ಕೊಳ್ಳೇಗಾಲ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಬಸವರಾಜು ಆಯ್ಕೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಡಿ. ಕೆಂಪಯ್ಯರವರು ಆಯ್ಕೆ ಯಾಗಿದ್ದಾರೆ.

ನ್ಯಾಯಾಲಯದ ಕಟ್ಟಡದಲ್ಲಿರುವ ವಕೀಲರ ಗ್ರಂಥಾಲಯದಲ್ಲಿ ಶುಕ್ರವಾರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.

ಹಿರಿಯ ವಕೀಲರಾದ
ಮಾದಪ್ಪ ಚುನಾವಣಾಕಾರಿಗಳಾಗಿದ್ದರು.

ವಕೀಲರಾದ ಡಿ ವೆಂಕಟಾಚಲ, ಎಂ. ಮಲ್ಲಿಕಾರ್ಜುನ, ಸಿ.ಬಿ. ಮಹೇಶ್ ಕುಮಾರ್ ಹಾಗೂ ಎನ್ ಬಸವರಾಜು ಅವರುಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಚುನಾವಣೆಯಲ್ಲಿ 86 ಮತಗಳು ಚಲಾವಣೆಗೊಂಡು 40 ಮತಗಳು ಎನ್. ಬಸವರಾಜುರವರಿಗೆ ಲಭಿಸಿದ್ದರಿಂದ ಅಂತಿಮವಾಗಿ ಎನ್. ಬಸವರಾಜು ಜಯಗಳಿಸಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಳಿದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಡಿ. ಕೆಂಪಯ್ಯ, ಉಪಾಧ್ಯಕ್ಷರಾಗಿ ಸೀಮಾ ತಹಸೀನಾ, ಖಜಾಂಚಿಯಾಗಿ ಅಮೃತ ರಾಜ್, ಸಹ ಕಾರ್ಯದರ್ಶಿಯಾಗಿ ವಿನಯ್ ಅವರು ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಸಿ.ರವಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಬಿ.ಮಹೇಶ್ ಕುಮಾರ್ ಅವರ ಅವಧಿ ಕಳೆದ ಜುಲೈಗೆ ಮುಕ್ತಾಯ ಕೊಂಡಿದ್ದರ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ಚುನಾವಣೆ ನಡೆಯಿತು.

ಕೊಳ್ಳೇಗಾಲ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಬಸವರಾಜು ಆಯ್ಕೆ Read More

ಚಿತ್ರ ಮಂದಿರದಲ್ಲೇ ಭಗೀರಥ ಚಲನಚಿತ್ರ ವೀಕ್ಷಿಸಲು ಮನವಿ

ಮೈಸೂರು: ಸಮಾಜಕ್ಕೆ ಬೇಕಾದ ಪ್ರಬಲವಾದ ಸಂದೇಶಗಳನ್ನು ಹೊಂದಿರುವ ಕನ್ನಡ ಭಗೀರಥ ಚಲನಚಿತ್ರವನ್ನು ಎಲ್ಲರೂ ವೀಕ್ಷಿಸಬೇಕೆಂದು ಮೈಸೂರಿನ ವಕೀಲರ ಸಂಘದ ಕಾರ್ಯದರ್ಶಿ ಚರಣ್ ರಾಜ್ ಕರೆ ನೀಡಿದರು.

ನಾಡಿನ ಎಲ್ಲಾ ಜನರು
ಸಿನಿಮಾ ಮಂದಿರಗಳಲ್ಲೇ ಭಗೀರಥ ಚಿತ್ರ ನೋಡುವುದರ ಮೂಲಕ ಈ ಚಿತ್ರವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಮೈಸೂರಿನ ಹುಟ್ಟು ಹೋರಾಟಗಾರರು, ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಡೇರಿಂಗ್ ಸ್ಟಾರ್ ಎಸ್ ಜೈಪ್ರಕಾಶ್ ಅವರು ನಾಯಕ ನಟರಾಗಿ ನಟಿಸಿರುವ ಭಗೀರಥ ಚಲನಚಿತ್ರ ತಂಡ ಮೈಸೂರಿನ ವಕೀಲರ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚಿತ್ರ ತಂಡಕ್ಕೆ ಶುಭ ಕೋರಿ ಅವರು ಮಾತನಾಡಿದರು.

ಮೈಸೂರು ವಕೀಲರ ಸಂಘದ ಉಪಾಧ್ಯಕ್ಷ, ಮಾಜಿ ಅಧ್ಯಕ್ಷರಾದ ಮಹದೇವ ಸ್ವಾಮಿ, ಮಾಜಿ ಕಾರ್ಯದರ್ಶಿ ಉಮೇಶ್, ಶೋಭಾ, ಸುನೀತ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಾಗರಾಜು, ನೇಹಾ, ಪ್ರೀತಿ ಸಿಂಗ್ ಈ ವೇಳೆ ಉಪಸ್ಥಿತರಿದ್ದರು.

ಚಿತ್ರ ಮಂದಿರದಲ್ಲೇ ಭಗೀರಥ ಚಲನಚಿತ್ರ ವೀಕ್ಷಿಸಲು ಮನವಿ Read More