ಮೈಸೂರು,ಏ.8: ಯುವತಿಯನ್ನ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಯುವಕನ ವಿರುದ್ದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರುಣ ಎಂಬಾತನ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.
ಶ್ರೀರಾಂಪುರ ಯುವತಿಯ ಹಿಂದೆ ಬಿದ್ದಿರುವ ಅರುಣ ಪದೇ ಪದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ.
ಈ ಹಿಂದೆ ಕೂಡಾ ಈತನ ವಿರುದ್ದ ಇದೇ ಆರೋಪದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಬುದ್ದಿಕಲಿಯದ ಅರುಣ ಮತ್ತೆ ಹಿಂಬಾಲಿಸಿ ಟಾರ್ಚರ್ ನೀಡುತ್ತಿದ್ದ.
ಇದರಿಂದ ನೊಂದ ಯುವತಿ ಮನೆಯವರಿಗೆ ತಿಳಿಸಿದ್ದಾಳೆ.ಇದೀಗ ಕುವೆಂಪುನಗರ ಠಾಣೆಯಲ್ಲಿ ಮನೆಯವರು ಪ್ರಕರಣ ದಾಖಲಿಸಿದ್ದಾರೆ.