ಮೈಸೂರು:ಮೈಸೂರಿನ ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಏರ್ಪಡಿಸಿದ್ದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ವೈಷ್ಣವಿ ಎಲ್, ದ್ವಿತೀಯ ವೈಭವ ಎಚ್ ಆರ್,ತೃತೀಯ ಚಿರಾಗ್ ಹೆಗ್ಡೆ ಎಮ್ ಅವರಿಗೆ ಬಹುಮಾನ ವಿತರಿಸಲಾಯಿತು.
ಅರ್ಪನ್ ಅರುಣ್, ಕಿಶಾನ್ ಭಾರದ್ವಾಜ್ ಸಿ, ಚಿರಂತ್ ಬಿ, ಹಿಮಗ್ನ ಆರ್, ದರ್ಶಿಲ್ R, ಹೃತ್ವಿಕ್ ಆರ್, ನವನೀತ್ ಎಂ ಕೆ, ಆರ್ಯನ್ ಜಿ ಕೆ, ನಕುಲ್, ಶ್ರಿಯನ್ ಗೌಡ ಎನ್ ಎಸ್, ನೆಚ್ಚಿನ್ ಆರ್, ಕನಿಷ್ಕ್ ,ಪ್ರಭವ್ ಭಟ್, ನೈನಿಕ ಅವರುಗಳಿಗೆ ವಿಶೇಷ ಬಹುಮಾನ ನೀಡಲಾಯಿತು.
ಈ ವೇಳೆ ಮಾತನಾಡಿದ ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಷನ್ ಅಧ್ಯಕ್ಷೆ ಪಿ ಪುಷ್ಪಲತಾ,
ಚೆಸ್ ಎಂಬುದು ಭಾರತೀಯ ಪುರಾತನ ಒಳಾಂಗಣ ಕ್ರೀಡೆಯಾಗಿದೆ. ರಾಜ ಮಹಾರಾಜರು ತಮ್ಮ ಬುದ್ದಿಗೆ ಚುರುಕು ನೀಡುವ ನಿಟ್ಟಿನಲ್ಲಿ ಚದರುಂಗ ಆಟ ಆಡುತ್ತಿದ್ದರು. ಅಂತಹ ಕ್ರೀಡೆಯನ್ನು ಭಾರತವು ಇಡೀ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದೆ ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ಸನ್ನತ್, ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷೆ ರುಕ್ಮಿಣಿ ಎಚ್, ಆರ್ ಆರ್ ಆರ್ ಎಸ್ಟೇಟಿನ ನಿರ್ದೇಶಕಿ ಲಾವಣ್ಯ ಮಹೇಶ್ ಎಲ್, ಚಾರುಲತಾ, ಅನುಷ, ಪ್ರಿಯಾಂಕಾ, ಆಕಾಶ್ ಮತ್ತಿತರರು ಉಪಸ್ಥಿತರಿದ್ದರು.