ಮನೆ ದೇವರ ಪರಿಕಲ್ಪನೆ ಜಾನಪದರಿಂದ ಹುಟ್ಟಿದ್ದು:ಡಾ ಜಾನಪದ ಎಸ್ ಬಾಲಾಜಿ

Spread the love

ಹುಬ್ಬಳ್ಳಿ: ಮನೆ ದೇವರ ಪರಿಕಲ್ಪನೆ ಜಾನಪದರಿಂದ ಹುಟ್ಟಿದ್ದುದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಹುಬ್ಬಳ್ಳಿ ತಾಲೂಕಿನ ನೂಲ್ವಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಹುಬ್ಬಳ್ಳಿ ತಾಲೂಕು ಘಟಕ ಏರ್ಪಡಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರು ಹಾಗೂ ವಚನಕಾರರು ಮನೆದೇವರ ಸಾಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು, ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನ ಇರುತ್ತದೆ, ಬುಡಕಟ್ಟು ಪ್ರದರ್ಶನ ಕಲೆಗಳು ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿನಲ್ಲಿದ್ದು, ಸರ್ಕಾರ ಈ ಬಗ್ಗೆ ಹೆಚ್ಚು ಅಲೆಮಾರಿಗಳು ಹಾಗೂ ಬುಡಕಟ್ಟು ಸಮುದಾಯದವರಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡುವ ಮೂಲಕ ಅವರ ಸಂಪ್ರದಾಯ ಮತ್ತು ಕಲಾಪ್ರಾಕಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂದು ಅಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಬೆಂತೂರ ಅಧ್ಯಕ್ಷರು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕುಂದಗೋಳ ಮಾತನಾಡಿ ಬುಡಕಟ್ಟು ಸಮುದಾಯದಲ್ಲಿ ಸಾಮರಸ್ಯ ಹಾಗೂ ಐಕ್ಯತೆಯ ಭಾವನೆಗಳು ಹೆಚ್ಚಾಗಿರುತ್ತದೆ, ಅವರಿಂದ ಒಗ್ಗೂಡಿಸಿಕೊಂಡು ಕಲಿಯ ಬಹುದು ಎಂದು ತಿಳಿಸಿದರು.

ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನಪದ ಸಾಹಿತ್ಯದ ಮೂಲವೇ ಬುಡಕಟ್ಟು ಸಮುದಾಯದವರು, ಅವರನ್ನು ಯುವ ಜನಾಂಗ ಅನುಕರಣೆ ಮಾಡುವ ಮೂಲಕ ಸಹಕರಿಸಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರು ಜಿ ಹೆಚ್ ಕಟ್ಟಿ ಮಾತನಾಡಿ ಮುಂದಿನ ಪೀಳಿಗೆ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಭವ
ಪರಿಚಯ ಮಾಡಬೇಕೆಂದರೆ
ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್ ಶಿವಳ್ಳಿ , ಜನಪದ ಕಲಾವಿದ ಪ್ರಶಾಂತ್ ತಡಸೂರ, ಗ್ರಾಮ ಪಂಚಾಯತಿ ಸದಸ್ಯ ದೇವನಗೌಡ ಮಾ ಧರ್ಮಗೌಡ, ಕಾರವೆ ಹುಬ್ಬಳ್ಳಿ ತಾಲೂಕ ಅಧ್ಯಕ್ಷ ಗಂಗನಗೌಡ ಶಿ ನರಗುಂದ,
ಕಾಲೇಜಿನ ಉಪನ್ಯಾಸಕರಾದ ಜಿ ಬಿ ತಾಶಿಲ್ದಾರ್, ಎಸ್ ಎಸ್ ಹಿರೇಗೌಡ್ರು, ಎಂ ಎಂ ಹಾದಿಮನಿ, ಕೆ ಎಂ. ಮಲ್ಲಿಕಾರ್ಜುನಯ್ಯ, ಎಚ್ ಡಿ ಗುಂಡಪ್ಪಲ್ಲಿ, ಧಾರವಾಡ ಜಿಲ್ಲಾ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ ಸದಾನಂದ, ಕಲಘಟಗಿ ತಾಲೂಕ ಅಧ್ಯಕ್ಷ ನಿಂಗಪ್ಪ ದೊಡ್ಡ ಪೂಜಾರ್, ಕಲಾವಿದ ಶ್ರೀ ಪ್ರಶಾಂತ್ ಎಮ್ ತಡಿಸನ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಾಗತವನ್ನು ತಾಲೂಕ ಅಧ್ಯಕ್ಷ ಈಶ್ವರಪ್ಪ ಕ ಹೊ ಳಮ್ಮನವರ್, ವಂದನಾರ್ಪಣೆ ಕಾರ್ಯದರ್ಶಿ ಸಂತೋಷ್ ಕುಮಾರ್ ಬಡಿಗೇರ, ನಿರೂಪಣೆಯನ್ನು ಮಂಜುನಾಥ ಐ ಕೆ, ನಿರ್ವಹಿಸಿದರು.