ಸೇವಾಶ್ರಮ ಮಕ್ಕಳ ಜೊತೆವಸಿಷ್ಠ ಸಿಂಹ ಜನ್ಮದಿನ ಆಚರಣೆ

ಮೈಸೂರು: ವಸಿಷ್ಠ ಸಿಂಹ ಸ್ನೇಹ ಬಳಗದ ವತಿಯಿಂದ ಮೈಸೂರಿನ ವಿಜಯನಗರದ
ಸವಿ ನೆನಪು ಫೌಂಡೇಶನ್ ಸೇವಾಶ್ರಮ ದಲ್ಲಿ ಕಂಚಿನ ಕಂಠದ ನಾಯಕ ನಟ ವಸಿಷ್ಟ ಸಿಂಹ ಅವರ ಜನ್ಮ ದಿನದ ವಿಶೇಷವಾಗಿ ಆಚರಿಸಲಾಯಿತು.

ಸೇವಾ ಶ್ರಮ ಮಕ್ಕಳ ಜೊತೆ ವಸಿಷ್ಠ ಸಿಂಹ ಸ್ನೇಹ ಬಳಗದ ಸದಸ್ಯರು ಕೇಕ್ ಕಟ್ ಮಾಡಿ ನಂತರ ಮಕ್ಕಳಿಗೆ ಉಪಹಾರ ನೀಡಿ ನೆಚ್ಚಿನ ನಟ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು

ಈ ವೇಳೆ ಮಾತನಾಡಿದ ವಸಿಷ್ಠ ಸಿಂಹ ಸ್ನೇಹ ಬಳಗದ ಅಧ್ಯಕ್ಷ ಬೈರತಿ ಲಿಂಗರಾಜು
ಮೈಸೂರು ಕಲಾವಿದರ ತವರೂರು, ಕಂಚಿನ ಕಂಠದ ನಾಯಕ ವಶಿಷ್ಟ ಸಿಂಹ ಮೈಸೂರಿನವರು ಎಂಬುದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.

ವಸಿಷ್ಟ ಸಿಂಹ ಅವರು ಮಹಾಮಾರಿ ಕರೋನ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕಲಾವಿದರ ಕುಟುಂಬಗಳು, ಆಟೋ ಚಾಲಕರು, ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸೇವಾ ಶ್ರಮ ಮಕ್ಕಳ ಜೊತೆ ಸ್ನೇಹಿತರಲ್ಲಿ ಆಚರಿಸಿದ್ದೇವೆ ಎಂದು ಹೇಳಿದರು

ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಆರ್ ವಿನೋದ್ ಮಾತನಾಡಿ
ವಶಿಷ್ಟ ಸಿಂಹ ಅವರ ಹುಟ್ಟು ಹಬ್ಬವನ್ನು
ಯಾವುದೇ ಆಡಂಬರವಿಲ್ಲದೆ ಇಂತಹ ಮಕ್ಕಳ ಜೊತೆ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೆಯ ಎಂದು ತಿಳಿಸಿದರು.

ಚಿತ್ರನಟರ ಅಭಿಮಾನಿಗಳು ದುಂದುವೆಚ್ಚ ಮಾಡಿ ಜನ್ಮ ದಿನಾಚರಣೆ ಆಚರಿಸುವ ಬದಲು ಸೇವಾ ಮನೋಭಾವ ಇಟ್ಟುಕೊಂಡು ಸೇವೆಯನ್ನೇ ಗುರಿ ಮಾಡಿಕೊಂಡು ಕೆಲಸ ಮಾಡಿದರೆ ನಿಜಕ್ಕೂ ಆ ನಟರಿಗೂ ಮತ್ತು ಅವರ ಅಭಿಮಾನಿಗಳಿಗೂ ಕೀರ್ತಿ ತಂದುಕೊಡುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮಾನವ ಹಕ್ಕುಗಳ ರಕ್ಷಣೆ ಹಾಗೂ ಬ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಆರ್ ಯಶೋಧ, ಚೆಲುವರಾಜ್ ನಾಯಕ್, ಮಹಾನ್ ಶ್ರೇಯಸ್, ಮೋಹನ್ ಕುಮಾರ್, ಮೋಹನ್, ರಕ್ಷು ಆಚಾರ್, ವಿಶಾಲ್, ಸಾಯಿ ಕೃಷ್ಣ, ಕೌಶಿಕ್ ಮತ್ತು ಸ್ನೇಹಿತರು, ಅಭಿಮಾನಿಗಳು ಈ ವೇಳೆ ಹಾಜರಿದ್ದರು.

ಸೇವಾಶ್ರಮ ಮಕ್ಕಳ ಜೊತೆವಸಿಷ್ಠ ಸಿಂಹ ಜನ್ಮದಿನ ಆಚರಣೆ Read More