ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿಆನಂದ್ ಗೌಡರ ಸರಳ ಜನ್ಮದಿನ ಆಚರಣೆ

Spread the love

ಮೈಸೂರು: ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಬಳಗದ ನಗರ ಅಧ್ಯಕ್ಷರಾದ ಆನಂದ್ ಗೌಡ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು.

ನಗರದ ಬಂಬೂ ಬಜಾರ್ ಮೇದರ ಬ್ಲಾಕ್ ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆನಂದ್ ಗೌಡರ ಹುಟ್ಟುಹಬ್ಬವನ್ನು ಎಚ್ ಡಿ ಕುಮಾರಸ್ವಾಮಿ ಅಭಿಮಾನ ಬಳಗದವರು ಸರಳವಾಗಿ ಆಚರಿಸಿದರು.

ಮೊದಲಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಆನಂದಗೌಡರು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಈ ವೇಳೆ ಜೆಡಿಎಸ್ ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಮಂಜಣ್ಣ, ನಗರ ಹಿರಿಯ ಉಪಾಧ್ಯಕ್ಷರಾದ ಪಾಲ್ಕನ್ ಬೋರೇಗೌಡರು,
ಮತ್ತು ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಗಳ ಬಳಗದ ಜಿಲ್ಲಾಧ್ಯಕ್ಷರಾದ ಬೆಲವತ್ತ ರಾಮಕೃಷ್ಣೇಗೌಡ, ಜಾಲತಾಣ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಪ್ರವೀಣ್, ನಗರ ಸಂಘಟನಾ ಕಾರ್ಯದರ್ಶಿ ಕೋದಂಡರಾಮ,ಖಜಾಂಚಿ ಪ್ರಸನ್ನಗೌಡ, ನಿರ್ದೇಶಕರಾದ ರತ್ನಮ್ಮ, ಮಹಾದೇವಮ್ಮ ಮತ್ತಿತರರು ಹಾಜರಿದ್ದು ಆನಂದ ಗೌಡರಿಗೆ ಶುಭ ಕೋರಿದರು.

ಆನಂದಗೌಡರಿಗೆ ಮೈಸೂರು ಪೇಟ ತೊಡಿಸಿ,ಹಾರ ಹಾಕಿ ಕೇಕ್ ಕತ್ತರಿಸಿ ತಿನ್ನಿಸಿ ಎಲ್ಲರೂ ಸಂಭ್ರಮಿಸಿದರು.