ಯಾದಗಿರಿ: ಜಿಲ್ಲೆಯ ಅಲ್ಲಿಪುರ ಗ್ರಾಮದ ಸಮೀಪ ಕುರಿ ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡಿದ್ದು,ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಅಲ್ಲಿಪುರ ಗ್ರಾಮದ ಭಾಗದಲ್ಲಿ ಚಿರತೆ ಕಾಟ ವಿಪರೀತವಾಗಿದ್ದು, ಚಿರತೆ ಕುರಿ,ನಾಯಿ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ
ಶರಣಪ್ಪ ಎಂಬುವರ ಜಮೀನಿನಲ್ಲಿ ಚಿರತೆ ಜಾನುವಾರು ಮೇಲೆ ದಾಳಿ ಮಾಡಿದ್ದು,ಅರ್ದಂಬರ್ದ ತಿಂದು ಹೋಗಿದೆ.
ಇದನ್ನು ನೋಡಲು ಗ್ರಾಮದ ಜನ ದಾವಿಸುತ್ತಿದ್ದಾರೆ.ಜಮೀನಿನ ಕೆಲಸಕ್ಕೆ ಹೋಗಲು ಭಯಪಡುತ್ತಿದ್ದಾರೆ.
ಶೀಘ್ರವೇ ಚಿರತೆ ಸೆರೆ ಹಿಡಿದು ಅವುಗಳ ಕಾಟ ತಪ್ಪಿಸಬೇಕೆಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
