ಮೈಸೂರು: ಶ್ರೀ ಯತಿರಾಜ ಮಠ ಹಾಗೂ ಶ್ರೀ ವೈಷ್ಣವ ಮಹಾಸಭಾ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವಂಬರ್ 24ರಂದು ಬೃಹತ್ ಶ್ರೀ ವೈಷ್ಣವ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ ನಮ್ಮ ನಡೆ ರಾಮನುಜರೆಡೆಗೆ ಎಂಬ ದ್ಯೇಯ ವಾಕ್ಯದೊಂದಿಗೆ ಈ ಸಮಾವೇಶ ನಡೆಯಲಿದೆ.
ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪ್ರಚಾರ ಸಾಮಗ್ರಿಗಳನ್ನು ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ
ರಾಮಾನುಜ ಜೀಯರ್ ಗುರುಗಳು ಬಿಡುಗಡೆಗೊಳಿಸಿದರು.
ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು ಲೋಕಕಲ್ಯಾಣಾರ್ಥವಾಗಿ ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ಪುನರುತ್ಥಾನಕ್ಕಾಗಿ, ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದನಾಚಾರ್ಯ, ಜಗದ್ಗುರು ಭಗವದ್ ಶ್ರೀ ರಾಮಾನುಜಾಚಾರ್ಯರ ದಿವ್ಯ ಸಂದೇಶವನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪುವಂತೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ನಮ್ಮ ನಡೆ ರಾಮಾನುಜರೆಡೆಗೆ ಎಂಬ ದೇಯ ವಾಕ್ಯದೊಂದಿಗೆ ಅಖಿಲ ಕರ್ನಾಟಕ ಶ್ರೀವೈಷ್ಣವ ಮಹಾಸಭಾ ತನ್ನ ಲೋಗೋವನ್ನು ಬಿಡುಗಡೆ ಮಾಡಿದ್ದು, ರಾಜ್ಯಮಟ್ಟದ ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ ಬೃಹತ್ ಸಮಾವೇಶವನ್ನು ಆಯೋಜಿಸುತ್ತಿದೆ.
ಈ ಬೃಹತ್ ಶ್ರೀ ವೈಷ್ಣವ ಸಮಾವೇಶಕ್ಕೆ ಹೆಚ್ಚಿನ ಶ್ರೀವೈಷ್ಣವರು ಭಾಗಿಯಾಗುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಈ ಮಹಾ ಸಮಾವೇಶಕ್ಕೆ ನಿಮಗಿರುವ ಪಾತ್ರವನ್ನು ಮುನ್ನಡೆಸಿ, ನೀವು ಕೂಡ ಕಮಿಟಿಗಳನ್ನು ರಚಿಸಿ, ಶ್ರೀವೈಷ್ಣವರನ್ನು ಸಂಘಟಿಸಿ, ಭಗವಂತನ ಕೃಪೆಗೆ ಮತ್ತು ಆಚಾರ್ಯರ ಅನುಗ್ರಹಕ್ಕೆ ಪಾತ್ರರಾಗಬೇಕು. ಈ ಮಹಾ ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ ಸಮಾವೇಶವನ್ನು ಶ್ರೇಷ್ಠ ಮಟ್ಟದಲ್ಲಿ ಯಶಸ್ವಿಗೊಳಿಸೋಣ ಎಂದು ಶ್ರೀಯವರು ನುಡಿದರು.
ಶ್ರೀ ವೈಷ್ಣವ ಸಮಾಜದ ಮುಖಂಡರಾದ
ಯೋಗನರಸಿಂಹನ್ (ಮುರುಳಿ)ಮಾತನಾಡಿ, ಮೈಸೂರಿನಿಂದ 5000ಕ್ಕೂ ಹೆಚ್ಚು ಶ್ರೀ ವೈಷ್ಣವರು ಈ ಸಮಾವೇಶಕ್ಕೆ ಭಾಗಿಯಾಗಲು ಮುಂದಾಗುತ್ತೇವೆ,
ಹಾಗೂ ಸಮಾವೇಶಕ್ಕೆ ತನು,ಮನ, ಧನ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಎಸ್.ವಿ.ಎಲ್.ಏನ್ ಆಚಾರ್, ವೀರ ರಾಘವಾಚಾರ್, ನಗರ ಪಾಲಿಕೆ ಮಾಜಿ ಸದ್ಯಸರಾದ ಎಂ ಡಿ ಪಾರ್ಥಸಾರಥಿ (ಪಾತಿ), ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಟಿ.ಎಸ್ ಅರುಣ್, ಚಕ್ರಪಾಣಿ, ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಪುಟ್ಟ ಸ್ವಾಮಿ, ಸಿ ವಿ ಪಾರ್ಥಸಾರಥಿ,ಶ್ರೀನಿವಾಸ ಪ್ರಸಾದ್, ಶಾಂತರಾಮ್ ಮತ್ತಿತರರು ಉಪಸ್ಥಿತರಿದ್ದರು.