ವಿದ್ಯುತ್ ತಗುಲಿ ಮೂವರ ದುರ್ಮರಣ

Spread the love

ಯಾದಗಿರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಮೂವರು ದುರ್ಮರಣ‌ ಹೊಂದಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,
ಈರಪ್ಪ (40), ದೇವು ( 30), ಸುರೇಶ (22) ಮೃತಪಟ್ಟವರು.

ಸದಬ ಗ್ರಾಮದ ಈರಪ್ಪ ಹಾಗೂ ಸುರೇಶ ಒಂದೇ ಕುಟುಂಬದವರು.

ಮೋಟಾರ್ ಪಂಪಸೆಟ್ ರಿಪೇರಿ ಮಾಡಿ,
ಭತ್ತದ ಸಸಿಗೆ ನೀರು ಹಾಯಿಸಲು ಹೋದಾಗ ವಿದ್ಯುತ್ ಅವಘಡ‌ ಸಂಭವಿಸಿದೆ.

ಮೃತ ದೇಹಗಳನ್ನು ಕೆಂಭಾವಿ ಸಮುದಾಯ ಆಸ್ಪತ್ರೆ ಇಡಲಾಗಿದ್ದು,ಆಸ್ಪತ್ರೆ ಮುಂಬಾಗ ಕುಟುಂಬಸ್ಥರ ಆಕ್ರಂಧನ ಮೇರೆ ಮೀರಿತ್ತು.

ಘಟನೆ ಸಂಬಂಧ ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.