ಮೈಸೂರು: ಮೈಸೂರಿನ ಶ್ರೀರಾಮಪುರದ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಸರಸ್ವತಿ ಸಂಸ್ಕಾರ ಕೇಂದ್ರ ಹಮ್ಮಿಕೊಂಡಿದ್ದ ಶ್ಲೋಕ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಶ್ವ ಹಿಂದೂ ಪರಿಷತ್ ನ ಷಷ್ಠಿ ಪೂರ್ತಿ, ಸಂಸ್ಥಾಪನಾ ದಿನಾಚರಣೆ ಹಾಗೂ ಕೃಷ್ಣ ಜನ್ಮಾಷ್ಟಮಿ,ಅಯೋಧ್ಯಾ ಶ್ರೀರಾಮ ಮಂದಿರದ ಪ್ರಸಾದ ಹಾಗೂ ಸಪ್ತ ನದಿಗಳ ತೀರ್ಥ ವಿತರಣೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಸರ್ವ ಜಯಾನಂದ ಮಹಾರಾಜ್ ವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, ನಮ್ಮ ರಾಮಾಯಣ, ಮಹಾಭಾರತದ ಕಥೆಗಳಲ್ಲಿನ ಆದರ್ಶಗಳನ್ನ ನಮ್ಮ ಮಕ್ಕಳಿಗೆ ಕಲಿಸದಿದ್ದರೆ ಮುಂದೆ ರಾಮ ಕೃಷ್ಣರನ್ನೇ ಮರೆಯ ಬಹುದು ಎಂದು ತಿಳಿಸಿದರು.
ನಾವು ಇಂದು ಪ್ರಾಪಂಚಿಕ ವಸ್ತುಗಳ ಮೇಲೆ ಪ್ರೀತಿಯನ್ನು ಹೊಂದುತ್ತಿದ್ದೇವೆ ಆದರೆ ನಾವು ಪ್ರೀತಿಸ ಬೇಕಾದುದು ದೇವರನ್ನು ಎಂದು ತಿಳಿ ಹೇಳಿದರು.
ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ್ ಮಾತನಾಡಿ ಅಯೋಧ್ಯಾ ರಾಮಮಂದಿರದ ಹೋರಾಟದ ನೇತೃತ್ವವನ್ನು ವಹಿಸಿದ್ದ ವಿಶ್ವ ಹಿಂದೂ ಪರಿಷತ್ ರಾಮಮಂದಿರ ಲೋಕಾರ್ಪಣೆ ಮಾಡಿಸುವುದರಲ್ಲಿ ಪರಿಷತ್ ನ ಪರಿಶ್ರಮ ಅವಿಸ್ಮರಣೀಯ ಎಂದು ಮೆಚ್ವುಗೆ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ನ ವಿಭಾಗ ಕಾರ್ಯದರ್ಶಿ ವೆಂಕಟರಾಮ್ ಮಾತನಾಡಿ ಭಾರತದ ವಿಭಜನೆಯಿಂದ ಹಿಡಿದು ಇಂದಿನ ತನಕ ಹಲವು ಆತಂಕವನ್ನು ಭಾರತ ಎದುರಿಸುತ್ತಿದೆ ನಾವು ಸಂಘಟಿತರಾದರೆ ಮಾತ್ರ ಆತಂಕ ನಿವಾರಣೆ ಸಾಧ್ಯ ಎಂದು ತಿಳಿಸಿದರು.
ಸುಮಾರು 75 ಮಕ್ಕಳಿಗೆ ಶ್ಲೋಕ, ಸಂಸ್ಕಾರ, ಪುರಾಣದ ಕಥೆಗಳ ಒಂದು ತಿಂಗಳ ಶಿಬಿರ ಮಾಡಲಾಗಿತ್ತು ಶಿಬಿರದಲ್ಲಿ ಭಾಗವಹಿಸಿ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಂಸಾ ಪತ್ರ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಮಹೇಶ್ ಕಾಮತ್,
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುವೆಂಪು ನಗರ ವಸತಿ ಸಂಘ ಚಾಲಕ ಗಣೇಶ್ ಜಿ.ಎಸ್, ಮಹಾಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಪ್ಪ, ಮುರಳಿ, ಜಯರಾಂ, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ಆರ್. ಗಣೇಶ್,
ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಮಧುಶಂಕರ್, ಸಹಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು, ಜಯಶ್ರೀ ಶಿವರಾಂ, ಅಂಬಿಕಾ ಜೀವನ್, ಜನಾರ್ಧನ್ ರಾವ್, ಮಮತಾ, ಶೈಲಜಾ ನಾಗಸುದೀಂದ್ರ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.