ಖಾತೆ ತೆರೆಯದ ಕಾಂಗ್ರೆಸ್‌: ಕೈ ನಾಯಕರಿಗೆ ಮುಖಭಂಗ

Spread the love

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ಚುನಾವಣೆ ಫಲಿತಾಂಶ‌ ಪ್ರಕಟವಾಗಿದ್ದು,ಕಾಂಗ್ರೆಸ್ ಖಾತೆಯನ್ನೇ ತೆರೆಯದೆ ತೀವ್ರ ಮುಖಭಂಗ ಅನುಭವಿಸಿದೆ.

ಉಚಿತ ಗ್ಯಾರಂಟಿ ಘೋಷಿಸಿ ಸೀಮಿತ ಹೋರಾಟ ನಡೆಸಿದ ಕಾಂಗ್ರೆಸ್‌ ಒಂದೂ ಕ್ಷೇತ್ರದಲ್ಲೂ ಖಾತೆ ತೆರೆದಿಲ್ಲ,ಹಾಗಾಗಿ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಮುಖಭಂಗವಾದಂತಾಗಿದೆ.

ಆರಂಭದಿಂದಲೂ ಬಿಜೆಪಿ-ಆಪ್‌ ನಡುವೆ ಪೈಪೋಟಿ ಮುಂದುವರಿದಿತ್ತು,

ಮ್ಯಾಜಿಕ್‌ ನಂಬರ್‌ ತಲುಪಿರುವ ಬಿಜೆಪಿ 27‌ ವರ್ಷಗಳ ಬಳಿಕ ದೆಹಲಿಯಲ್ಲಿ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ.