ಕನ್ನಡ ಬೆಳೆಸುವುದು ಕನ್ನಡಿಗರ ಕರ್ತವ್ಯ:ಅಂಕೇಗೌಡ

ಮೈಸೂರು: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿ ಕನ್ನಡಿಗರ ಆದ್ಯ ಕರ್ತವ್ಯ ಎಂದು ಪುಸ್ತಕದ ಮನೆ ಖ್ಯಾತಿಯ ಅಂಕೇಗೌಡ ತಿಳಿಸಿದರು.

ಮೈಸೂರಿನ ವಿಜಯನಗರ ಒಂದನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಕನ್ನಡ ಭಾಷೆ ತನ್ನದೇ ಆದ ಗೌರವ ಮೌಲ್ಯ ಹೊಂದಿದೆ, ಕನ್ನಡ ಪ್ರೇಮ ನಿರಂತರವಾಗಿ ಇರಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಲಯನ್ ಯು ಬಿ ಉದಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಗರಾಜ್ ಬೈರಿ ಮತ್ತು ಸುಗಮ ಸಂಗೀತ ಪರಿಷತ್ ಪ್ರಶಸ್ತಿಗೆ ಭಾಜನನರಾದ ಎ ಡಿ ಶ್ರೀನಿವಾಸ್ ಅವರನ್ನು
ಸನ್ಮಾನಿಸಲಾಯಿತು,

ಕಾವ್ಯ ಅವರು ನಡೆಸಿಕೊಟ್ಟ ಮಾತನಾಡುವ ಗೊಂಬೆ ಪ್ರದರ್ಶನ, ಬಡಾವಣೆಯ ನಿವಾಸಿಗಳ ಮನರಂಜನೆ ಎಲ್ಲರ ಗಮನ ಸೆಳೆಯಿತು. ಬಡಾವಣೆಯ ಸಾಧಕ ನಿವಾಸಿಗಳನ್ನು ಗೌರವಿಸಲಾಯಿತು.

ಬಡಾವಣೆಯ ನಿವಾಸಿಗಳಿಗೆ ಲಕ್ಕಿ ಡಿಪ್ ಹಾಗೂ ವಿವಿಧ ಕ್ರೀಡಾ ಸ್ಪರ್ಧೆ ಆಯೋಜಿಸಿ ವಿಜೇತರಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ,
ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ಕೆ. ನಂಜಯ್ಯ, ಉಪಾಧ್ಯಕ್ಷ ವೆಂಕಟೇಗೌಡ, ಜಂಟಿ ಕಾರ್ಯದರ್ಶಿ ಅಲುಮೇಲು ಪ್ರದೀಪ್, ಖಜಾಂಚಿ ಶ್ರೀನಿವಾಸ್ ಮತ್ತು ಮಾಜಿ ಅದ್ಯಕ್ಷ ನರಸೇಗೌಡರು, ಹಾಗೂ ನಿರ್ದೇಶಕರು ನಿವಾಸಿಗಳು ಹಾಜರಿದ್ದರು.