ರಷ್ಯಾ- ಉಕ್ರೇನ್​ ನಡುವೆ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ

ಉಕ್ರೇನ್: ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು ಶಾಂತಿ ಪ್ರಸ್ತಾವನೆಯನ್ನು ಎರಡು ರಾಷ್ಟ್ರಗಳು ಒಪ್ಪಿವೆ. ಆದರೆ, ಈ ಶಾಂತಿ ಪ್ರಸ್ತಾವಕ್ಕೆ ಸಹಿ ಹಾಕಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಿದ್ಧರಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರ ಪಟ್ಟಿದ್ದಾರೆ.
ಅಮೆರಿಕ ಆಡಳಿತದ ಶಾಂತಿ ಪ್ರಸ್ತಾವನೆಯನ್ನು ಮಾರ್ಪಡಿಸುವಂತೆ ಈ ಹಿಂದೆಯೂ ಕೂಡ ಉಕ್ರೇನ್​ ಒತ್ತಾಯಿಸಿತ್ತು. ಹಾಗಾಗಿ ತಿದ್ದುಪಡಿಯ ಬಳಿಕ ಪ್ರಸ್ತಾವನೆಯ ಮೇಲಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕ ಮತ್ತು ಉಕ್ರೇನ್ ಸಮಾಲೋಚಕರು ಮೂರು ದಿನಗಳ ಮಾತುಕತೆ ನಡೆಸಿದ ನಂತರವೂ ಝೆಲೆನ್ಸ್ಕಿ ಒಪ್ಪಿಗೆ ನೀಡಿಲ್ಲ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್​, ಉಕ್ರೇನ್ ನಾಯಕ ಮಾತುಕತೆಗಳು ಮುಂದುವರಿಯುವುದನ್ನು ತಡೆಹಿಡಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಝೆಲೆನ್ಸ್ಕಿ ನಮ್ಮ ಪ್ರಸ್ತಾವನೆಯನ್ನು ಇನ್ನೂ ಓದಿಲ್ಲ ಎಂಬುದು ನಿರಾಶೆಯಾಗುತ್ತಿದೆ. ಈ ಪ್ರಸ್ತಾವನೆಯನ್ನು ಅವರ ಜನರು ಮೆಚ್ಚಿದ್ದಾರೆ. ರಷ್ಯಾ ಪ್ರಸ್ತಾವನೆಗೆ ಒಪ್ಪಿದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
ಆದರೆ, ಈ ಪ್ರಸ್ತಾವಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಕೂಡ ಸಾರ್ವಜನಿಕವಾಗಿ ಅನುಮೋದನೆ ನೀಡಿಲ್ಲ.
ಫ್ಲೋರಿಡಾದಲ್ಲಿ ಉಕ್ರೇನಿಯನ್ ನಿಯೋಗದೊಂದಿಗೆ ಅಮೆರಿಕದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಝೆಲೆನ್ಸ್ಕಿ ಅವರಿಗೆ ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಝೆಲೆನ್ಸ್ಕಿ ಪೋಸ್ಟ್ ಹಾಕುದ್ದು,ಉಕ್ರೇನ್ ಶಾಂತಿ ಸಾಧಿಸಲು ಅಮೆರಿಕದೊಂದಿಗೆ ದೃಢನಿಶ್ಚಯ ಹೊಂದಿದೆ ಎಂದು ತಿಳಿಸಿದ್ದಾರೆ.

ರಷ್ಯಾ- ಉಕ್ರೇನ್​ ನಡುವೆ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ Read More

ಡಿಸೆಂಬರ್ ನಲ್ಲಿ ಭಾರತಕ್ಕೆ ಪುಟಿನ್ ಭಾರತ ಭೇಟಿ

ನವದೆಹಲಿ: ಡಿಸೆಂಬರ್ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬರಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ,ಅವರು 23 ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 4 ರಂಸು ಭಾರತಕ್ಕೆ ಆಗಮಿಸಲಿದ್ದಾರೆ.

ಭಾರತ ಭೇಟಿಯ ಸಮಯದಲ್ಲಿ ಪುಟಿನ್ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳ ಮೇಲೆ ಭಾರೀ ಸುಂಕ ವಿಧಿಸಿರುವುದರಿಂದ ಪುಟಿನ್ ಅವರ ಭಾರತ ಭೇಟಿ ಕುತೂಹಲ ಕೆರಳಿಸಿದೆ.

ಡಿಸೆಂಬರ್ ನಲ್ಲಿ ಭಾರತಕ್ಕೆ ಪುಟಿನ್ ಭಾರತ ಭೇಟಿ Read More

ಹಮಾಸ್‌ನ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ ಪುಟಿನ್

ಮಾಸ್ಕೊ: ಇಸ್ರೇಲ್ ವಿರುದ್ಧ 2023ರ ಅಕ್ಟೋಬರ್‌ನಲ್ಲಿ ಆರಂಭವಾದ ಕದನದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ರಷ್ಯಾದ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದ್ದು, ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಧನ್ಯವಾದ ಸಲ್ಲಿಸಿದ್ದಾರೆ.

ಬಿಡುಗಡೆಗೊಂಡ ರಷ್ಯಾ ನಾಗರಿಕರಾದ ಅಲೆಕ್ಸಾಂಡರ್ ಟ್ರುಫಾನೋವ್ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರನ್ನು ಪುಟಿನ್ ಬರಮಾಡಿಕೊಂಡು ಅಭಿನಂದಿಸಿದರು.

ಪ್ಯಾಲೆಸ್ಟೀನ್ ಜನರೊಂದಿಗೆ ರಷ್ಯಾ ಸುದೀರ್ಘ ಕಾಲ ಹೊಂದಿರುವ ಸೌಹಾರ್ದ ಸಂಬಂಧ ಹೊಂದಿರುವುದರಿಂದ ನೀವು ಇಲ್ಲಿಗೆ ಸುರಕ್ಷಿತವಾಗಿ ಮರಳಿದ್ದೀರಿ, ಮಾನವೀಯ ನೆಲೆಗಟ್ಟಿನಲ್ಲಿ ರಷ್ಯಾದ ನಾಗರಿಕರನ್ನು ಬಿಡುಗಡೆ ಮಾಡಿರುವ ಹಮಾಸ್‌ನ ನಾಯಕತ್ವಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪುಟಿನ್ ಹೇಳಿದ್ದಾರೆ.

2023ರ ಅ. 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ನಂತರ ಆರಂಭಗೊಂಡ ಕದನದಲ್ಲಿ ಈವರೆಗೂ ಸುಮಾರು 1,200 ಜನ ಮೃತರಾಗಿದ್ದು, 251 ಮಂದಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ.

ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ 50 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕುಟುಂಬದ ಹಿರಿಯ ವೈಟಲಿ ಟ್ರುಫನೋವ್‌ ದಾಳಿಯಲ್ಲಿ ಮೃತಪಟ್ಟಿದ್ದರು. ಅಪಹರಣಗೊಂಡು 53 ದಿನಗಳ ನಂತರ ತಾಯಿ, ಅಜ್ಜಿ ಹಾಗೂ ಗೆಳತಿಯನ್ನು ಬಿಡುಗಡೆ ಮಾಡಲಾಗಿತ್ತು.

ಅಲೆಕ್ಸಾಂಡರ್ ಅವರು 500 ದಿನಗಳ ಕಾಲ ಹಮಾಸ್ ಒತ್ತೆಯಾಳಾಗಿದ್ದರು. 2025ರ ಫೆ. 15ರಂದು ಘೋಷಿಸಲಾದ ಕದನವಿರಾಮದಲ್ಲಿ ಅವರು ಬಿಡುಗಡೆಗೊಂಡಿದ್ದರು.
ಅವರು ಏ.16 ರಂದು ರಾತ್ರಿ ರಷ್ಯಾ ತಲುಪಿದ್ದಾರೆ.

ಇಸ್ರೇಲ್‌ನಲ್ಲಿ ರಷ್ಯಾದ ಪೌರತ್ವ ಹೊಂದಿರುವವರು ನೆಲೆಸಿದ್ದಾರೆ. ಒತ್ತೆಯಾಳಾಗಿರುವ ಉಳಿದವರ ಬಿಡುಗಡೆಗೆ ನೆರವಾಗುವುದಾಗಿ ಪುಟಿನ್ ಭರವಸೆ ನೀಡಿದ್ದಾರೆ.

ಹಮಾಸ್‌ನ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ ಪುಟಿನ್ Read More