ವಾಲ್ಮೀಕಿ ಮಹಾನ್ ಋಷಿ- ಎಮ್.ಎಸ್.ರಾಮಾನುಜ

Spread the love

ನಂಜನಗೂಡು: ಮಹರ್ಷಿ ವಾಲ್ಮೀಕಿ ಭಾರತೀಯ ಸಂಸ್ಕೃತಿಯ ದಿಕ್ಕು ತೋರಿಸಿದ ಮಹಾನ್ ಋಷಿ ಎಂದು ಭೌತಶಾಸ್ತ್ರ ಉಪನ್ಯಾಸಕ ಎಮ್.ಎಸ್.ರಾಮಾನುಜ ರವರು ಹೇಳಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು,ವಾಲ್ಮೀಕಿ ಅವರ ‘ರಾಮಾಯಣ’ ಕಾವ್ಯವು ಮಾನವೀಯ ಮೌಲ್ಯಗಳ ಮಹತ್ತರ ಪಾಠವಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಮಾತನಾಡಿ,
ವಾಲ್ಮೀಕಿ ಅವರ ಜೀವನವು ಪರಿವರ್ತನೆಗೆ ಸ್ಫೂರ್ತಿಯಾಗಿದೆ,ಅರಣ್ಯ ವಾಸದಲ್ಲಿದ್ದವರೂ, ಜ್ಞಾನದಿಂದ ಮಹರ್ಷಿಯಾದರು ಎಂಬುದು ಪ್ರತಿಯೊಬ್ಬನಿಗೂ ಪಾಠ ಎಂದು ನುಡಿದರು.

ವಾಲ್ಮೀಕಿ ಮಹರ್ಷಿ ಕೇವಲ ಕವಿ ಅಲ್ಲ, ಅವರು ಸಮಾಜದ ದಾರಿದೀಪ. ಅವರ ಆದರ್ಶಗಳು ಇಂದಿಗೂ ಪ್ರಸ್ತುತ,ಎಂದು ಕನ್ನಡ ಭಾಷಾ ಉಪನ್ಯಾಸಕಿ ಡಾ. ಎ. ಮಾಲತಿ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್. ಲಿಂಗಣ್ಣ ಸ್ವಾಮಿ, ರಂಗಸ್ವಾಮಿ,ದಿನೇಶ್, ಎನ್ ನಾಗರಾಜ್ ,ರೂಪ ,ಎಚ್ .ಕೆ ಸ್ವಾಮಿ ಗೌಡ, ಭವ್ಯ, ಮೀನಾ ,ಸುಲಕ್ಷಣ, ಅಂಬಿಕಾ, ಪದ್ಮಾವತಿ, ವತ್ಸಲ, ಟಿ.ಕೆ. ರವಿ, ನಾಗರಾಜ ರೆಡ್ಡಿ ,ಹರೀಶ್ ,ಮಿಲ್ಟನ್, ಮಹದೇವಸ್ವಾಮಿ, ದಿವ್ಯ ಮತ್ತಿತರರು ಪಾಲ್ಗೊಂಡಿದ್ದರು.