ಕಲ್ಯಾಣಿ ಸ್ವಚ್ಚತೆ ಮಾಡಿ ಮಾದರಿಯಾದ ಯುವ ಬ್ರಿಗೇಡ್

Spread the love

ಮೈಸೂರು: ಯುವ ಬ್ರಿಗೇಡ್ ಮೈಸೂರು ತಂಡದವರು ಚಾಮುಂಡಿ ಬೆಟ್ಟದ ತಪ್ಪಲಿನ ಕಲ್ಯಾಣಿ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕಲ್ಯಾಣಿಯ ಮೆಟ್ಟಿಲುಗಳ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡುವ ಮೂಲಕ ಕಲ್ಯಾಣಿ ಸ್ವಚ್ಚತೆಯನ್ನು ಮಾಡಲಾಯಿತು.

50ಕ್ಕೂ ಹೆಚ್ಚು ಯುವರ ತಂಡ ಬೆಳಿಗ್ಗೆ 6.30ಕ್ಕೆ ಸ್ವಚ್ಚತಾ ಕಾರ್ಯ ಆರಂಭಿಸಿ 10 ಗಂಟೆವರಗೂ ನಿರಂತರವಾಗಿ ಶ್ರಮಧಾನ ಮಾಡಿದರು.

ಈ ಸ್ವಚ್ಚತಾ ಕಾರ್ಯಕ್ಕೆ ಮೈಸೂರಿನ ಎನ್ಐಇ ಕಾಲೇಜಿನ ವಿದ್ಯಾರ್ಥಿಗಳು‌ ಸಹಾ ಶ್ರಮಧಾನಕ್ಕೆ ಸಾತ್ ನೀಡಿದರು.

ಸ್ವಚ್ಚತಾ ಕಾರ್ಯದಲ್ಲಿ ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ್, ಮೈಸೂರು ನಗರ ಸಂಚಾಲಕ ಸಾಗರ್, ಮಹೇಂದ್ರ, ನಾರಾಯಣ್,ಕಿಶೋರ್ ,ಚರಣ್,ಶಿವು,ಧನುಷ್,ಗೌತಮ್,ರಮೇಶ್,ಹಾಗೂ ಎನ್ಐಇ ಕಾಲೇಜಿನ ಸ್ಟೋಡೆಂಟ್ ವೆಲ್ ಪೇರ್ ಆಫಿಸರ್ ಡಾ.ಶರತ್ ಚಂದ್ರ, ಕಾಲೇಜು ವಿದ್ಯಾರ್ಥಿ ತಂಡದ ನಾಯಕ ಸಂಜನ್,
ರಮಿತ, ಯಾನ ಸೀತಮ್ಮ,ಶಿವರಾಜ್ ಮರಡು,ಪ್ರಮುಕ್,ಪ್ರಸ್ತುತಿ ಮತ್ತಿತರರು ಪಾಲ್ಗೊಂಡಿದ್ದರು.