ಬೆಳಗಾವಿ: ಹಿಂದಿನಿಂದ ಬಂದ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ನಗರದ ಗೋವಾವೆಸ್ ಸಮೀಪ ಸಿಗ್ನಲ್ ಬಳಿ ತಡರಾತ್ರಿ ಅಪಘಾತ ಸಂಭವಿಸಿದೆ.
ಖಾನಾಪುರ ತಾಲೂಕಿನ ಕಾಪೋಲಿ ಗ್ರಾಮದ ಸುನಿಲ್ ದಿಲೀಪ್ ದೇಸಾಯಿ (42)ಮೃತಪಟ್ಟ ದುರ್ದೈವಿ.
ಸುನಿಲ್ ದೇಸಾಯಿ ತಮ್ಮ ಬೈಕ್ ನಲ್ಲಿ ಆರ್ಪಿಡಿ ಕಾಲೇಜು ರಸ್ತೆಯಿಂದ ಗೋವಾವೇಸ್ ಕಡೆಗೆ ತೆರಳುತ್ತಿದ್ದಾಗ ಹಿಂದಿನಿಂದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ.
ದಕ್ಷಿಣ ಸಂಚಾರ ಪೊಲೀಸರು ಹಾಗೂ ಟಿಳಕವಾಡಿ ಪೊಲೀಸರು ಆಗಮಿಸಿ ಪರಿಶೀಲಿಸಿ, ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.