ವಿಜೃಂಬಣೆಯಿಂದ ನಡೆದ ಇನ್ನಂಜೆ ಯುವತಿ ಮಂಡಲದ 13 ನೇ ವಾರ್ಷಿಕೋತ್ಸವ

Spread the love

ಉಡುಪಿ: ಉಡುಪಿ ಜಿಲ್ಲೆ ಇನ್ನಂಜೆ ಯುವತಿ ಮಂಡಲದ ಹದಿಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ವಿಜ್ರಂಭಣೆಯಿಂದ ನೆರವೇರಿತು.

ಶ್ರೀ ವಿಶ್ವತೀರ್ತವಲ್ಲಭ ಪಾದಂಗಳವರ ಆಶಿರ್ವಾದಗಳೊಂದಿಗೆ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ, ಲಾಲಾಜಿ ಆರ್ ಮೆಂಡನ್ ,ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಕಾಪು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸುನಿಲ್ ಡಿ ಬಂಗೇರ, ಉದ್ಯಮಿ ಆಶಾಲತಾ, ಯುವಕ ಮಂಡಲದ ಅಧ್ಯಕ್ಷ ಮದಸೂದನ್ ಆಚಾರ್ಯ, ಇನ್ನಂಜೆ ಯುವತಿ ಮಂಡಲ ಅಧ್ಯಕ್ಷರಾದ ಲಕ್ಷ್ಮಿ ವೈ ನಾಯಕ್, ಕಾರ್ಯದರ್ಶಿ ಪ್ರಭಾವತಿ ಆಚಾರ್ಯ, ಕೋಶಾಧಿಕಾರಿ ಭವ್ಯ ಸುರೇಶ್ ಇವರ ಉಪಸ್ಥಿತಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದ ರಾಷ್ಟ್ರ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜೋಸೆಫ್ ಲೋಬೋ ಶಂಕರಪುರ , ಶೈಕ್ಷಣಿಕ ವಿಭಾಗದಲ್ಲಿ ಪುಂಡರೀಕ್ಷ ಕೊಡಂಚ, ಸಮಾಜ ಸೇವಕರಾದ ಸುಧೀರ್ ಶೆಟ್ಟಿ, ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಕಾಶ್ ಸುವರ್ಣ ಕಟಪಾಡಿ ಅವರಿಂದ ಸಂಗೀತ ರಸಮಂಜರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.