ಬೆಂಗಳೂರು: ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು,ಅಭಿಮಾನಿಗಳು,ಮುಖಂಡ ರ ಸಂಭ್ರಮ,ಸಡಗರ ಮನೆ ಮಾಡಿತ್ತು.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜೇಂದ್ರ ಅವರ ಹುಟ್ಟು ಹಬ್ಬ ಆಚರಣೆಗಾಗಿ ವಿಶೇಷ ಅತಿಥಿಯನ್ನು ಕರೆಯಲಾಗಿತ್ತು.
ವಿಶೇಷ ಅತಿಥಿ ಅಂದರೆ ಕುರಿಮರಿ.ವಿಜಯೇಂದ್ರ ಅವರ ಅಭಿಮಾನಿಗಳು ಪುಟ್ಟ ಮುದ್ದಾದ ಕುರಿಮರಿ ಹಾಗೂ ಕಂಬಳಿಯನ್ನು ಉಡುಗೊರೆಯಾಗಿ ನೀಡಿ ಜನುಮದಿನದ ಶುಭ ಕೋರಿದರು.
ಉಡುಗೊರೆಯನ್ನು ಸಂತಸದಿಂದ ಸ್ವೀಕರಿಸಿದ ವಿಜಯೇಂದ್ರ ಕರಿಕಂಬಳಿಯನ್ನು ಹೆಗಲ ಮೇಲೆ ಹಾಕಿಕೊಂಡು ಖುಷಿ ಪಟ್ಟರು.ನಂತರ ಮುದ್ದು ಮರಿಗೆ ಹಾಲು ಕುಡಿಸಿ ಪ್ರೀತಿ ತೋರಿದರು.
