ವಿದ್ಯಾರಣ್ಯ ಪುರಂ ಪೋಲಿಸರ ನಡೆಗೆ ತೇಜಸ್ವಿ ನಾಗಲಿಂಗ ಸ್ವಾಮಿ ಮೆಚ್ಚುಗೆ

ಮೈಸೂರು: ಮೈಸೂರಿನ ಜೆ ಪಿ ನಗರದ ವಿದ್ಯಾರಣ್ಯ ಪುರಂ ಪೋಲಿಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡೆಗೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಠಾಣೆಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ರಾತ್ರಿ ಸಮಯದಲ್ಲಿ ಕಾಲ್ನಡಿಗೆಯಲ್ಲಿ ಠಾಣೆಯ ವ್ಯಾಪ್ತಿಯಲ್ಲಿ ಬರುವ ನಿರ್ಜನ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವುದರಿಂದ ಪುಂಡು ಪೋಕರಿಗಳಿಗೆ ಭಯ ಬಂದಿದೆ.

ಆ‌ ಭಾಗದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಆಗದಂತೆ ಮತ್ತು ಸರಗಳ್ಳತನ ವಾಗದಂತೆ ಕ್ರಮ ವಹಿಸಿ ಗಸ್ತು ತಿರುಗುತ್ತಿರುವುದು ಸಾರ್ವಜನಿಕ ವಾಗಿ ಮೆಚ್ಚುಗೆ ಆಗುತ್ತಿದೆ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ವಿಶೇಷ ವಾಗಿ ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಗಸ್ತು ತಿರುಗುತ್ತಿರುವುದು ಮತ್ತು ಕಸ ವಿಲೇವಾರಿ ರಸ್ತೆಯಲ್ಲಿ ಗಸ್ತು ಮಾಡುತ್ತಿರುವುದು ಒಳ್ಳೆಯ‌ ಬೆಳವಣಿಗೆ. ಅಲ್ಲದೆ ಪೋಲಿಸರ ಈ ರೀತಿಯ ಕ್ರಮದಿಂದ ಸಾರ್ವಜನಿಕರಲ್ಲಿ ಇದ್ದ ಆತಂಕ ನಿವಾರಣೆ ಯಾಗಿದೆ ಎಂದು ತೇಜಸ್ವಿ ಹೇಳಿದ್ದು,ವಿದ್ಯಾರಣ್ಯ ಪುರಂ ಪೋಲಿಸ್ ಅಧಿಕಾರಿಗಳು ಮತ್ತು ‌ಸಿಬ್ಬಂದಿಯ ಕಾರ್ಯವೈಖರಿ ಗೆ ಸಂತಸ ವ್ಯಕ್ತಪಡಿಸಿದ್ದಾರೆ.