ಮಾಲೀಕರ ವಿರುದ್ಧ ಮಹಿಳಾ ಉದ್ಯೋಗಿ ನೀಡಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್

ಮೈಸೂರು: ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಟರ್ಬೈನ್ ಸಲ್ಯೂಷನ್ ಸಂಸ್ಥೆ ಮಾಲೀಕ ಮುರಳೀಧರ್ ವಿರುದ್ದ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ.

ಒಂದು ತಿಂಗಳ ಹಿಂದೆ ಕಾರ್ಖಾನೆ ಮಾಲೀಕರಾದ ಮುರಳಿಧರ್ ಮಹಿಳಾ ಉದ್ಯೋಗಿ ಸೇರಿದಂತೆ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಗಿರೀಶ್ ಹಾಗೂ ಅಜಯ್ ಎಂಬುವರ ಜೊತೆ ಸೇರಿಕೊಂಡು ಮಹಿಳಾ ಉದ್ಯೋಗಿ ಸಂಸ್ಥೆಗೆ ಸೇರಿದ 27 ಲಕ್ಷ ಹಣ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೆ ಸಂಸ್ಥೆಗೆ ಸೇರಿದ ಗೌಪ್ಯ ವ್ಯವಹಾರಗಳನ್ನ ಆಕೆ ಬಹಿರಂಗಪಡಿಸಿದ್ದಾರೆ,ಒಳಸಂಚು ನಡೆಸಿ ಸಂಸ್ಥೆಗೆ ನಂಬಿಕೆ ದ್ರೋಹ ಬಗೆದಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಇದಾದ ನಂತರ ಮಹಿಳೆ ಮಾಲೀಕನ ವಿರುದ್ದ ಲೈಂಗಿಕ ಕಿರುಕುಳ ದಾಖಲಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಈ ಸಂಬಂಧ ಪೊಲೀಸರು ಕೂಲಂಕುಶವಾಗಿ ಪರಿಶೀಲನೆ ನಡೆಸಿ ನಿಜವಾದ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮುರುಳೀಧರ್ ಮತ್ತು ಅವರ ಕಡೆಯವರು ಆಗ್ರಹಿಸಿದ್ದಾರೆ.

ಮಾಲೀಕರ ವಿರುದ್ಧ ಮಹಿಳಾ ಉದ್ಯೋಗಿ ನೀಡಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್ Read More

ಲಿವ್ ಇನ್ ರಿಲೇಶನ್ ನಲ್ಲಿದ್ದ ಸಂಗಾತಿ ಕೊಲೆ

ಬೆಂಗಳೂರು: ಬೆಂಗಳೂರಿನಲ್ಲಿ 26 ವರ್ಷದ ಮಹಿಳೆಯೊಬ್ಬರನ್ನು ಲಿವ್-ಇನ್ ಸಂಗಾತಿ ಬೆಂಕಿ ಹಚ್ಚಿ ಕೊಂದಿರುವ ಹೇಯ ಘಟನೆ ನಡೆದಿದೆ.

ವನಜಾಕ್ಷಿ ಎಂಬವರು ಮೃತಪಟ್ಟಿದ್ದು ಕ್ಯಾಬ್‌ ಚಾಲಕ ವಿಠಲ್ ಬೆಂಕಿ ಹಚ್ಚಿದ್ದಾನೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಿವ್-ಇನ್ ಸಂಗಾತಿ ಬೆಂಕಿ ಹಚ್ಚಿದ್ದು ನಂತರ ಆಕೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ಆಸ್ಪತ್ರೆಗೆ ದಾಖಲಾದ ನಂತರ ವನಜಾಕ್ಷಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದು ಘಟನೆ ನಡೆದ 24 ಗಂಟೆಗಳ ಒಳಗೆ ಕ್ಯಾಬ್ ಚಾಲಕ ವಿಠಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆತನಿಗೂ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ವನಜಾಕ್ಷಿ ಮತ್ತು ವಿಠಲ್ ಒಟ್ಟಿಗೆ ವಾಸಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಲಿವ್ ಇನ್ ರಿಲೇಶನ್ ನಲ್ಲಿದ್ದ ಸಂಗಾತಿ ಕೊಲೆ Read More

ಮಾಹಿತಿಗಾಗಿ ಬಂದ ಪೊಲೀಸ್ ಮುಂದೆ ಸೀರೆ ಬಿಚ್ಚಿ ಅನುಚಿತವಾಗಿ ವರ್ತಿಸಿದ ಮಹಿಳೆ

ಮೈಸೂರು,ಆ.1: ದೂರೊಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಬಂದ ಪೊಲೀಸ್ ಎದುರೇ ಮಹಿಳೆ ನಡುರಸ್ತೆಯಲ್ಲಿ ಸೀರೆಯನ್ನ ಬಿಚ್ಚಿ ಎಸೆದು ಅನುಚಿತವಾಗಿ ವರ್ತಿಸಿದ ವಿಲಕ್ಷಣ ಪ್ರಕರಣ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ವಿಡಿಯೋ ತೆಗೆಯುವಂತೆ ಅನುಚಿತವಾಗಿ ವರ್ತಿಸಿದ ಪ್ರಕರಣವೊಂದು ನಂಜನಗೂಡಿನ ಶಿರಮಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ರತ್ನಮ್ಮ ಎಂಬಾಕೆ ಹೀಗೆ ಅನುಚಿತವಾಗಿ ಅದರಲ್ಲೂ ಊರಿನ ಜನರ ಎದುರೇ ಹೀಗೆ ಕೆಟ್ಟದಾಗಿ ವರ್ತಿಸಿದ್ದಾಳೆ.

ಮಹಿಳೆಯ ವರ್ತನೆ ವಿಡಿಯೋ ಇದೀಗ ವೈರಲ್ ಆಗಿದೆ.

ಶಿರಮಳ್ಳಿ ಗ್ರಾಮದಲ್ಲಿ ರತ್ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.ಈ ಸಂಬಂಧ ರತ್ನಮ್ಮ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನೋವು ಹೇಳಿಕೊಂಡಿದ್ದರು.ಅಲ್ಲದೆ ಎಸ್ಪಿ ಕಚೇರಿಯಲ್ಲೂ ಸಹ ದೂರು ನೀಡಿದ್ದರು.

ಹಾಗಾಗಿ ಈ ಬಗ್ಗೆ ಮಾಹಿತಿ ಪಡೆಯಲು ಹುಲ್ಲಹಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ ರತ್ನಮ್ಮನ ಮನೆಗೆ ಭೇಟಿ ಕೊಟ್ಟಿದ್ದಾಗ ಹೀಗೆ ಹುಚ್ಚಾಟ ಪ್ರದರ್ಶಿಸಿದ್ದಾಳೆ.

ರತ್ನಮ್ಮನ ವಿರುದ್ದವೂ ಹುಲ್ಲಹಳ್ಳಿ ಹಾಗೂ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಮಾಹಿತಿ ಪಡೆಯಲು ತೆರಳಿದ ಪೊಲೀಸ್ ಗೆ ತನ್ನ ಬಟ್ಟೆ ಬಿಚ್ಚಿಹಾಕಿ ಆತನಜೊತೆ ಸೆಲ್ಫಿ ವಿಡಿಯೋ ಮಾಡಲು ಯತ್ನಿಸಿದ್ದಾಳೆ.

ಪೊಲೀಸರ ಕರ್ತವ್ಯಕ್ಕೆ ಹೀಗೆ ಅನುಚಿತವಾಗಿ ವರ್ತಿಸುವ ಮೂಲಕ ಅಡ್ಡಿ ಪಡಿಸಿ ಬೆದರಿಕೆ ಹಾಕಿರುವ ಈ ಮಹಿಳೆಯ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಾಹಿತಿಗಾಗಿ ಬಂದ ಪೊಲೀಸ್ ಮುಂದೆ ಸೀರೆ ಬಿಚ್ಚಿ ಅನುಚಿತವಾಗಿ ವರ್ತಿಸಿದ ಮಹಿಳೆ Read More

ಮಹಿಳಾ ಉದ್ಯೋಗಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಮಹಿಳೆ!

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಪುಂಡರು,ಕಿಡಿಗೇಡಿಗಳು ಮಾತ್ರ ಪೋಸ್ಟ್ ಹಾಕ್ತಾರೆ ಅಂದುಕೊಂಡಿದ್ದರೆ ಅದು ತಪ್ಪು,ಮಹಿಳೆಯರು ಕೂಡಾ ಹೀಗೆ ಮಾಡಿದ ಉದಾಹರಣೆ ಇದೆ.

ಮಹಿಳೆಗೆ ಮಹಿಳೆಯೇ ಶತೃ ಎಂಬುದು ಈ ಪ್ರಕರಣದಿಂದ ಗೊತ್ತಾಗುತ್ತದೆ.

ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಈಗ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಾಪಿನ್ ಕಂಪನಿಗೆ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಮೃಣಾಲಿನಿ ಮನೋಹರ್ ಎಂಬಾಕೆ ಪೋಸ್ಟ್ ಮಾಡಿದ್ದಾರೆಂದು ನೊಂದ ಉದ್ಯೋಗಿ ದೂರು ದಾಖಲಿಸಿದ್ದಾರೆ.

ವ್ಯಕ್ತಿಯೊಬ್ಬರ ಜೊತೆ ಸಂಬಂಧ ಇದೆ ಎಂದು ಸುಳ್ಳು ಮಾಹಿತಿ ಹಾಕಿದ್ದಾರೆ.ಫೇಸ್ ಬುಕ್ ಮೆಸೆಂಜರ್ ನಲ್ಲಿ ಕ್ಕೈಂಟ್ಸ್ ಗಳನ್ನ ಗುರಿಯಾಗಿಸಿಕೊಂಡು ನನ್ನ ವಿರುದ್ದ ಅಶ್ಲೀಲವಾಗಿ ಕೆಟ್ಟಪದಗಳನ್ನ ಬಳಸಿ ತೇಜೋವಧೆ ಮಾಡಿದ್ದಾರೆಂದು ಉದ್ಯೋಗಿ ಆರೋಪಿಸಿದ್ದಾರೆ.

ನನ್ನ ಬಗ್ಗೆ ಪ್ರಾಸ್ಟಿಟ್ಯೂಟ್ ಎಂದು ಮಹಿಳೆ ಉಲ್ಲೇಖಿಸಿ ತೇಜೋವಧೆ ಮಾಡಿದ್ದಾರೆಂದು ದೂರಿದ್ದಾರೆ.

ಜತೆಗೆ ನನ್ನ ಅಜ್ಜಿಯ ಬಗ್ಗೆಯೂ ತಪ್ಪಾಗಿ ಮಾಹಿತಿ ನೀಡಿದ್ದಾರೆ.ನನ್ನ ಬಗ್ಗೆ ಅಸಭ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮೃಣಾಲಿನಿ ಮನೋಹರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೊಂದ ಮಹಿಳಾ ಉದ್ಯೋಗಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳಾ ಉದ್ಯೋಗಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಮಹಿಳೆ! Read More

ಮಾರಕಾಸ್ತ್ರಗಳಿಂದ ಹೊಡೆದುಮಹಿಳೆ ಕೊ*ಲೆ‌

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಚಾಮರಾಜನಗರದಲ್ಲಿ ಮಹಿಳೆಯೊಬ್ಬರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.

ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಡೊಳ್ಳಿಪುರದ ಶುಭ(೩೮) ಅರಣ್ಯ ವ್ಯಾಪ್ತಿ ವಲಯದಲ್ಲಿನ ಜಮೀನೊಂದರಲ್ಲಿ ಕೊಲೆಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

ಜಮೀನಿನಲ್ಲಿ ಪತಿ, ಪತ್ನಿ ಹಾಗೂ ಅತ್ತೆ ಮೂವರು ಇದ್ದು ಮಾರಕಾಸ್ತ್ರದಲ್ಲಿ ಹೊಡೆದು ಸಾಯಿಸಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ‌.

ಸ್ಥಳಕ್ಕೆ ಎಸ್ಪಿ ಬಿ.ಟಿ.ಕವಿತಾ, ಎಎಸ್ಪಿ ಶಶಿದರ್,ಡಿ ವೈ ಎಸ್ ಪಿ ಹಾಗೂ ಠಾಣಾ ಇನ್ಸ್ ಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದರು.ಈ‌ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿಧ್ದಾರೆ.

ಮಾರಕಾಸ್ತ್ರಗಳಿಂದ ಹೊಡೆದುಮಹಿಳೆ ಕೊ*ಲೆ‌ Read More

ಇನ್ಸ್ಟಾಗ್ರಾಂ ನಲ್ಲಿ ಪರಿಚಯ,ಪ್ರೀತಿ:ವಿವಾಹಿತೆಯ ಕೊಂದ ಯುವಕ!

ಮಂಡ್ಯ: ಇತ್ತೀಚೆಗೆ ಈ ಸಾಮಾಜಿಕ ಜಾಲತಾಣಗಳಿಂದ ಪರಿಚಿತರಾಗೋದು,ನಂತರ ಪ್ರೀತಿ,ಪ್ರೇಮ ಮೋಸ ಕಡೆಗೆ ಕೊಲೆಯಲ್ಲಿ ಅಂತ್ಯ.ಇದೆಲ್ಲ ಸಾಮಾನ್ಯ ಆಗಿಬಿಟ್ಟಿದೆ.

ಇಂತಹ ಪ್ರಕರಣಗಳು ಆಗಿಂದ್ದಾಗ್ಗೆ ಮಾಧ್ಯಮಗಳಲ್ಲಿ ಬರುತ್ತಿದ್ದರೂ ಜನ ಎಚ್ಚೆತುಕೊಳ್ಳದೆ ತಾವಾಗಿಯೇ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.ಇದಕ್ಕೆ ಏನು ಹೇಳಬೇಕೊ ತಿಳಿಯದಾಗಿದೆ.

ಇಂತಹದ್ದೇ ಮತ್ತೊಂದು ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ವಿವಾಹಿತ ಮಹಿಳೆಯನ್ನು ಇನ್ಸ್ಟಾಗ್ರಾಂ ನಲ್ಲಿ ಪರಿಚಯಿಸಿಕೊಂಡ ಯುವಕ ಪ್ರೀತಿಯ ನಾಟಕವಾಡಿ ಆಕೆಯೊಂದಿಗೆ ಚೆಕ್ಕಂದವಾಡಿ ಹತ್ತೇ ದಿನಗಳಲ್ಲಿ ಅವಳನ್ನು ಕೊಂದು ದೇಹವನ್ನು ತನ್ನದೇ ಜಮೀನಿನಲ್ಲೇ ಬಚ್ಚಿಟ್ಟ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಕರೋಟಿ ಗ್ರಾಮದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ ಕೊಲೆ ಆದ ವಿವಾಹಿತ ಮಹಿಳೆ.

ಕರೋಟಿ ಗ್ರಾಮದ ಪುನೀತ್ ಕೊಲೆ ಮಾಡಿ ಆಕೆಯ ದೇಹವನ್ನು ತನ್ನ ಜಮೀನಿನಲ್ಲೇ ಬಚ್ಚಿಟ್ಟಿದ್ದ.

ಇನ್ಸ್ಟಾಗ್ರಾಂ ನಲ್ಲಿ ಪ್ರೀತಿಯನ್ನ ಪುನೀತ್ ಪರಿಚಯ ಮಾಡಿಕೊಂಡು ಪ್ರೀತಿ-ಪ್ರೇಮ ಶುರು ಮಾಡಿದ್ದಾನೆ.

ಬೆಳಿಗ್ಗೆ ಮೈಸೂರು, ಮಂಡ್ಯದಲ್ಲಿ ಜಾಲಿ ರೈಡ್ ಮಾಡಿದ್ದಾರೆ.ಸಂಜೆ ಪ್ರಿಯತಮೆ ಮೈಮೇಲಿದ್ದ ಚಿನ್ನಾಭರಣ ದೋಚಿ ಬರ್ಬರ ಹತ್ಯೆ ಮಾಡಿದ್ದಾನೆ.

ಗಂಡ, ಮಕ್ಕಳಿದ್ದರೂ ಪುನೀತ್ ಜೊತೆ ಪ್ರೀತಿ ಲವ್ ನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾಳೆ.

ಭಾನುವಾರ ಮೈಸೂರಿಗೆ ಒಟ್ಟಿಗೆ ಇಬ್ಬರೂ ಕಾರಿನಲ್ಲಿ ತೆರಳಿದ್ದರು. ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡಿದ್ದಾರೆ.

ನಂತರ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶಕ್ಕೆ ಬಂದಿದ್ದಾರೆ.ಅದೇನಾಯಿತೊ ಇಬ್ಬರ ನಡುವೆ ಜಗಳ ಆಗಿದೆ.

ಆಗ ಪುನೀತ್ ಅಲ್ಲೆ ಕೊಲೆಗೈದು ಚಿನ್ನಾಭರಣ ದೋಚಿ ಬಳಿಕ ಪ್ರೀತಿಯ ದೇಹ ತಂದು ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಬಚ್ಚಿಟ್ಟಿದ್ದಾನೆ.

ಪ್ರೀತಿಯ ಪೋನ್ ಗೆ ಬಂದ ಕಾಲ್ ನಿಂದ ಪುನೀತ್ ಸಿಕ್ಕಿಬಿದ್ದಿದ್ದಾನೆ.
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈಗ ಕಂಬಿ ಎಣಿಸುತ್ತಿದ್ದಾನೆ.

ಇನ್ಸ್ಟಾಗ್ರಾಂ ನಲ್ಲಿ ಪರಿಚಯ,ಪ್ರೀತಿ:ವಿವಾಹಿತೆಯ ಕೊಂದ ಯುವಕ! Read More

ಮಣ್ಣಿನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಪ್ರಿಯಕರನೆ ಕೊಲೆಗಾರ!

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ಬಳಿ ಮಹಿಳೆಯನ್ನು ಕೊಲೆ ಮಾಡಿ ಹೂತು ಹಾಕಿದ್ದು ಆಕೆಯ ಪ್ರಿಯಕರನೇ ಎಂದು ಪೊಲೀಸರು ತಿಳಿಸಿದ್ದು,ಈತ ಈಗ ಕಂಬಿ ಎಣಿಸುತ್ತಿದ್ದಾನೆ.

ಕೊಳ್ಳೇಗಾಲ ಮೋಳೆಯ ಸೋನಾಕ್ಷಿ (29) ಯನ್ನು ಆಕೆಯ ಪ್ರಿಯಕರ ಅದೇ ಬಡಾವಣೆಯ ನಂಜಯ್ಯನ ಮಗ ಮಾದೇಶ ಅಲಿಯಾಸ್ ಮಹೇಶ್ ಕೊಲೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ.

ಉಪ್ಪಾರ ಬಡಾವಣೆಯ ಕುಮಾರ್ ಎಂಬುವ ಮಗಳು ಸೋನಾಕ್ಷಿ ಅದೇ ಬಡಾವಣೆಯಲ್ಲಿರುವ ಸೋದರಮಾವ ವಿಜಯ್ ಕುಮಾರ್ ನನ್ನು ಮದುವೆಯಾಗಿದ್ದಳು ಇವರಿಗೆ ಒಂದು ಹೆಣ್ಣು ಒಂದು ಗಂಡು ಇಬ್ಬರು ಮಕ್ಕಳಿದ್ದಾರೆ.

ಸೋನಾಕ್ಷಿಗೆ ಬಡಾವಣೆಯ ಮಹೇಶ್ ನೊಡನೆ ಅಕ್ರಮ ಸಂಬಂಧವಿತ್ತು. ಹಾಗಾಗಿ ಸೋನಾಕ್ಷಿ ಗಂಡನ ಜೊತೆ ಭಿನ್ನಾಭಿಪ್ರಾಯ ಮಾಡಿಕೊಂಡು ಆಗಾಗ ಮನೆಯಿಂದ ನಾಪತ್ತೆಯಾಗುವ ಚಾಳಿ ಬೆಳೆಸಿಕೊಂಡಿದ್ದಳು.

ಎರಡು ಮೂರು ಬಾರಿ ಗಂಡನನ್ನು ಬಿಟ್ಟು ನಾಪತ್ತೆಯಾಗಿದ್ದಳು, ಅದೇ ರೀತಿ ಕಳೆದ ಫೆಬ್ರವರಿ ತಿಂಗಳಲ್ಲೂ ಕಾಣಿಯಾಗಿದ್ದಳು ಈ ವೇಳೆ ಪೊಲೀಸರು ಪತ್ತೆ ಹಚ್ಚಿ ಕರೆತಂದು ಆಕೆಯ ತಾಯಿ ಹಾಗೂ ಸೋದರನ ಜೊತೆ ತವರು ಮನೆಗೆ ಕಳುಹಿಸಿದ್ದರು.

ಸೋನಾಕ್ಷಿಯ ಮೃತದೇಹ ಜೂ.19 ರಂದು ಗುರುವಾರ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು.

ಅಂದು ಶಶಿಕುಮಾರ್ ಎಂಬುವವರು ದನ ಮೇಯಿಸುತ್ತಿದ್ದ ವೇಳೆ ನಾಯಿಗಳು ಭೂಮಿಯಲ್ಲಿ ಹೂತಿದ್ದ ದೇಹದ ವಾಸನೆ ಹಿಡಿದು ಮಣ್ಣು ಎರಚಾಡಿ ಎಳೆದಾಡುತ್ತಿದ್ದುದ್ದು ಕಂಡು ಅಲ್ಲಿಗೆ ಹೋಗಿ ನೋಡಿದಾಗ ಶವದ ಮುಂಗೈ ಭೂಮಿಯಿಂದ ಹೊರಚಾಚಿರುವುದು ಕಾಣಿಸಿತ್ತು.

ಶಶಿಕುಮಾರ್ ಗಾಬರಿಯಾಗಿ ಪಟ್ಟಣ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವ ಮಾದಯ್ಯ, ಪಿ.ಎಸ್.ಐ ವರ್ಷ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಅಂದು ರಾತ್ರಿಯೇ ಚಾಮರಾಜನಗರದ ಸಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಶವ ಗುರುತು ಪತ್ತೆಗಾಗಿ ಇರಿಸಿದ್ದರು.ನಂತರ ಸೋನಾಕ್ಷಿ ತಾಯಿ ರಜನಿ ಮೃತ ದೇಹ ತಮ್ಮ ಮಗಳದ್ದೆಂದು ಗುರುತಿಸಿದ್ದರು.

ದೇಹದ ಬಲಗೆನ್ನೆಯ ಮೇಲೆ, ಎಡಭಾಗದ ಹಣೆಯ ಹತ್ತಿರ, ತಲೆಯ ಮೇಲ್ಬಾಗದಲ್ಲಿ ಹೊಡೆದಿರುವ ಗಾಯ ಕಂಡು ಬಂದಿತ್ತು.

ಐದಾರು ದಿನಗಳ ಹಿಂದೆ ಮೋಳೆ ಬಡಾವಣೆಯ ನಂಜಯ್ಯನ ಮಗ ಮಾದೇಶ ಅಲಿಯಾಸ್ ಮಹೇಶ್, ಕೆಂಚಶೆಟ್ಟಿ ಮಗ ಬಾಬು ಅಲಿಯಾಸ್ ಚಿಕ್ಕಬಾಬು ಅವರು ಸೋನಾಕ್ಷಿಯನ್ನು ಕೊಲೆ ಮಾಡಿ ಮಣ್ಣಿನಲ್ಲಿ ಹೂತಾಕಿದ್ದಾರೆಂದು ಅನುಮಾನ ವ್ಯಕ್ತ ಪಡಿಸಿ ಮೃತಳ ತಾಯಿ ರಜಿನಿ ದೂರು ನೀಡಿದ್ದರು.

ಪಟ್ಟಣ ಪೊಲೀಸ್ ಠಾಣೆಯ ಎಸೈ ವರ್ಷ ಅವರು ಪ್ರಕರಣ ದಾಖಲಸಿಕೊಂಡು ತನಿಖೆ ಪ್ರಾರಂಭಿಸಿದ್ದರು.

ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ಮಾದೇಶ ಅಲಿಯಾಸ್ ಮಹೇಶ್, ಬಾಬು ಅಲಿಯಾಸ್ ಚಿಕ್ಕ ಬಾಬು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮಾದೇಶ ಅಲಿಯಾಸ್ ಮಹೇಶ್ ಸೋನಾಕ್ಷಿಯ ಜೊತೆ ಅಕ್ರಮ ಸಂಬಂಧ ಇಟ್ಟು ಕೊಂಡು ಬಸ್ತೀಪುರ ಬಡಾವಣೆಯಲ್ಲಿ ಮನೆ ಮಾಡಿ ಇರಿಸಿಕೊಂಡಿದ್ದ ಎಂಬುದು ಗೊತ್ತಾಗಿದೆ.

ಜೂನ್ 13 ರಂದು ಇಬ್ಬರ ನಡುವೆ ಜಗಳವಾಗಿದೆ,ಮರುದಿನವೂ ಮತ್ತೆ ಇಬ್ಬರ ನಡುವೆ ಜಗಳವಾಗಿ ಸೋನಾಕ್ಷಿಗೆ ಹಲ್ಲೆ ಮಾಡಿ ಸಾಯಿಸಿ ಬೈಕ್‌ನಲ್ಲಿ ಹಾಕಿ ಕೊಂಡು ಹಳೇ ಹಂಪಾಪುರ ಸುವರ್ಣಾವತಿ ನದಿಯ ಬಳಿ ತಂದಿದ್ದಾನೆ.

ಅಲ್ಲೆ ಇದ್ದ ಮಾವಟಿಯಿಂದ ಮಣ್ಣನ್ನು ತೆಗೆದು ಗುಂಡಿ ಯೊಳಗೆ ಹೂತು ಹಾಕಿದ್ದೆ ಎಂದು ಪೊಲೀಸ್ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಬಾಬು ಅಲಿಯಾಸ್ ಚಿಕ್ಕಬಾಬು ನನ್ನು ಸಹ ವಿಚಾರಣೆ ನಡೆಸಲಾಗಿದೆ. ಕೊಲೆಗೆ ಮತ್ತಷ್ಟು ಸಾಕ್ಷಿಗಳು ದೊರಕದ ಕಾರಣ ಪೊಲೀಸ್ ಅಧಿಕಾರಿಗಳು ಈ ಇಬ್ಬರು ಆರೋಪಿಗಳ ವಿಚಾರಣೆಯನ್ನು ಮುಂದುವರಿ ಸಿದ್ದಾರೆ.

ಮಣ್ಣಿನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಪ್ರಿಯಕರನೆ ಕೊಲೆಗಾರ! Read More

ನದಿ ದಡದಲ್ಲಿ ಹೂತು ಹಾಕಿದ್ದ ಮೃತ ದೇಹದ ಗುರುತು ಪತ್ತೆ ಹಚ್ಚಿದ ಪೊಲೀಸರು

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಮೃತ ದೇಹದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮೃತ ಮಹಿಳೆಯನ್ನು ಪಟ್ಟಣದ ಕೊಳ್ಳೇಗಾಲ ಮೋಳೆ (ಉಪ್ಪಾರ ಬಡಾವಣೆ)ಯ ವಿಜಯ್ ಕುಮಾರ್ ಎಂಬುವರ ಪತ್ನಿ ಸೋನಾಕ್ಷಿ (29) ಎಂದು ಗುರುತಿಸಲಾಗಿದೆ.

ಉಪ್ಪಾರ ಬಡಾವಣೆಯ ಕುಮಾರ್ ಎಂಬುವರ ಮಗಳು ಸೋನಾಕ್ಷಿ ಅದೇ ಬಡಾವಣೆಯಲ್ಲಿರುವ ಸೋದರಮಾವ ವಿಜಯ್ ಕುಮಾರ್ ನನ್ನು ಮದುವೆಯಾಗಿದ್ದಳು. ಗಂಡ ವಿಜಯ್ ಕುಮಾರ್ ಕೂಲಿ ಕೆಲಸ ಮಾಡಿಕೊಂಡಿದ್ದು ಇವರಿಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳಿದ್ದಾರೆ.

ಸೋನಾಕ್ಷಿಗೆ ಬಡಾವಣೆಯ ಯುವಕನ ಜೊತೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗುತ್ತಿದ್ದು ಕಳೆದ ಫೆಬ್ರವರಿ ತಿಂಗಳಲ್ಲಿ ಕಾಣಿಯಾಗಿದ್ದಳು,ಆಗ ಪೊಲೀಸರು ಪತ್ತೆ ಹಚ್ಚಿ ಕರೆತಂದು ಆಕೆಯ ತಾಯಿ ಹಾಗೂ ಸೋದರನ ಜೊತೆ ತವರು ಮನೆಗೆ ಕಳುಹಿಸಿದ್ದರು.

ಸೋನಾಕ್ಷಿಯ ಮೃತದೇಹ ಗುರುವಾರ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು.

ದುಷ್ಕರ್ಮಿಗಳು ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಅರೆಬರೆ ಹೂತು ಹಾಕಿ ಪರಾರಿಯಾಗಿದ್ದರು.

ಮಣ್ಣಿನಿಂದ‌ ಮಹಿಳೆಯ ಕೈ ಕಾಣುತ್ತಿದ್ದು ಗ್ರಾಮದ ಜನತೆ ಭೀತರಾಗಿದ್ದರು. ಗುರುವಾರ ಗ್ರಾಮದ ಶಶಿಕುಮಾರ್( ಗೃಹ ರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತಾರೆ)
ಎಂಬುವವರು ದನ ಮೇಯಿಸುತ್ತಿದ್ದ ವೇಳೆ ನಾಯಿಗಳು ಭೂಮಿಯಲ್ಲಿ ಹೂತಿದ್ದ ದೇಹದ ವಾಸನೆ ಹಿಡಿದು ಮಣ್ಣು ಎರಚಾಡಿ ಎಳೆದಾಡುತ್ತಿದ್ದುದ್ದು ಕಂಡು ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ಶವದ ಮುಂಗೈ ಭೂಮಿಯಿಂದ ಹೊರಚಾಚಿರುವುದು ಕಾಣಿಸಿತ್ತು.

ಶಶಿಕುಮಾರ್ ಶವವನ್ನು ಕಂಡು ಗಾಬರಿಯಾಗಿ ಪಟ್ಟಣ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು.

ನಂತರ ಪೊಲೀಸರು ರಾತ್ರಿ 11 ಗಂಟೆಯಲ್ಲಿ ಶವವನ್ನು ಮಣ್ಣಿನಿಂದ ಹೊರತೆಗೆಸಿ ನೋಡಿದಾಗ ದೇಹ ವಿವಾಹಿತ ಮಹಿಳೆಯಾಗಿದ್ದು ತಾಳಿ ಕಾಲುಂಗುರ ಹಾಗೂ ಚಿನ್ನದ ಬಣ್ಣದ ಬಳೆ ಧರಿಸಿರುವುದು ಕಂಡು ಬಂದಿತ್ತು.

ಶವ ಹೂಳಲಾಗಿದ್ದ ಸುಮಾರು 20 ಮೀಟರ್ ದೂರದಲ್ಲಿ ಒಂದು ದೀಪ, ಕುಡಿಯುವ ನೀರಿನ ಬಾಟಲಿ ಇನ್ನಿತರ ಪೂಜಾ ಸಾಮಗ್ರಿಗಳು ಪತ್ತೆಯಾಗಿದ್ದು ಮಾಟ, ಮಂತ್ರ ವಾಮಾಚಾರ ಶಂಕೆ ವ್ಯಕ್ತವಾಗಿತ್ತು. ಯಾರೋ ದುಷ್ಕರ್ಮಿಗಳು ಮಹಿಳೆಯನ್ನು ಅತ್ಯಾಚಾರ ವ್ಯಸಗಿ ಕೊಲೆ ಮಾಡಿ ತಂದು ಹೂತು ಹಾಕಿರಬಹುದು ಎಂಬ ಅನುಮಾನವೂ ಕಾಡುತ್ತಿತ್ತು.

ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವ ಮಾದಯ್ಯ, ಪಿಎಸ್ಐ ವರ್ಷ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಅಂದು ರಾತ್ರಿಯೇ ಚಾಮರಾಜನಗರದ ಸಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಶವ ಗುರುತು ಪತ್ತೆಗಾಗಿ ಇರಿಸಲಾಗಿತ್ತು.

ಮೃತಳ ತಾಯಿ ರಜನಿ ಮೃತ ದೇಹವನ್ನು ಗುರುತಿಸಿದ್ದು,ಆಕೆ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿರುವ ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತನಿಖೆಯ ನಂತರ ಯಾರು,ಯಾತಕ್ಕಾಗಿ ಕೊಲೆ ಮಾಡಿದ್ದಾರೆಂಬುದು ತಿಳಿಯಲಿದೆ.

ನದಿ ದಡದಲ್ಲಿ ಹೂತು ಹಾಕಿದ್ದ ಮೃತ ದೇಹದ ಗುರುತು ಪತ್ತೆ ಹಚ್ಚಿದ ಪೊಲೀಸರು Read More

ಮಗಳನ್ನು 29ನೇ ಮಹಡಿಯಿಂದ ತಳ್ಳಿ, ತಾನೂ ಜಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಮುಂಬೈ: ಮಹಾರಾಷ್ಟ್ರದ ಪನ್ವೇಲ್‌ನಲ್ಲಿರುವ ವಸತಿ ಸಮುಚ್ಚಯವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಎಂಟು ವರ್ಷದ ಮಗಳನ್ನು 29ನೇ ಮಹಡಿಯ ಫ್ಲಾಟ್‌ನಿಂದ ತಳ್ಳಿ ನಂತರ ತಾನೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆ ಬುಧವಾರ ಪಲಸ್ಪೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಗಳನ್ನು ತಳ್ಳಿದ 37 ವರ್ಷದ ಮೈಥಿಲಿ ದುವಾ ಎಂಬ ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎಂದು ವರದಿಯಾಗಿದೆ. ಮೈಥಿಲಿ ತನ್ನ ಮಗುವನ್ನು ತಳ್ಳಿ ನಂತರ ತಾನೂ ಜಿಗಿದಿದ್ದಾಳೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪನ್ವೇಲ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಮಗಳನ್ನು 29ನೇ ಮಹಡಿಯಿಂದ ತಳ್ಳಿ, ತಾನೂ ಜಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ Read More