ಹರಕಪ್ಪ ದೇವಾಲಯದಲ್ಲಿ ಕಳವು: ಗೋಲಕ ಹೊತ್ತೊಯ್ದ ಕಳ್ಳರು

ಹುಣಸೂರು: ಹುಣಸೂರು ತಾಲೂಕು ಹೊನ್ನಿ ಕುಪ್ಪೆ ಗ್ರಾಮದ ಸಮೀಪ ಇರುವ ಹರಕಪ್ಪ ದೇವಸ್ಥಾನದಲ್ಲಿ ಮಧ್ಯರಾತ್ರಿ ಕಳ್ಳರು ಬೆಳ್ಳಿವಸ್ತುಗಳು ಮತ್ತು ಗೋಲಕದ ಹಣ ದೋಚಿದ್ದಾರೆ.

ದೇವಾಲಯದ ಮುಂದಿನ ಬಾಗಿಲಿನ ಗ್ರಿಲ್‌ಗಳನ್ನು ಮಿಷನ್ ನಿಂದ ಕತ್ತರಿಸಿ ಒಳ ನುಗ್ಗಿರುವ ಕಳ್ಳರು ಬೆಳ್ಳಿ ತಟ್ಟೆ ದೀಪಾಲೆ ಕಂಬಗಳು ದೇವರಿಗೆ ಧರಿಸುವ ಬೆಳ್ಳಿ ಕಣ್ಣುಗಳು ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿದ್ದಾರೆ.

ಈ ದೇವಾಲಯ ಸುಮಾರು 2 ಎಕರೆ ಜಾಗದಲ್ಲಿ ಇದ್ದು ಕಲ್ಯಾಣ ಮಂಟಪ ಕೂಡ ಇದೆ. ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿ ವಿವಾಹಗಳನ್ನು ಮಾಡುತ್ತಾರೆ.

ದೇವಾಲಯದಲ್ಲಿ ಸದಾ ಪೂಜೆ ನಡೆಯುತ್ತದೆ.
ಹಾಗಾಗಿ ಕಲ್ಯಾಣ ಮಂಟಪದಲ್ಲಿ ಗೋಲಕವನ್ನು ಇಟ್ಟಿದ್ದು ಸದಾ ತುಂಬಿರುತ್ತದೆ, ಹಾಗಾಗಿ ಲಕ್ಷಾಂತರ ಹಣ ಇದರಲ್ಲಿ ಇತ್ತು ಗೋಲಕವನ್ನೆ‌ ಹೊತ್ತೊಯ್ದಿರುವ ಕಳ್ಳರು, ಹಣ ತೆಗೆದುಕೊಂಡು ಗೋಲಕವನ್ನು‌ ಕಾಲುವೆಯಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.

ಹಿಂದೆ ಮೈಸೂರು ಮಹಾರಾಜರು ಬೇರೆ ಕಡೆ ಹೋಗಿ ವಾಪಸ್ ಬರುವಾಗ ಈ ದೇವಸ್ಥಾನ ಇರುವ ಪ್ರದೇಶದಲ್ಲಿ ಸ್ವಲ್ಪ ಹೊತ್ತು ಇದ್ದು ವಿಶ್ರಾಂತಿ ಪಡೆದು ಬರುತ್ತಿದ್ದರಂತೆ ಹಾಗಾಗಿ ಮಹಾರಾಜರು ಈ ದೇವಸ್ಥಾನವನ್ನು ಕಟ್ಟಿಸಿ ಕೊಟ್ಟಿದ್ದಾರೆ ಎಂದು ಊರಿನ ಹಿರಿಯರು ಹೇಳುತ್ತಾರೆ.

ಯಾವುದಾದರೂ ಹರಕೆ ಹೊತ್ತರೆ ಈ ದೇವರು ಈಡೇರಿಸುತ್ತಾನೆ ಎಂಬ ಪ್ರತೀತಿ ಇದೆ ಅದಕ್ಕಾಗಿ ಈ ದೇವಾಲಯಕ್ಕೆ ಹರಕಪ್ಪ ದೇವಸ್ಥಾನ ಎಂದೆ ಹೆಸರು ಬಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಹುಣಸೂರು‌ ಗ್ರಾಮಾಂತರ ಪೊಲೀಸರು ಧಾವಿಸಿ ಪರಿಶೀಲಿಸಿ,ಮಹಜರು ನಡೆಸಿದರು.

ಇದೊಂದು ಪ್ರಸಿದ್ಧ ದೇವಾಲಯವಾಗಿದ್ದು‌ ದೇವಾಲಯಕ್ಕೆ ಭದ್ರತೆ ಒದಗಿಸಬೇಕು ಮತ್ತು ಕೂಡಲೇ ಕಳ್ಳರನ್ನು‌ ಹಿಡಿದು ಕಠಿಣ ಶಿಕ್ಷೆ ನೀಡಬೇಕು ಎಂದು ‌ಚೆಲುವರಾಜು ಮತ್ತು ಗ್ರಾಮಸ್ಥರು ‌ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.