ವಿಷ್ಣು ಸೇನಾ ಸ್ನೇಹಿತರ‌ ಗುಂಪಿನಿಂದ ಚಾಮುಂಡೇಶ್ವರಿ ವರ್ಧಂತಿ

Spread the love

ಮೈಸೂರು: ಮೈಸೂರಿನ ಸಿದ್ದಾರ್ಥ‌ ನಗರ‌ ಲಲಿತಮಹಲ್ ಗೇಟ್, ಫುಡ್‌ಸ್ಟ್ರೀಟ್ ಬಳಿ‌ ವಿಷ್ಣು ಸೇನಾ ಸ್ನೇಹಿತರ‌ ಗುಂಪು ಇಂದು ನಾಡ ಅಧಿ ದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯನ್ನು ಆಚರಿಸಿತು.

ಬೆಳಿಗ್ಗೆ ತಾಯಿ ಚಾಮುಂಡೇಶ್ವರಿ ದೇವಿ ಫೋಟೊ ಇಟ್ಟು ಕಳಶ ಪ್ರತಿಷ್ಟಾಪಿಸಿ ಪೂಜಾ ಕಾರ್ಯ ನೆರವೇರಿಸಿ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ನಂತರ ಸಾವಿರಾರು ಮಂದಿಗೆ ವಿಷ್ಣು ಸೇನಾ ಸ್ನೇಹಿತರ‌ ಗುಂಪಿನ ವತಿಯಿಂದ ಅನ್ನಪ್ರಸಾದ ಮತ್ತು ಕೇಸರಿಬಾತ್ ಹಾಗೂ ಮಿಟಾಯಿ ವಿತರಿಸಲಾಯಿತು.