ದುಬಾರಿ ಬೆಲೆಯ ಕಾರುಗಳ ಕೂಲಿಂಗ್ ಪೇಪರ್ ತೆರವುಗೊಳಿಸಿ:ತೇಜಸ್ವಿ

ಮೈಸೂರು: ಮೈಸೂರಿನಾದ್ಯಂತ ಥಾರ್, ಇನೋವಾ ಕ್ರಿಸ್ತ ಸೇರಿದಂತೆ ದುಬಾರಿ ಬೆಲೆಯ ಕಾರುಗಳ ಕೂಲಿಂಗ್ ಪೇಪರ್ ಗಳನ್ನು ತೆರವುಗೊಳಿಸಬೇಕೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.

ಮೈಸೂರು ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಟ್ರಾಫಿಕ್ ಪೊಲೀಸರಿಂದ ವಾಹನ ತಪಾಸಣೆ ಕಾರ್ಯ ಆಗಾಗ ನಡೆಯುತ್ತಿರುತ್ತದೆ‌,ಇದು ಒಳ್ಳೆಯದು.

ಆದರೆ ಬಹುತೇಕ ಕಡೆಗಳಲ್ಲಿ ಪೋಲಿಸರು ದುಬಾರಿ ಬೆಲೆಯ ಕಾರುಗಳನ್ನು ತಡೆಯುವುದೆ ಇಲ್ಲ ಸಣ್ಣ ಪುಟ್ಟ ಕಾರುಗಳನ್ನು ರಸ್ತೆ ಮಧ್ಯಕ್ಕೆ ಬಂದು ತಡೆದು ನಿಲ್ಲಿಸಿ ತಪಾಸಣೆ ಮಾಡಿ ದಂಡ ವಿಧಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

ಮೈಸೂರು ಜಿಲ್ಲೆಯಲ್ಲಿ ರಿಂಗ್ ರಸ್ತೆಗಳಲ್ಲಿ ಥಾರ್, ಇನೋವಾ ಕ್ರಿಸ್ತ, ಮತ್ತು ಫಾರ್ಚುನರ್ ಕಾರುಗಳಲ್ಲಿ ಕೂಲಿಂಗ್ ಪೇಪರ್ ಅನ್ನು ಹೆಚ್ಚು ಬಳಸಿರುತ್ತಾರೆ, ಬಹುತೇಕ
ಕಾರುಗಳಲ್ಲಿ ವಾಹನ ಚಾಲನೆ ಮಾಡುತ್ತಿರುವವರು ಯಾರೆಂದು ಕೂಡ ತಿಳಿಯುವುದಿಲ್ಲ ಅಂತಹ ಕಾರುಗಳನ್ನು ಪೋಲಿಸರು ತಡೆದು ತಪಾಸಣೆ ನಡೆಸುತ್ತಿಲ್ಲ,ಇದು ಹೀಗೇ ಮುಂದುವರಿದರೆ ಸಾರ್ವಜನಿಕರು ಪೋಲಿಸರ ವಿರುದ್ಧ ಅಸಹಾಕರ ತೋರುವ ಸಂದರ್ಭ ಉಂಟಾಗುತ್ತದೆ ಎಂದು ತೇಜಸ್ವಿ ಎಚ್ಚರಿಸಿದ್ದಾರೆ.

ಪೋಲಿಸ್ ಇಲಾಖೆಯವರು ತಾರತಮ್ಯ ಮಾಡದೆ ದುಬಾರಿ ಬೆಲೆಯ ಕಾರುಗಳನ್ನು ಕೂಡಾ ತಡೆದು ತಪಾಸಣೆ ಮಾಡಬೇಕು ಎಂದು ತೇಜಸ್ವಿ ಮನವಿ ಮಾಡಿದ್ದಾರೆ.

ಮೈಸೂರಿನ ಬಹುತೇಕ ವಾಹನಗಳಲ್ಲಿ ಕೂಲಿಂಗ್ ಪೇಪರ್ ಹೆಚ್ಚಾಗಿ ಬಳಸುತ್ತಿರುವುದು ಕಂಡು ಬಂದಿದೆ
ಇನ್ನು ಮುಂದೆ ಅಂತಹ ಕಾರುಗಳನ್ನು ಬಿಡದೆ ತಪಾಸಣೆ ಮಾಡಿ ಸ್ಥಳದಲ್ಲೇ ಕೂಲಿಂಗ್ ಪೇಪರ್ ಅನ್ನು ತೆರವುಗೊಳಿಸಿ ದಂಡ ವಿಧಿಸಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಪೋಲಿಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ದುಬಾರಿ ಬೆಲೆಯ ಕಾರುಗಳ ಕೂಲಿಂಗ್ ಪೇಪರ್ ತೆರವುಗೊಳಿಸಿ:ತೇಜಸ್ವಿ Read More

ಹುಲಿಗಳಿಗೆ ವಿಷಹಾಕಿ ಕೊಲ್ಲುವವರಿಗೆ ಕಠಿಣ ಕ್ರಮ:ಸಿಎಂ ಹೇಳಿಕೆಗೆ ತೇಜಸ್ವಿ ಸ್ವಾಗತ

ಮೈಸೂರು: ಕನ್ನಡ ಕ್ರಾಂತಿದಳದ ನಿರಂತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಲಿಗಳನ್ನು ವಿಷಹಾಕಿ ಕೊಲ್ಲುವವರಿಗೆ ಕಠಿಣ ಕಾನೂನು ಕ್ರಮ ಶತ ಸಿದ್ಧ ಎಂದು ಹೇಳಿರುವುದನ್ನು ಸ್ವಾಗತಿಸುವುದಾಗಿ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ
ಹೇಳಿದ್ದಾರೆ.

ನಿರಂತರವಾಗಿ ಹುಲಿಗಳಿಗೆ ವಿಷಹಾಕಿ ಕೊಲ್ಲುತ್ತಿರುವುದರ ವಿರುದ್ಧ ತೇಜಸ್ವಿ ನಾಗಲಿಂಗಸ್ವಾಮಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ ಹಾಗೂ ಅನೇಕ ಬಾರಿ ಪತ್ರ ಬರೆಯುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಹುಲಿಗಳು ಮತ್ತು ಆನೆಗಳ ಹತ್ಯೆ ಮಾಡುವವರ ವಿರುದ್ಧ ನಿರಂತರವಾಗಿ ಸಮರಸಾರುತ್ತ ಬಂದಿದಿದ್ದೇವೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಇದೆಲ್ಲದರ ಪರಿಣಾಮವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ನಡೆದ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಹುಲಿಗಳನ್ನು ವಿಷಾಹಾಕಿ ಹತ್ಯೆ ಮಾಡುವುದುನ್ನು ರಾಜ್ಯ ಸರ್ಕಾರ ಸಹಿಸಲ್ಲ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಶತಸಿದ್ಧ ಎಂದು ಕಠಿಣವಾಗಿ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿಯವರ ಈ ನಿಲುವಿನಿಂದ ನನಗೆ ಅತ್ಯಂತ ಸಂತಸ ತಂದಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಸ್ವಾಗತಿಸಿದ್ದಾರೆ.

ಆದರೆ ಮುಖ್ಯಮಂತ್ರಿಗಳ‌ ಈ ನಿರ್ಧಾರ ಹೇಳಿಕೆಗೆ ಮಾತ್ರ ಸಿಮೀತ ವಾಗಬಾರದು ಹುಲಿಗಳು ಮತ್ತು ಆನೆಗಳ ಹತ್ಯೆ ಪ್ರಕರಣದಲ್ಲಿ ಈ ಗಿರುವ ಕಾನೂನನ್ನು ತಿದ್ದುಪಡಿ ಮಾಡಿ ಹೇಳಿದ ಹಾಗೆ ಅತ್ಯಂತ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ತೇಜಸ್ವಿ ಮನವಿ ಮಾಡಿದ್ದಾರೆ.

ಆನೆಗಳು ಮತ್ತು ಹುಲಿಗಳು ನಮ್ಮ ರಾಜ್ಯದ ಮೊದಲ ಮತ್ತು ಎರಡನೇಯ ಸ್ಥಾನದಲ್ಲಿದೆ ಇವುಗಳ ಸಂತತಿ ಬೇಟೆಗಾರರ ದುಷ್ಕೃತ್ಯ ದಿಂದ ನಾಶವಾಗದಂತೆ ಕಠಿಣ ಕಾನೂನು ಜಾರಿಗೆ ತರಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಹುಲಿಗಳಿಗೆ ವಿಷಹಾಕಿ ಕೊಲ್ಲುವವರಿಗೆ ಕಠಿಣ ಕ್ರಮ:ಸಿಎಂ ಹೇಳಿಕೆಗೆ ತೇಜಸ್ವಿ ಸ್ವಾಗತ Read More

ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ:ತೇಜಸ್ವಿ

ಮೈಸೂರು: ಈ ಬಾರಿ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಯನ್ನು ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್ ಅವರಿಂದ ಮಾಡಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ಬೂಕರ್ ಪ್ರಶಸ್ತಿ ಪಡೆದ ಸಂದರ್ಭದಲ್ಲೇ ಈ ಬಾರಿಯ ದಸರಾ ಉತ್ಸವವನ್ನು ಬಾನು ಮುಷ್ತಾಕ್ ಅವರಿಂದ ಉದ್ಘಾಟನೆ ಮಾಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆ ಅನೇಕ ಪತ್ರಿಕೆಗಳಲ್ಲಿ ಈ ಕುರಿತು ವರದಿ ಕೂಡ ಆಗಿತ್ತು ಎಂದು ಹೇಳಿದ್ದಾರೆ.

ಈಗ ರಾಜ್ಯ ಸರ್ಕಾರ ಅಧಿಕೃತವಾಗಿ ಬಾನು ಮುಷ್ತಾಕ್ ಅವರ ಹೆಸರನ್ನು ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಕೆಲವರು ಬಾನು ಮುಷ್ತಾಕ್ ಅವರು ಮುಸ್ಲಿಂ ಸಮುದಾಯದ ದವರು ಅವರಿಂದ ದಸರಾ ಉದ್ಘಾಟನೆ ಮಾಡಿಸದಂತೆ ವಿರೋಧ ಮಾಡಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನಮ್ಮದು ಜಾತ್ಯತೀತ ರಾಷ್ಟ್ರ ವಾಗಿದ್ದು ಸರ್ವ ಧರ್ಮದ ಶಾಂತಿಯ ತೋಟ ವಾಗಿದೆ, ಕೆಲವು ರಾಜಕಾರಣಿಗಳ ಈ ರೀತಿಯ ಹೇಳಿಕೆಗಳಿಂದ ಕೋಮು ಸೌಹಾರ್ದತೆಗೆ ದಕ್ಕೆ ಉಂಟಾಗುತ್ತದೆ ದಸರಾ ಸಂದರ್ಭದಲ್ಲಿ ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಇಂತಹಾ ಹೇಳಿಕೆ ಕಾರಣ ವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ

ಕೂಡಲೇ ರಾಜ್ಯ ಸರ್ಕಾರ ಅಥವಾ ಪೋಲಿಸ್ ಇಲಾಖೆ ಜಾತಿ ಧರ್ಮದ ಹೆಸರಿನಲ್ಲಿ ಈ ರೀತಿಯ ಹೇಳಿಕೆ ಕೊಡುವವರಿಗೆ ತಿಳುವಳಿಕೆ ನೀಡಬೇಕು ಮೀತಿ ಮೀರಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ:ತೇಜಸ್ವಿ Read More

ಕನ್ನಡ ಚಳವಳಿಗಾರರು,ಸಾಮಾಜಿಕ ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಿ- ತೇಜಸ್ವಿ

ಮೈಸೂರು: ರಾಜ್ಯದಲ್ಲಿನ ಕನ್ನಡ ಚಳವಳಿಗಾರರು ಮತ್ತು ಸಾಮಾಜಿಕ ಹೋರಾಟಗಾರ ರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಕನ್ನಡ ಚಳವಳಿಗಾರ ತೇಜಸ್ವಿ ಮನವಿ ಮಾಡಿದ್ದಾರೆ.

ಸಮಾಜದಲ್ಲಿ ಅನ್ಯಾಯ ನಡೆಯುತ್ತಿದ್ದಾಗ ಮತ್ತು ಅಕ್ರಮಗಳು ಕಂಡಾಗ ಕನ್ನಡ ಚಳವಳಿಗಾರರು ಮತ್ತು ಸಾಮಾಜಿಕ ಹೋರಾಟಗಾರರು ವಿರೋಧ ಪಕ್ಷಗಳ ರೀತಿ ಹೋರಾಟದ ಮೂಲಕ ಸರ್ಕಾರದ ಗಮನಕ್ಕೆ ತರುವಂತಹ ಕಾರ್ಯಗಳನ್ನು ಈ ಹಿಂದಿನಿಂದಲೂ ಮಾಡುತ್ತ ಬಂದಿದ್ದಾರೆ.

ರಾಜ್ಯದಲ್ಲಿರುವ ಇಂತಹ ಹೋರಾಟಗಾರರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕಿದೆ.
ಹೋರಾಟಗಾರರು ತಮ್ಮ ಜೀವನವನ್ನೇ ತ್ಯಾಗ ಮಾಡಿ ನಾಡು ನುಡಿ ನೆಲ ಜಲ ಭಾಷೆ ವಿಷಯದಲ್ಲಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿ ಹಾಗೂ ಅಕ್ರಮ ಚಟುವಟಿಕೆಗಳ ವಿರುದ್ಧ ರೌಡಿ ಚಟುವಟಿಕೆಗಳನ್ನು ಶಾಶ್ವತವಾಗಿ ಮಟ್ಟಹಾಕುವಂತೆ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ.

ಪ್ರಸಕ್ತ ಧರ್ಮಸ್ಥಳ ವಿಚಾರವೂ ದೇಶಾದ್ಯಂತ ಸಂಚಲನ ಮೂಡಿಸಿದೆ ಇದರ ಮುಂಚೂಣಿ ಹೋರಾಟಗಾರರಿಗೆ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ತೇಜಸ್ವಿ ಕೋರಿದ್ದಾರೆ.

ಮೈಸೂರಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ನಗರ ಪಾಲಿಕೆಗೆ ದೂರು ನೀಡಿದ ರಮೇಶ್ ಕುಮಾರ್ ಮಾಲಿ ಎಂಬುವವರ ಮೇಲೆ ಮಾಜಿ ನಗರ ಪಾಲಿಕೆ ಸದಸ್ಯ ಹಲ್ಲೆ ಮಾಡಿದ್ದಾರೆ.

ಇಂತಹ ಪ್ರಭಾವಿಗಳ ವಿರುದ್ಧ ಹೋರಾಟ ನಡೆಸುತ್ತಾ ಬಂದಿರುವ ಹೋರಾಟಗಾರರನ್ನು ಗುರುತಿಸಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

ಕನ್ನಡ ಚಳವಳಿಗಾರರು,ಸಾಮಾಜಿಕ ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಿ- ತೇಜಸ್ವಿ Read More

ಹುಲಿಗಳ ಸಾವು;ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಲು ತೇಜಸ್ವಿ ಆಗ್ರಹ

ಮೈಸೂರು: ಮಲೆ ಮಹದೇಶ್ವರ ವನ್ಯ ಜೀವಿಧಾಮದಲ್ಲಿ ಐದು ಹುಲಿಗಳ ಸಾವಿಗೆ ಕಾರಣರಾದವರಿಗೆ‌ ಗಲ್ಲು ಶಿಕ್ಷೆ ವಿಧಿಸುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

ಹೂಗ್ಯಂ ವಲಯದ ಮೀಣ್ಯಂ ಸಮೀಪದ ಗಾಜನೂರು ಗಸ್ತ್ ಎಂಬ ಪ್ರದೇಶದಲ್ಲಿ ವಿಷಪ್ರಾಶನ ಮಾಡಿ ರಾಷ್ಟ್ರೀಯ ಪ್ರಾಣಿಯಾದ ಐದು ಹುಲಿಗಳ ಸಾವಿಗೆ ಕಾರಣವಾದ ವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದರ ಪರಿಣಾಮ ಮೂವರನ್ನು ಬಂಧಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ತೇಜಸ್ವಿ ಹೇಳಿದ್ದಾರೆ.

ಹುಲಿಯನ್ನು ಕೊಂದವರಿಗೆ ನಮ್ಮ ದೇಶದಲ್ಲಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬೇಕೆಂದು ಕಾನೂನು ಇದೆ, ಆದರೆ ಐದು ಹುಲಿಗಳ ಸಾವಿಗೆ ಕಾರಣವಾದ ವರಿಗೆ ಗಲ್ಲು ಶಿಕ್ಷೆಗೆ ಒಳಪಡಿಸುವುದು ಸೂಕ್ತ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹುಲಿಗಳ ಸಾವು;ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಲು ತೇಜಸ್ವಿ ಆಗ್ರಹ Read More

ಶಿವಾಜಿ ಜಯಂತಿ ಆಚರಣೆ ನಿಷೇಧಿಸುವಂತೆ ತೇಜಸ್ವಿ ಮನವಿ

ಮೈಸೂರು : ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧ ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶಿವಾಜಿ ಮಹಾರಾಜರ ಕೊಡುಗೆ ಕನ್ನಡ ನಾಡಿಗೆ ಶೂನ್ಯ ಎಂದಿದ್ದಾರೆ.

ಶಿವಾಜಿ ಸೈನ್ಯ ಕ್ರಿ ಶ ೧೬೭೬ ರಲ್ಲಿ ಕರ್ನಾಟಕಕ್ಕೆ ದಂಡ ಯಾತ್ರೆ ಕೈಗೊಳ್ಳುತ್ತದೆ,
ಈ ಸಮಯದಲ್ಲಿ ಶಿವಾಜಿಯ ಸೈನಿಕರು ಬೆಳವಾಡಿ ಸಮೀಪದ ಗೋ ಶಾಲೆಗೆ ತೆರಳಿ‌ ಗೋವುಗಳನ್ನು ಅಪಹರಿಸುತ್ತಾರೆ.

ಇದು ಬೆಳವಡಿಯ ಮಲ್ಲಮ್ಮ ರನ್ನು ಕೆರಳಿಸುತ್ತದೆ ಏಕೆಂದರೆ ಹಿಂದೂ ಗಳಿಗೆ ಗೋವು ಗಳೆಂದರೆ ಸಾಕ್ಷಾತ್ ಮಾತೆಯೇ ಸರಿ ಅದರಲ್ಲಿಯೂ ಕೃಷಿಕ ಪಂಚಮಸಾಲಿ ಗಳಿಗೆ ಗೋವು ಗಳೆಂದರೆ ಪಂಚ ಪ್ರಾಣ.

ಗೋವುಗಳನ್ನು ಮರಳಿ ಪಡೆಯಲು ರಣಚಂಡಿ ಯಂತೆ ದಂಡೆತ್ತಿ ಹೋದ ಮಲ್ಲಮ್ಮನ ಎರಡು ಸಾವಿರ ಮಹಿಳಾ ಸೈನ್ನ ವನ್ನು ಕಂಡ ಶಿವಾಜಿ ಸೈನ್ಯ ಕಂಗಾಲಾಗುತ್ತದೆ.

ಮರಾಠ ಸಾಮ್ರಾಜ್ಯದ ಸೈನಿಕರನ್ನು ಮಹಿಳಾ ಸೈನ್ಯ ಧೂಳೀಪಟ ಮಾಡುತ್ತದೆ ಮಲ್ಲಮ್ಮ ಪರಾಕ್ರಮ ವನ್ನು ಕಂಡ ಶಿವಾಜಿ ಮಲ್ಲಮ್ಮ ಳನ್ನು ಸಾಕ್ಷಾತ್ ತುಳಜಾ ಭವಾನಿ ಎಂದು ಬಣ್ಣಿಸಿ ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚನೆ ಮಾಡಿ ಅಪಹರಿಸಿದ ಗೋವುಗಳನ್ನು ಹಿಂದಿರುಗಿಸಿ ಮಲ್ಲಮ್ಮನ ಬಳಿ ಪ್ರಾಣ ಭಿಕ್ಷೆ ಬೇಡುತ್ತಾನೆ.ಇದು ಇತಿಹಾಸ‌.

ಇಂತವರ ಜಯಂತಿಯನ್ನು ಕರ್ನಾಟಕ ರಾಜ್ಯದಲ್ಲಿ ಆಚರಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಪ್ರಶ್ನಿಸಿದ್ದಾರೆ.

ನಮ್ಮ ಕರ್ನಾಟಕ ರಾಜ್ಯದಲ್ಲೇ ಪರಾಕ್ರಮ ಮೆರೆದಿದ್ದ ಕನ್ನಡದ ಅನೇಕ ರಾಜರುಗಳು ಇರುವಾಗ ಪರರಾಜ್ಯದ ರಾಜನನ್ನು ಅದರಲ್ಲೂ ನಮ್ಮ ಕನ್ನಡತಿ ಬೆಳವಡಿ ಮಲ್ಲಮ್ಮಳ ಬಳಿ ಸೋತು ಸುಣ್ಣವಾಗಿ ಪ್ರಾಣ ಭಿಕ್ಷೆ ಪಡೆದವರ ಜಯಂತಿ ನಮ್ಮ ರಾಜ್ಯದಲ್ಲಿ ಅನವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಕರ್ನಾಟಕ ರಾಜ್ಯದಲ್ಲಿ ಶಿವಾಜಿ ಜಯಂತಿ ಆಚರಣೆ ಮಾಡದಂತೆ ನಿಷೇಧ ಮಾಡಬೇಕೆಂದು ತೇಜಸ್ವಿ ಮನವಿ ಮಾಡಿದ್ದಾರೆ.

ಶಿವಾಜಿ ಜಯಂತಿ ಆಚರಣೆ ನಿಷೇಧಿಸುವಂತೆ ತೇಜಸ್ವಿ ಮನವಿ Read More

ಸಮಾಜದಲ್ಲಿ ಆಶಾಂತಿ ತಂದ ಸತೀಶ್ ಗಡಿಪಾರಿಗೆ ಆಗ್ರಹಿಸಿ ಧರಣಿ

ಮೈಸೂರು: ಮೈಸೂರು ನಗರದಲ್ಲಿ ಪ್ರಚೋದನೆ ನೀಡಿ ಗಲಭೆ ಉಂಟು ಮಾಡಿ‌ ಸಮಾಜದಲ್ಲಿ ಆಶಾಂತಿ ಉಂಟು ಮಾಡಿದ ಸತೀಶ್ ಅಲಿಯಾಸ್ ಪಾಂಡುರಂಗ ಅವರನ್ನು ಗಡಿಪಾರು ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯುಸಿದ್ದಾರೆ.

ಎರಡು ಧರ್ಮಗಳ ನಡುವೆ ಘರ್ಷಣೆಗೆ ಕಾರಣವಾಗಿ,ಸಮಾಜದ ಸ್ವಾಸ್ಥ್ಯ ಕದಡಿದ ಸತೀಶ್ ಅಲಿಯಾಸ್ ಪಾಂಡುರಂಗ ಮೇಲೆ ರೌಡಿ ಪಟ್ಟಿ ತೆರೆದು ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆಯನ್ನು ಅವರು ಆಗ್ರಹಿಸಿದರು.

ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮತ್ತು ಕರ್ನಾಟಕ ಯುವ ಘರ್ಜನೆ ಅಧ್ಯಕ್ಷ ಉಮೇಶ್ ಇಂದು ಅಗ್ರಹಾರ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಧರಣಿ ನಂತರ ಮಾತನಾಡಿದ ತೇಜಸ್ವಿ,ನಮ್ಮ ಮೈಸೂರು ಶಾಂತಿ,ನೆಮ್ಮದಿಗೆ ಹೆಸರಾಗಿದೆ.ಆದರೆ ಸತೀಶ್ ಅಲಿಯಾಸ್ ಪಾಂಡುರಂಗ ನಂತವರಿಂದಾಗಿ ನಗರದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ,ಪೊಲೀಸರು ಕೂಡಲೇ ಆತನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಮಾಜದಲ್ಲಿ ಆಶಾಂತಿ ತಂದ ಸತೀಶ್ ಗಡಿಪಾರಿಗೆ ಆಗ್ರಹಿಸಿ ಧರಣಿ Read More

ಮುಡಾ ಕೇಸ್ ಸಿಬಿಐಗೆ ವಹಿಸಲು ಕೋರ್ಟ್ ನಿರಾಕರಣೆ :ಸತ್ಯಕ್ಕೆ ಸಿಕ್ಕ ಜಯ- ತೇಜಸ್ವಿ

ಮೈಸೂರು:ಧಾರವಾಡ ಹೈಕೋರ್ಟ್ ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿರುವುದು ಸತ್ಯಕ್ಕೆ ಜಯ ಸಿಕ್ಕಿದಂತಾಗಿದೆ ಎಂದು
ಕೃಷ್ಣ ರಾಜ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ಸುಮಾರು 40 ವರ್ಷದ ರಾಜಕಾರಣದ ಇತಿಹಾಸದಲ್ಲಿ ಸಿದ್ದರಾಮಯ್ಯನವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿಕೊಂಡು ಬಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ, ಉಪಮುಖ್ಯಮಂತ್ರಿಗಳಾಗಿ, ಸಚಿವರಾಗಿ ರಾಜ್ಯಕ್ಕೆ ಮತ್ತು ವಿಶೇಷವಾಗಿ ಮೈಸೂರಿಗೆ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಇಂತಹ ಧೀಮಂತ ನಾಯಕನ ವಿರುದ್ಧ ಬಿಜೆಪಿಯವರು ಮತ್ತು ಕಾಣದ ಕೈಗಳು ಎಷ್ಟೆ ಷಡ್ಯಂತ್ರ ಮಾಡಿದರೂ ಸತ್ಯಕ್ಕೆ ಜಯವಾಗಲಿದೆ ಎಂಬುದಕ್ಕೆ ಧಾರವಾಡ ಹೈಕೋರ್ಟ್ ತೀರ್ಪು ಸಾಕ್ಷಿ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.

ಮುಡಾ ಕೇಸ್ ಸಿಬಿಐಗೆ ವಹಿಸಲು ಕೋರ್ಟ್ ನಿರಾಕರಣೆ :ಸತ್ಯಕ್ಕೆ ಸಿಕ್ಕ ಜಯ- ತೇಜಸ್ವಿ Read More

ರಾಮಾನುಜ ರಸ್ತೆಯ ಅಭಿವೃದ್ಧಿ ಕಾರ್ಯ ಆರಂಭ:ತೇಜಸ್ವಿ ಹೋರಾಟಕ್ಕೆ ಸಿಕ್ಕ ಪ್ರತಿಫಲ

ಮೈಸೂರು: ವರ್ಷಗಳಿಂದ ಅಭಿವೃದ್ಧಿ ಕಾಣದೆ ವಂಚಿತವಾಗಿದ್ದ ರಾಮಾನುಜ ರಸ್ತೆಯ 8 ನೇ ತಿರುವಿನಿಂದ ಕಂಸಾಳೆ ಮಹದೇವಯ್ಯ ವೃತ್ತದವರೆಗೆ ಕಡೆಗೂ ಅಭಿವೃದ್ಧಿ ‌ಭಾಗ್ಯ ಒದಗಿಬಂದಿದ್ದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮತ್ತಿತರರ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ.

ಈ ಭಾಗದ ರಸ್ತೆಗೆ ಡಾಂಬರೀಕರಣ ಆಗದೆ ಸ್ಥಳೀಯ ನಿವಾಸಿಗಳಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತಿರುವದನ್ನು ಗಮನಿಸಿ ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಕಳೆದ ನವೆಂಬರ್ 1 ರಂದು ರಾಮಾನುಜ ರಸ್ತೆಯ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು.

ಆದರ ಪರಿಣಾಮವಾಗಿ ಇಂದು ಕೃಷ್ಣ ರಾಜ ಕ್ಷೇತ್ರದ ಶಾಸಕರಾದ ಶ್ರೀ ವತ್ಸ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ರಾಮಾನುಜ ರಸ್ತೆಯ 8ನೇ ತಿರುವಿನಿಂದ ಕಂಸಾಳೆ ಮಹದೇವಯ್ಯ ವೃತ್ತದ ವರೆಗಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಶಾಸಕರಾದ ಶ್ರೀ ವತ್ಸ ಅವರು ವಿಳಂಬವಾದರು ಸಹ ರಾಮನುಜ ರಸ್ತೆಯ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿರುವುದನ್ನು ತೇಜಸ್ವಿ ನಾಗಲಿಂಗ ಸ್ವಾಮಿ ಸ್ವಾಗತಿಸಿದ್ದಾರೆ.

ರಾಮಾನುಜ ರಸ್ತೆಯ ಅಭಿವೃದ್ಧಿ ಕಾರ್ಯ ಆರಂಭ:ತೇಜಸ್ವಿ ಹೋರಾಟಕ್ಕೆ ಸಿಕ್ಕ ಪ್ರತಿಫಲ Read More

ಪೆಂಗಲ್ ಚಂಡಮಾರುತ;ಶಾಲಾ, ಕಾಲೇಜಿಗೆ ಡಿ.5 ರ ತನಕ ರಜೆ ಘೋಷಿಸಲು ತೇಜಸ್ವಿ ಮನವಿ

ಮೈಸೂರು: ಪೆಂಗಲ್ ಚಂಡಮಾರುತದಿಂದ ಸಾಕಷ್ಟು ಹಾನಿಗಳಾಗುತ್ತಿದ್ದು,ಮಕ್ಕಳ ಹಿತದೃಷ್ಟಿಯಿಂದ ಶಾಲಾ,ಕಾಲೇಜುಗಳಿಗೆ ಡಿಸೆಂಬರ್ 5 ರ ವರೆಗೂ ರಜೆ ಘೋಷಿಸಬೇಕೆಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಅವರಿಗೆ ಮನವಿ ಮಾಡಿರುವ ತೇಜಸ್ವಿ,ಸೋಮವಾರ ರಜೆ ಮಾಡಿರುವುದು ಸ್ವಾಗತಾರ್ಹವಾಗಿದೆ,ಆದರೆ ಮಳೆ ಇನ್ನೂ ಮುಂದುವರಿಯಲಿರು ವುದರಿಂದ ರಜೆಯನ್ನು ಐದರವರೆಗೂ ವಿಸ್ತರಿಸಬೇಕೆಂದು ಕೋರಿದ್ದಾರೆ‌.

ಈಗಾಗಲೇ ಹವಾಮಾನ ಇಲಾಖೆ ಮೈಸೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಚಳಿ ಮತ್ತು ನಿರಂತರ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಿದ್ದು,ಯಲ್ಲೊ ಅಲರ್ಟ್ ಘೋಷಿಸಲಾಗಿದೆ.

ಮಂಜು ಕವಿದ ವಾತಾವರಣ ತೀವ್ರ ಸ್ವರೂಪದ ಚಳಿ ಇರುವುದರಿಂದ ವಿದ್ಯಾರ್ಥಿಗಳು‌ ಅದರಲ್ಲೂ ಪುಟ್ಟ ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳಲು ಸಮಸ್ಯೆ ಉಂಟಾಗುತ್ತಿದೆ.

ಪೋಷಕರು ಆತಂಕ್ಕೆ ಒಳಗಾಗಿದ್ದಾರೆ
ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಮೈಸೂರು ಜಿಲ್ಲೆಯಲ್ಲೂ ಕೂಡ ಶಾಲಾ ಕಾಲೇಜುಗಳಿಗೆ ಡಿ.5 ರ ತನಕ ರಜೆ ಘೋಷಿಸಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಪೆಂಗಲ್ ಚಂಡಮಾರುತ;ಶಾಲಾ, ಕಾಲೇಜಿಗೆ ಡಿ.5 ರ ತನಕ ರಜೆ ಘೋಷಿಸಲು ತೇಜಸ್ವಿ ಮನವಿ Read More