ಭೀಮಾ ನದಿ‌ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು

Spread the love

ಯಾದಗಿರಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಜೋರಾದ ಹಿನ್ನೆಲೆಯಲ್ಲಿ ಭೀಮಾನದಿಯಲ್ಲಿ ಪ್ರವಾಹ ಉಂಟಾಗಿದ್ದು, ಇಬ್ಬರು ಯುವಕರ ಬಲಿಯಾಗಿದ್ದಾರೆ.

ಭೀಮಾನದಿಗೆ ದನಗಳಿಗೆ ನೀರು ಕುಡಿಸಲು ಯುವಕರು ಬಂದಿದ್ದರು,ಆಗ ಭೀಮಾನದಿಯಲ್ಲಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಾಚನೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ರಮೇಶ್ (17) ಸಿದ್ದಪ್ಪ (21) ಭೀಮಾನದಿ ಪಾಲಾದ ದನಗಾಹಿ ಯುವಕರು.

ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು,
ಅಪಾಯದ ಮಟ್ಟ ಮೀರಿ ನದಿ‌ ಹರಿಯುತ್ತಿದೆ.

ನದಿಪಾಲಾದ ಯುವಕರಿಗೆ ಭೀಮಾನದಿಯಲ್ಲಿ ಶೋಧ ಕಾರ್ಯ

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಭೀಮಾನದಿಯಲ್ಲಿ ದನಗಾಹಿ ಯುವಕರಿಗೆ ಶೋಧ ಕಾರ್ಯ
ನಡೆಸಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ ಮೃತ ಯುವಕರ ಶವಕ್ಕಾಗಿ ಶೋಧ ಕಾರ್ಯ ನಡೆದಿದ್ದರೂ ದೇಹಗಳು ಪತ್ತೆಯಾಗಿಲ್ಲ.