ಉತ್ತರಾಖಂಡದಲ್ಲಿ ಮೇಘಸ್ಫೋಟ:ಕೊಚ್ಚಿ ಹೋದ ಊರು

ಉತ್ತರಾಖಂಡ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಸುನಾಮಿಯಂತೆ ಅಪ್ಪಳಿಸಿ ಒಂದು ಊರೇ ಕೊಚ್ಚಿಹೋಗಿದೆ.

ಭಾರೀ ಮಳೆ ಹಾಗೂ ಏಕಾಏಕಿ ಮೇಘ ಸ್ಪೋಟವಾಗಿ ಪ್ರವಾಹದ ಅಲೆ ರಕ್ಕಸನಂತೆ ಅಪ್ಪಳಿಸಿ ಮನೆಗಳನ್ನು ತನ್ನೊಡನೆ ಎಳೆದೊಯ್ದಿದೆ.ಇದರಿಂದಾಗಿ ಏನಾಗುತ್ತಿದೆ ಎಂಬ ಅರಿವಾಗುವ ಮುನ್ನ ಹಲವಾರು ಮಂದಿ ಕಾಣೆಯಾಗಿದ್ದಾರೆ.

ಭಾರಿ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಸಾರ್ವಜನಿಕರು ನದಿಗಳ ಬಳಿ ಸೆಲ್ಫಿ ತೆಗೆದುಕೊಳ್ಳಲು, ರೀಲ್ಸ್‌ ಮಾಡಲು ಹೋಗಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ದಿಢೀರ್ ಪ್ರವಾಹ ಸಂಬಂಧ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿದ್ದು, ಈ ಸುದ್ದಿ ಅತ್ಯಂತ ದುಃಖಕರ ಎಂದಿದ್ದಾರೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಸೇರಿದಂತೆ ಇತರೆ ತಂಡಗಳು ದಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಧಾಮಿ ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಮೇಘಸ್ಫೋಟ:ಕೊಚ್ಚಿ ಹೋದ ಊರು Read More

ಸತತ ಮಳೆಗೆ ತತ್ತರಿಸಿದ ಉತ್ತರಾಖಂಡ್

ಡೆಹ್ರಾಡೂನ್​: ಉತ್ತರಾಖಂಡ್​ನಲ್ಲಿ ಕಳೆದ 48 ಗಂಟೆಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿದ್ದು ಬಹಳಷ್ಟು ರಸ್ತೆಗಳು ಬಂದ್ ಆಗಿವೆ.

ಗುಡ್ಡಗಾಡು ಪ್ರದೇಶದಲ್ಲಿ ಮಳೆಯಿಂದ ಹೆದ್ದಾರಿ, ಗಡಿ ರಸ್ತೆಗಳು ಸೇರಿದಂತೆ 24 ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಸಂಚಾರ ಬಂದ್​ ಆಗವೆ,ಹಾಗಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಗುಡ್ಡ ಕುಸಿತ ಸೇರಿದಂತೆ ಅನೇಕ ನೈಸರ್ಗಿಕ ವಿಪತ್ತುಗಳು ಸಂಭವಿಸಿದೆ. ಇದರಿದಾಗಿ 18 ಜನರು ಸಾವನ್ನಪ್ಪಿದ್ದು, ಇಬ್ಬರು ಕಣ್ಮರೆಯಾಗಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದ ನೈಸರ್ಗಿಕ ವಿಪತ್ತಿನ ನಿರ್ವಹಣೆ ಸಂಬಂಧ ಮುಖ್ಯ ಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ.

ಮಳೆ ಹೀಗೇ ಮುಂದುವರೆದರೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ,ಹಾಗಾಗಿ ತಕ್ಷಣವೇ ರಕ್ಷಣೆ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದಾರೆ‌

ನೈಸರ್ಗಿಕ ವಿಪತ್ತಿನಿಂದ ಜೂನ್​ 1ರಿಂದ ಜೂನ್​ 23ರ ನಡುವೆ 18 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ, ಇಬ್ಬರು ನಾಪತ್ತೆಯಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ನೂನ್​ 1ರಿಂದ 23ರ ವರೆಗೆ 28 ಮಂದಿ ಸಾವನ್ನಪ್ಪಿದ್ದು, 128 ಮಂದಿ ಗಾಯಗೊಂಡಿದ್ದಾರೆ. ಚಾರ್​ಧಾಮ್​ ಯಾತ್ರೆಯಲ್ಲಿ 142 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.

ಭಗೇಶ್ವರ ಜಿಲ್ಲೆ ಸೇರಿದಂತೆ ಹಲವು ಕಡೆ ಭಾರೀ ಮಳೆಯಿಂದಾಗಿ ಆರೇಂಜ್​ ಅಲರ್ಟ್​ ಘೋಷಣೆ ಮಾಡಲಾಗಿದ್ದು, ಡೆಹ್ರಾಡೂನ್​, ನೈನಿತಾಲ್​ ಮತ್ತು ರುದ್ರಪ್ರಯಾಗ್​ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್​ ಘೋಷಣೆ ಮಾಡಲಾಗಿದೆ.

​​

ಸತತ ಮಳೆಗೆ ತತ್ತರಿಸಿದ ಉತ್ತರಾಖಂಡ್ Read More

ಅತ್ಯಾಚಾರ:ಕಾನ್ಸ್​​ಟೇಬಲ್​ ವಿರುದ್ಧಮಹಿಳಾ ಸಬ್ ಇನ್ಸ್‌ಪೆಕ್ಟರ್ ಆರೋಪ

ಡೆಹ್ರಾಡೂನ್​: ಉತ್ತರಾಖಂಡ ರಾಜಧಾನಿಯಲ್ಲಿ ಮಹಿಳಾ ಸಬ್​ ಇನ್ಸ್​​​​ಪೆಕ್ಟರ್ ಒಬ್ಬರು, ಕಾನ್ಸ್​ಟೇಬಲ್​ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ.

ಕಾನ್ಸ್​ಟೇಬಲ್​ ಖಾಸಗಿ ವಿಡಿಯೋಗಳನ್ನು ಮಾಡಿ ತನ್ನನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿರುವುದಾಗಿ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ​ದೂರಿದ್ದಾರೆ.

ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ಡೆಹ್ರಾಡೂನ್​ ಪಟೇಲ್​ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪೊಲೀಸ್​ ಕಾನ್ಸ್​ಟೇಬಲ್​ ​ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ದೂರುದಾರ ಮಹಿಳಾ ಸಬ್​ ಇನ್ಸ್​​ಪೆಕ್ಟರ್​​ ಹೇಳಿಕೆಯನ್ನೂ ಮ್ಯಾಜಿಸ್ಟ್ರೇಟ್​ ಮುಂದೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಸಬ್​ ಇನ್ಸ್‌ಪೆಕ್ಟರ್ ರನ್ನು ಕೆಲವು ಸಮಯದ ಹಿಂದೆ ಗುಡ್ಡಗಾಡು ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದ ಮಹಿಳಾ ಇನ್ಸ್​​ಪೆಕ್ಟರ್​ ವೈಯಕ್ತಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಬಯಲು ಜಿಲ್ಲೆಗೆ ವರ್ಗಾವಣೆ ಮಾಡಲು ವಿನಂತಿಸಿದ್ದರು. ನಂತರ ಪೊಲೀಸ್ ಇಲಾಖೆ ಅವರನ್ನು ಡೆಹ್ರಾಡೂನ್‌ನ ಒಂದು ಶಾಖೆಗೆ ವರ್ಗಾವಣೆ ಮಾಡಿತ್ತು.

ನಾನು ಹಾಗೂ ಆರೋಪಿ ಒಂದೇ ಠಾಣೆಯಲ್ಲಿ ಕರ್ತವ್ಯದಲ್ಲಿದ್ದೆವು. ಒಂದು ದಿನ ನಾನು ಕಚೇರಿಗೆ ಬರುವುದು ತಡವಾಗಿದ್ದು, ಅಧಿಕಾರಿಗಳು ವಿವರಣೆ ಕೇಳಿದ್ದರು. ಮನೆ ಕರ್ತವ್ಯ ಸ್ಥಳದಿಂದ ಬಹಳ ದೂರದಲ್ಲಿದೆ. ಮರುದಿನ ಕಚೇರಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುವಂತೆ ನಗರದ ಒಂದು ಹೋಟೆಲ್​ನಲ್ಲಿ ತಂಗಲು ನಿರ್ಧರಿಸಿದ್ದೆ. ಎಲ್ಲಾ ಕಚೇರಿ ಕೆಲಸಗಳನ್ನು ಆರೋಪಿ ಕಾನ್ಸ್​​​ಟೇಬಲ್​​ ಮಾಡುತ್ತಿದ್ದರು. ಹಾಗಾಗಿಯೇ ನಾನು ಕೂಡ ಆರೋಪಿ ಕಾನ್ಸ್​​ಟೇಬಲ್​​​ಗೆ ಹೋಟೆಲ್‌ನಲ್ಲಿ ನನಗಾಗಿ ಒಂದು ಕೊಠಡಿ ಕಾಯ್ದಿರಿಸುವಂತೆ ಕೇಳಿದ್ದೆ”.

ಆರೋಪಿ ಕಾನ್ಸ್​ಟೇಬಲ್​ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದಾಗಿ ಹೇಳಿದ್ದ. ಕರ್ತವ್ಯ ಮುಗಿದ ನಂತರ, ಆರೋಪಿ ನನ್ನನ್ನು ಹೋಟೆಲ್‌ಗೆ ಕರೆದೊಯ್ದಿದ್ದು, ಕೊಠಡಿ ನೋಡುವ ನೆಪದಲ್ಲಿ ನನ್ನ ಕೋಣೆಗೆ ಬಂದಿದ್ದ. ಈ ವೇಳೆ ಆರೋಪಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅತ್ಯಾಚಾರದ ಸಮಯದಲ್ಲಿ ಆರೋಪಿ ವಿಡಿಯೋ ಮಾಡಿದ್ದು, ಯಾರಿಗಾದರೂ ಏನಾದರೂ ಹೇಳಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ನಂತರ ನಾನು ತುಂಬಾ ಭಯಭೀತಳಾಗಿದ್ದೆ.ಏಳು ದಿನ ರಜೆ ಹಾಕಿದೆ,ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದಾಗ, ಆರೋಪಿ ಕಾನ್ಸ್​ಟೇಬಲ್​ ಕಿರುಕುಳ ನೀಡಲು ಪ್ರಾರಂಭಿಸಿದ. ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ. ಕೊನೆಗೂ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದೇನೆ ನನಗೆ ನ್ಯಾಯ ಸಿಗಬೇಕು ಎಂದು ಮಹಿಳಾ ಸಬ್​ ಇನ್ಸ್​ಪೆಕ್ಟರ್​ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಡೆಹ್ರಾಡೂನ್​ ಎಸ್​ಎಸ್​ಪಿ ಅಜಯ್​ ಸಿಂಗ್​, ಸಂತ್ರಸ್ತೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ, ಆಕೆಯ ಹೇಳಿಕೆ ದಾಖಲಿಸಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರೊಂದಿಗೆ, ಗ್ರಾಮೀಣ ವಿಕಾಸನಗರ ಎಸ್ಪಿ ಕೂಡ ಈ ಪ್ರಕರಣದ ತನಿಖೆಯ ಮೇಲೆ ಗಮನ ಹರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅತ್ಯಾಚಾರ:ಕಾನ್ಸ್​​ಟೇಬಲ್​ ವಿರುದ್ಧಮಹಿಳಾ ಸಬ್ ಇನ್ಸ್‌ಪೆಕ್ಟರ್ ಆರೋಪ Read More