ಮೈಸೂರು: ಕೆ ಆರ್ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಹೆಸರಿನಲ್ಲಿ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲು ಶಾಸಕರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂಧರ್ಭದಲ್ಲಿ ಕೆ ಆರ್ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ್ ರಾಜ ಅರಸು ಅವರು ಮಾತನಾಡಿ, ಶ್ರೀವತ್ಸ ಅವರು ಭಾರತೀಯ ಜನತಾ ಪಕ್ಷದ ತಳಮಟ್ಟದ ಬೂತ್ ಸಂಘಟನೆಯ ಕಾರ್ಯಕರ್ತರಾಗಿ ಯುವ ಮೋರ್ಚಾ ವಿಭಾಗದಿಂದ ಸಂಘಟಿಸಿ ಶಾಸಕರಾಗಿ ತಮ್ಮ ನಾಯಕತ್ವದಲ್ಲಿ ಸಾವಿರಾರು ಮಂದಿ ಮುಖಂಡರನ್ನ ಬೆಳೆಸಿದ್ದಾರೆ , ಮೂಡ ಭ್ರಷ್ಟಚಾರ ಪ್ರಕರಣ ಬಯಲಿಗೆ ತಂದು ಸರ್ಕಾರದ ಕೋಟ್ಯಾಂತರ ಆಸ್ಥಿಯನ್ನ ಮತ್ತು ಜನಸಾಮಾನ್ಯರ ತೆರಿಗೆ ಹಣವನ್ನ ಕಾಪಾಡಿದ್ದಾರೆ ಎಂದು ಬಣ್ಣಿಸಿದರು.
ನಂತರ ಬಿಜೆಪಿ ಮುಖಂಡ ಪ್ರದೀಪ್ ಕುಮಾರ್ ಅವರು ಮಾತನಾಡಿ ಸಾಂಸ್ಕೃತಿಕ ನಗರಿಗೆ ಸಂಸ್ಕಾರಯುತ ಮತ್ತು ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿಯಾಗಿ, ಮಾದರಿ ಜನಪ್ರತಿನಿಧಿಯಾಗಿ ಟಿ.ಎಸ್. ಶ್ರೀವತ್ಸ ಅವರು ಕಾರ್ಯಕರ್ತರ ಶಕ್ತಿಯಾಗಿದ್ದಾರೆ, ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರದಲ್ಲಿ ಟಿ.ಎಸ್. ಶ್ರೀವತ್ಸ ಅವರು ಸಚಿವರಾಗಬೇಕು ಮೈಸೂರಿನ ಅಭಿವೃದ್ಧಿಗಾಗಿ ಶಾಶ್ವತ ಯೋಜನೆಗಳನ್ನು ಜಾರಿಗೆ ತರಲು ಸಮರ್ಥರಾಗಿದ್ದಾರೆ ಎಂದು ತಿಳಿಸಿದರು.
ಜಯಶಂಕರ್, ಜಯರಾಮ್, ವಿಶ್ವೇಶ್ವರಯ್ಯ, ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಮ್ಯ ಉಮೇಶ್, ಬಿ ವಿ ಮಂಜುನಾಥ್. ಗೋಕುಲ್ ಗೋವರ್ಧನ್, ಕಿಶೋರ್, ಕೀರ್ತಿ, ಕೃಷ್ಣರಾಜ ಯುವ ಮೋರ್ಚಾ ಅಧ್ಯಕ್ಷ ಕೆ ಎಂ ನಿಶಾಂತ್, ರಾಜೇಶ್, ವಿನಯ್, ಪಂಚ್ಯಾಜನ್ಯ ಟಿ.ಪಿ. ಮಧುಸೂಧನ್, ಅಜಯ್ ಶಾಸ್ತ್ರಿ,ಡಿ.ಪಿ ಸುರೇಶ್, ಹರೀಶ್, ಉಪೇಂದ್ರ, ಜಗದೀಶ್, ಧನುಷ್, ಕನಕಗಿರಿ ಹರೀಶ್, ಅಂಕಿತ್, ಬೇಕರಿ ಚಂದ್ರು, ಚಂದ್ರಕಲಾ, ಲತಾ ಬಾಲಕೃಷ್ಣ, ಮಧುಶ್ರೀ, ಕವಿತಾ, ಲತಾ ಮುಂತಾದವರು ಹಾಜರಿದ್ದರು.

