುತ್ತಾರೆ ಅವರ ನಂಬಿಕೆಗೆ ಚ್ಯುತಿ ಬಾರದ ಹಾಗೆ ಕಾರ್ಯನಿರ್ವಹಿಸಿ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಕಾಶ್ ಅವರು ಸಿಬ್ಬಂದಿಗೆ ಸಲಹೆ ನೀಡಿದರು.
ಕೊಳ್ಳೇಗಾಲ ಜಿಲ್ಲಾ ಪಂಚಾಯತ್ ತಾಂತ್ರಿಕ ಉಪವಿಭಾಗಾದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಶಿವಹಾರೈಸಿದರು.ವರಿಗೆ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದವರು.
ಪ್ರಾರಂಭದಲ್ಲಿ ಉಪನ್ಯಾಸಕ ನಾಗಿ ವೃತ್ತಿ ಜೀವನ ಪ್ರಾರಂಭಿಸಿದ ನಾನು 2003 ರಲ್ಲಿ ಸಹಾಯಕ ಅಭಿಯಂತರನಾಗಿ ಇಂಜಿನಿಯರ್ ವೃತ್ತಿಗೆ ಸೇರಿ ಸಾಕಷ್ಟು ಕಡೆ ಕೆಲಸ ಮಾಡಿ ನಂತರ 2022 ರ ಡಿಸೆಂಬರ್ 16 ರಲ್ಲಿ ಇಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಅಧಿಕಾರ ವಹಿಸಿ ಕೊಂಡೆ ನಂತರ ನಾನು ಇದರ ಜೊತೆಗೆ ಚಾಮರಾಜನಗರ ಪ್ರಭಾರ ಕಾರ್ಯಪಾಲಕ ಅಭಿಯಂತರರಾಗಿ ಹಾಗೂ ಕೊಳ್ಳೇಗಾಲ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಯಾಗಿ ಒಟ್ಟೊಟ್ಟಿಗೆ ಕರ್ತವ್ಯ ನಿರ್ವಹಿಸಸಿದೆ ಎಂದು ಹೇಳಿದರು.
ಅದರಲ್ಲೂ ಕೊಳ್ಳೇಗಾಲ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುವಾಗ ಸಾಕಷ್ಟು ಸಮಸ್ಯೆ ಯಾಗುತ್ತಿತ್ತು ಎಂದು ಸ್ಮರಿಸಿದರು
ಕೊಳ್ಳೇಗಾಲ ತಾಂತ್ರಿಕ ಉಪವಿಭಾಗ ಕೊಳ್ಳೇಗಾಲ ಮತ್ತು ಹನೂರು 2 ತಾಲ್ಲೂಕುಗಳಲ್ಲಿ ಕೆಲಸ ಮಾಡ ಬೇಕಿತ್ತು. ಕೊನೆಯ ದಿನಗಳಲ್ಲಿ ಬೇರೆಕಡೆ ವರ್ಗಾವಣೆ ಮಾಡಿಸಿ ಕೊಳ್ಳಬೇಕೆಂಬ ಮನಸ್ಥಿತಿ ಇತ್ತು. ಆದರೆ ಪರಿಸ್ಥಿತಿ ಬಹಳ ಕಷ್ಟ ಇತ್ತು ಹೇಗೋ ಕೆಲಸ ಮಾಡಿ ಈಗ ನಿವೃತ್ತಿ ಹೊಂದಿದ್ದೇನೆ ಎಂದ ಅವರು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಸಾರ್ವಜನಿಕರ ಕೆಲಸಕ್ಕೆ ನ್ಯಾಯ ಒದಗಿಸಿ ಎಂದು ಸಿಬ್ಬಂದಿ ವರ್ಗಕ್ಕೆ ಮನವಿ ಮಾಡಿದರು.
ಯಳಂದೂರು ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ್ ಕುಮಾರ್ ಮಾತನಾಡಿ ನನಗೆ ಎಇಇ ಯಾಗಿ ಬಡ್ತಿ ಹೊಂದುವ ವೇಳೆ ಸಿ ಆರ್ ಸಿ ಬರೆದು ಕೊಡುವಂತೆ ಶಿವಪ್ರಕಾಶ್ ಅವರನ್ನು ಕೇಳಿಕೊಂಡಾಗ ಅವರು ಒಳ್ಳೆಯ ಮನಸ್ಸಿನಿಂದ ಬರೆದು ಕೊಟ್ಟರು, ಇದರಿಂದಾಗಿ ನನಗೆ ಇಂದು ಬಡ್ತಿ ಸಿಕ್ಕಿದೆ ಅವರ ಒಳ್ಳೆಯ ಮನಸ್ಥಿತಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು
ಸಮಾರಂಭದಲ್ಲಿ ನಿವೃತ್ತ ಇಂಜಿನಿಯರ್ ಆನಂದ್ ಮೂರ್ತಿ, ಯಳಂದೂರು ಎಇಇ ಸಂತೋಷ್ ಕುಮಾರ್, ಮಹದೇವ, ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ಗೋಪಾಲ್ ಕೃಷ್ಣ, ಸಿದ್ದಪ್ಪಾಜಿಗೌಡ, ಸಿದ್ದಯ್ಯ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಸಂಘಟನೆಗಳ ಮುಂಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.