ಮೈಸೂರು: ನವರಾತ್ರಿ ಹಬ್ಬದ ಮೂರನೇ ದಿನವಾದ ಇಂದು ಪಾರ್ವತಿ ಅಮ್ಮನವರು ಭಸ್ಮಲೇಪಿತ ಅಲಂಕಾರದಲ್ಲಿ ಕಂಗಳಿಸುತ್ತಿದ್ದಳು.
ಮೈಸೂರಿನ ಅಗ್ರಹಾರ ರಕ್ತದಲ್ಲಿರುವ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವಿಗೆ ಭಸ್ಮದಿಂದ ಅಲಂಕರಿಸಿ ವಿವಿಧ ಹೂಗಳು ಮತ್ತು ಹಣ್ಣುಗಳಿಂದ ಶೃಂಗಾರ ಮಾಡಲಾಗಿತ್ತು.
ತಾಯಿ ಪಾರ್ವತಿಯು ತ್ರಿಶೂಲ ಧಾರಿಯಾಗಿ ಜನರಿಗೆ ಅಭಯಹಸ್ತ ನೀಡುತ್ತಿರುವಂತೆ ಕಾಣುತ್ತಾಳೆ ಅವಳನ್ನು ನೋಡುವುದೇ ಕಣ್ಣಿಗೆ ಹಬ್ಬ.
ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ನೇತೃತ್ವದಲ್ಲಿ ವಿಶೇಷ ಅಲಂಕಾರ,ಪೂಜೆ ನೆರವೇರಿತು.