ಪಾತ್ರೆ ತೊಳೆಯಲು ಹೋದ ಮೂವರು ವಿಧ್ಯಾರ್ಥಿಗಳು ನೀರುಪಾಲು

Spread the love

ಮಂಡ್ಯ,ನ.2: ಪಾತ್ರೆ ತೊಳೆಯಲು ಹೋದ ಮೂವರು ವಿಧ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಸಮೀಪದ ಬೋರೆ ಗ್ರಾಮದ ಬಳಿ ಶನಿವಾರ ಸಂಜೆ ಈ ಘಟನೆ ನಡೆದಿದೆ.

ಅನಿ 9ನೇ ತರಗತಿ, ತರ್ಬೀನ್ 7ನೇ ತರಗತಿ, ಆಫ್ರಿನ್ 7ನೇ ತರಗತಿ ಓದುತ್ತಿದ್ದರು,
ಈ ವಿದ್ಯಾರ್ಥಿಗಳು ಮಹದೇವಪುರ ಸಮೀಪದ ರಾಮಸ್ವಾಮಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಮೈಸೂರಿನ ಉದಯಗಿರಿಯ ಹಜಿರ ನಿಶ್ವಾನ್ ಅರೇಬಿಕ್ ಶಾಲೆ ವಿದ್ಯಾರ್ಥಿಗಳು. ಬಟ್ಟೆ, ಪಾತ್ರೆ ತೊಳೆಯುವ ಸಲುವಾಗಿ 15 ವಿದ್ಯಾರ್ಥಿಗಳನ್ನ ನಾಲ್ವರು ಸಿಬ್ಬಂದಿ ಕರೆತಂದಿದ್ದರು.

ಈ ವೇಳೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದ. ಆತನ ರಕ್ಷಣೆಗೆ ಹೋದವರು ಐವರು ಮುಳುಗಡೆಯಾಗಿದ್ದಾರೆ.

ಈ ವೇಳೆ ಮೂವರನ್ನ ಸ್ಥಳೀಯರು ರಕ್ಷಿಸಿದ್ದಾರೆ.ಉಳಿದ ಮೂವರು ನೀರು ಪಾಲಾಗಿದ್ದಾರೆ.

ಅರಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.