ಪಂಚವಟಿ ಹೋಟೆಲ್ ನವರಿಂದ ಪುಟ್ ಪಾತ್ ದುರುಪಯೋಗ-ತೇಜಸ್ವಿ ಆಕ್ರೋಶ

Spread the love

ಮೈಸೂರು: ಮೈಸೂರಿನ ವೇದಾಂತ ಹೆಮ್ಮಿಗೆ ವೃತ್ತ ದಲ್ಲಿರುವ ಪಂಚವಟಿ ಹೋಟೆಲ್ ನವರು ಹೋಟೆಲ್ ಗೆ ಬರುವ ಜನರ ಕಾರು ಬೈಕ್ ಗಳನ್ನು ಪುಟ್ ಪಾತ್ ಮೇಲೆ ಪಾರ್ಕಿಂಗ್ ಮಾಡುವ ಮೂಲಕ ದುರುಪಯೋಗ ಮಾಡಿದ್ದಾರೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪ ಮಾಡಿದ್ದಾರೆ.

ಪುಟ್ ಪಾತ್ ಗಳಲ್ಲಿ ವಾಹನ ಪಾರ್ಕಿಂಗ್ ಮಾಡುವ ಮೂಲಕ ಪಾದಚಾರಿಗಳಿಗೆ ತೊಂದರೆ ಯಾಗುತ್ತಿದೆ ಮತ್ತು ಪಕ್ಕದಲ್ಲಿ ಇರುವ ಕಾರ್ ಶೋರೂಂ ಮತ್ತು ಬೈಕ್ ಶೋರೂಂ ನವರು ಕೂಡ ಪುಟ್ ಪಾತ್ ಗಳಲ್ಲಿ ಪಾರ್ಕಿಂಗ್ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಮೈಸೂರು ನಗರ ಪಾಲಿಕೆ ಆಯುಕ್ತರು ಮತ್ತು ಸಂಚಾರಿ ಪೊಲೀಸ್ ಇಲಾಖೆ ಯವರು ಕೂಡಲೇ ಫುಟ್ ಪಾತ್ ಅತಿಕ್ರಮಣ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.