ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ದ ಸಾವಯವ ಕೃಷಿ ತಜ್ಞ ಜೋಸೆಫ್ ಲೋಬೋ ಶಂಕರಪುರ ಅವರಿಗೆ ಗೌರವ ಡಾಕ್ಟಾರೆಟ್ ಲಭಿಸಿದೆ.
ಗ್ಲೋಬಲ್ ಆಚಿವರ್ಸ್ ಕೌನ್ಸಿಲ್ ಸೌತ್ ವೆಸ್ಟರ್ನ್ ಯೂನಿವರ್ಸಿಟಿ ಯು ಎಸ್ ಎ ಅವರು ಚನ್ನೈ ಅಲ್ಲಿ ನಡೆಸಿದ ರಾಷ್ಟ್ರೀಯ ಗೌರವ್ ಐಕಾನ್ ಅವಾರ್ಡ್ 2025 ಜೋಸೆಫ್ ಲೋಬೋ ಅವರನ್ನು ಗೌರವ ಡಾಕ್ಟಾರೇಟ್ ನೀಡಿ ಗೌರವಿಸಿದೆ.

ಜೋಸೆಫ್ ಲೋಬೋ ಅವರು
ಪ್ರಸ್ತುತ ಕೃಷಿ ತಜ್ಞರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರ ಸಾಧನೆಗಳು: ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿ ಹೈಡ್ರೋಪೋನಿಕ್ ವಿಧಾನದಲ್ಲಿ ಮಲ್ಲಿಗೆ ಕೃಷಿ.
ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ತಾರಸಿಯಲ್ಲಿ 2,70,000 ಮೌಲ್ಯದ ಮಿಯಾಜಾಕಿ ಮಾವಿನ ಹಣ್ಣಿನ ಬೆಳೆ.
ತಾರಸಿಯಲ್ಲಿ 500 ಕ್ಕೂ ಹೆಚ್ಚು ದೇಶ ವಿದೇಶಗಳ ಗಿಡಗಳ ಯಶಸ್ವಿ ಸಾಧನೆ.
ಸಾವಿರಾರು ಜನರಿಗೆ ಜೋಸೆಫ್ ಲೋಬೋ ಶಂಕರಪುರ ಎಂಬ ಯು ಟ್ಯೂಬ್ ಚಾನೆಲ್ ಮೂಲಕ ಕೃಷಿ ಮಾಹಿತಿ.
ಹಲವಾರು ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ 50,000 ಕ್ಕೂ ಅಧಿಕ ಜನರಿಗೆ ಕೃಷಿ ಮಾಹಿತಿ.
ಸಾವಯವ ರೀತಿಯಲ್ಲಿಯೇ ಗಿಡಗಳ ಯಶಸ್ವಿ ಸಾಧನೆ.
ವಿವಿಧ ಶಾಲಾಮಕ್ಕಳಿಗೆ ತಮ್ಮ ತಾರಸಿ ಕೃಷಿ ವೀಕ್ಷಣೆ, ಅದರ ಬಗ್ಗೆ ಮಾಹಿತಿ ಹಾಗೂ ಪ್ರೋತ್ಸಾಹ ನೀಡುತ್ತಿದ್ದಾರೆ.
ಲೋಬೊ ಅವರ ಸಾಧನೆಯನ್ನು ಗುರುತಿಸಿ ಸಂಘ ಸಂಸ್ಥೆಗಳು ಗೌರವಿಸಿವೆ.

ರೋಟರಿ ಶಂಕರಪುರ,
ರೇಡಿಯೋ ಶಿವಮೊಗ್ಗ,
ಲಯನ್ಸ್ ಶಂಕರಪುರ,
ಟೆಂಪೋ ರಿಕ್ಷಾ ಚಾಲಕರ ಸಂಘ,
ರಕ್ಷಣಾಪುರ ಜವನೆರ್ ಕಾಪು,
ಕರೋಕೆ ಗಾಯನ ಉಡುಪಿ,
ಶಿವಪಾಡಿ ಉಡುಪಿ,
ಎಂಜಿಎಂ ಕಾಲೇಜು ಮಣಿಪಾಲ್ ವತಿಯಿಂದ,
ಜಿ. ಶಂಕರ್ ಮಹಿಳಾ ಕಾಲೇಜ್ ಉಡುಪಿ,
ಸಂತ ಜಾನ್ ಹೈಸ್ಕೂಲ್ ಶಂಕರಪುರ ಹಾಗೂ
ಹಲವಾರು ಚರ್ಚ್ ವತಿಯಿಂದ ಗೌರವ ಸನ್ಮಾನ ಲಭ್ಯವಾಗಿವೆ.
ಇದೆಲ್ಲದರ ಮುಕುಟಾ ಎಂಬಂತೆ ಕ್ಷೇತ್ರದ ಶಾಸಕರು ಕೂಡಾ ಸನ್ಮಾನಿಸಿದ್ದಾರೆ.
ಪ್ರಶಸ್ತಿಗಳು:
ರಾಜ್ಯ ಪ್ರಶಸ್ತಿ
ಸಂಘ ಸಂಸ್ಥೆಗಳ ಪ್ರಶಸ್ತಿ
ಪರಿಸರ ಪ್ರೇಮಿ ಪ್ರಶಸ್ತಿ
ರೈತ ರತ್ನ ರಾಷ್ಟ್ರೀಯ ಪ್ರಶಸ್ತಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿವೆ.
ಪ್ರಸ್ತುತ ಜೋಸೆಫ್ ಲೊಬೊ ಅವರು ಕೃಷಿ ಮಾಹಿತಿ ನೀಡುತ್ತಾ ತೋಟ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪತ್ನಿ ಹಾಗೂ ಮಗಳೊಂದಿಗೆ ಉಡುಪಿಯ ಶಂಕರಪುರ ಗ್ರಾಮದಲ್ಲಿ ಸುಖಿ ಸಂಸಾರ ನಡೆಸುತ್ತಿದ್ದಾರೆ.
ಜೋಸೆಫ್ ಲೋಬೋ ಅವರ ಸಾಧನೆಯನ್ನು ಗುರುತಿಸಿ ಗ್ಲೋಬಲ್ ಆಚಿವರ್ಸ್ ಕೌನ್ಸಿಲ್ ಸೌತ್ ವೆಸ್ಟರ್ನ್ ಯೂನಿವರ್ಸಿಟಿ ಯು ಎಸ್ ಎ ಅವರು ಚನ್ನೈ ಅಲ್ಲಿ ನಡೆಸಿದ ರಾಷ್ಟ್ರೀಯ ಗೌರವ್ ಐಕಾನ್ ಅವಾರ್ಡ್ 2025 ಕಾರ್ಯಕ್ರಮ ದಲ್ಲಿ ಗೌರವ ಡಾಕ್ಟಾರೇಟ್ ಕೊಟ್ಟು ಗೌರವಿಸಿದೆ.

ಜೋಸೆಫ್ ಲೋಬೋ ಅವರಿಗೆ ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ಮತ್ತಿತರರು ಅಭಿನಂದಿಸಿದ್ದಾರೆ.