ದುರ್ಗಾ ಫೌಂಡೇಶನ್ ನಿಂದ ಪವನ್ ಸಿದ್ದರಾಮ ಅವರಿಗೆ ಅಭಿನಂದನೆ ಸಲ್ಲಿಕೆ

Spread the love

ಮೈಸೂರು: ಕರ್ನಾಟಕ ರಾಜ್ಯ ಸರ್ಕಾರದ ಮೈಸೂರು ಕೇಂದ್ರ ಕಾರಾಗೃಹ ಸಂದರ್ಶಕ ಮಂಡಳಿಯ ಸದ್ಯಸರಾಗಿ ನೇಮಕವಾದ ಪವನ್ ಸಿದ್ದರಾಮ ಅವರಿಗೆ ದುರ್ಗಾಪೌಂಡೇಶನ್ ಅಭಿನಂದನೆ ಸಲ್ಲಿಸಿದೆ.

ಮೈಸೂರು ಕೇಂದ್ರ ಕಾರಾಗೃಹ ಸಂದರ್ಶಕ ಮಂಡಳಿಯ ಸದ್ಯಸರಾಗಿ ನೇಮಕರಾದ ಪವನ್ ಸಿದ್ದರಾಮು ಅವರು ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಕಾರ್ಯದರ್ಶಿ ಕೂಡಾ ಆಗಿದ್ದಾರೆ.

ಶ್ರೀ ದುರ್ಗಾಪೌಂಡೇಶನ್ ವತಿಯಿಂದ ಖಾಸಗಿ ಹೋಟೆಲ್ ನಲ್ಲಿ ಸಮಾರಂಭ ಹಮ್ಮಿಕೊಂಡು ಪವನ್ ಸಿದ್ದರಾಮ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ವೇಳೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ದಿ. ಗ್ರಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ವರಲಕ್ಷ್ಮಿ ಅಜಯ್, ರವಿಚಂದ್ರ, ಮಂಜುನಾಥ್, ರಾಘವೇಂದ್ರ ಜಿ ,ಎಸ್ ಎನ್ ರಾಜೇಶ್ ಮತ್ತಿತರರು ಅಭಿನಂದನೆ ಸಲ್ಲಿಸಿದರು.