ರಾಜ್ಯದಲ್ಲಿ ಚಡ್ಡಿ ಗ್ಯಾಂಗ್ ಆತಂಕ: ನೈಟ್ ಬೀಟ್ ಹೆಚ್ಚಿಸಲು ತೇಜಸ್ವಿ ಮನವಿ

ಮೈಸೂರು: ರಾಜ್ಯದಲ್ಲಿ ಚಡ್ಡಿ ಗ್ಯಾಂಗ್ ಕೃತ್ಯಗಳು ಹೆಚ್ಚಾಗುತ್ತಿದ್ದು ರಾತ್ರಿ ಆದರೆ ಸಾಕು ನಾಗರಿಕರಲ್ಲಿ ಕಳವಳ ಹೆಚ್ಚಾಗಿದೆ ಎಂದು
ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ

ಕಳೆದ ನಾಲ್ಕು ತಿಂಗಳ ಹಿಂದೆ ಚಡ್ಡಿ ಗ್ಯಾಂಗ್ ಮಂಗಳೂರಿನಲ್ಲಿ ಮನೆಗಳ ಮೇಲೆ ನಡೆಸಿದ ದರೋಡೆ ಪ್ರಕರಣ ಮಾಸುವ ಮುನ್ನವೇ ನಿನ್ನೆ ಮಧ್ಯರಾತ್ರಿ ಮಂಡ್ಯ ಜಿಲ್ಲೆಯಲ್ಲೂ ಮನೆಯೊಂದರ ಮೇಲೆ ದರೋಡೆ ಕೃತ್ಯ ನಡೆಸಿದೆ.

ಈ ಚಡ್ಡಿ ಗ್ಯಾಂಗ್ ದರೋಡೆ ಕೋರರು ಮೈಸೂರಿಗೂ ಸಹ ಬರಬಹುದು ಎಂದು ನಾಗರಿಕರು ಭಯಗೊಂಡಿದ್ದಾರೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಆತಂಕ‌ ವ್ಯಕ್ತಪಡಿಸಿದ್ದಾರೆ.

ಕೂಡಲೆ ಮೈಸೂರಿನಲ್ಲಿ ನೈಟ್ ಬೀಟ್ ಹೆಚ್ಚಿಸಬೇಕು ಎಂದು ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರಿಗೆ ತೇಜಸ್ವಿ ಮನವಿ ಮಾಡಿದ್ದಾರೆ.

ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿ ಗಸ್ತು ತಿರುಗುವ ಪಾಳಿಗೆ (ನೈಟ್ ಬಿಟ್) ಹೆಚ್ಚು ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಿ ನಾಗರಿಕರು ಆತಂಕಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸಬೇಕು ಎಂದು ಮನವಿ ಕೋರಿದ್ದಾರೆ.

ಮೈಸೂರಿನ ಹೊಸ ಬಡಾವಣೆಗಳು ಮತ್ತು ನಿರ್ಜನ ಪ್ರದೇಶದಲ್ಲಿ ಹೆಚ್ಚಾಗಿ ನೈಟ್ ಬೀಟ್ ಮಾಡುವ ಮೂಲಕ ಚಡ್ಡಿ ಗ್ಯಾಂಗ್ ಮಟ್ಟ ಹಾಕಬೇಕು ಎಂದು ಕನ್ನಡ ತೇಜಸ್ವಿ ನಾಗಲಿಂಗ ಸ್ವಾಮಿ ಪೋಲಿಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಚಡ್ಡಿ ಗ್ಯಾಂಗ್ ಆತಂಕ: ನೈಟ್ ಬೀಟ್ ಹೆಚ್ಚಿಸಲು ತೇಜಸ್ವಿ ಮನವಿ Read More

ಡಲ್ ಆದ ಮಕ್ಕಳ ಚಿತ್ತ ಸೆಳೆಯುತ್ತಿದ್ದ ಕಾಟನ್ ಕ್ಯಾಂಡಿ

ಮೈಸೂರು: ಸದಾ ಗಾಢ ಪಿಂಕ್ ಬಣ್ಣದಲ್ಲಿ
ಮಕ್ಕಳ ಚಿತ್ತ ಸೆಳೆಯುತ್ತಿದ್ದ ಕಾಟನ್ ಕ್ಯಾಂಡಿ ಈಗ ಬಣ್ಣ ಕಳೆದುಕೊಂಡು ಪೇಲವವಾಗಿದೆ.

ಇದನ್ನೇ ನಂಬಿ ಜೀವನ ಕಟ್ಟಿಕೊಂಡಿದ್ದವರ ಬದುಕು ಕೂಡಾ ಮೂರಾಬಟ್ಟೆಯಾಗಿದೆ.

ಬಾಂಬೆ ಮಿಠಾಯಿ, ಬೊಂಬಾಯಿ ಮಿಠಾಯಿ, ಕಾಟನ್ ಕ್ಯಾಂಡಿ, ಹತ್ತಿ ಬತ್ತಿ ಮುಂತಾದ ಹೆಸರುಗಳಿಂದ ಕರೆಯುವ ಈ ಸಿಹಿತಿಂಡಿಗೆ
ಆರೋಗ್ಯ ದೃಷ್ಟಿಯಿಂದ ಸರ್ಕಾರ ವಿಧಿಸಿದ ಕ್ರಮಗಳಿಂದಾಗಿ ಬಣ್ಣ ಕಳಚಿಹೋಗಿದೆ.

ಬಣ್ಣ ಹಚ್ಚಿ ಬೀದಿಗೆ ಬರುವಂತಿಲ್ಲ,ಬಂದರೆ‌ ಕ್ರಮ ಗ್ಯಾರಂಟಿ,ಆದರೆ ಫೇಮಸ್ ಪಿಂಕ್ ಬಣ್ಣವಿಲ್ಲದಿದ್ದರೆ ಯಾರೂ ಇದರ ಕಡೆ ನೋಡುವುದಿಲ್ಲ.

ಮಕ್ಕಳು ಅಷ್ಟೇ ‌ಏಕೆ ದೊಡ್ಡವರಿಗೂ ಆಕರ್ಷಕ ತಿನಿಸಾದ ಈ ಬಾಂಬೆ ಮಿಠಾಯಿ ಅಥವಾ‌ ಕಾಟನ್ ಕ್ಯಾಂಡಿಯ ರೂಪ ಮಾಸಲಾಗಿ‌ ಆಕರ್ಷಣೆ‌ ಕಳೆದುಕೊಂಡಿದೆ.

ಹಳ್ಳಿಗಳಲ್ಲಿ ಸೈಕಲ್ ಮೇಲೆ ಗಾಜಿನ ಡಬ್ಬಿಗಳಲ್ಲಿ ತುಂಬಿಕೊಂಡು ಬರುತ್ತಿದ್ದ, ಬಾಂಬೆ ಮಿಠಾಯಿ ಅಣ್ಣ ನಾಲ್ಕಾಣೆ, ಎಂಟಾಣೆಗೆ ಒಂದಷ್ಟು ಎಳೆಗಳನ್ನ ಕೈಗಿಡುತ್ತಿದ್ದ, ಅದನ್ನ ಸ್ವಲ್ಪ ಸ್ವಲ್ಪವೇ ಕಿತ್ತುಕೊಂಡು ನಾಲಗೆಯ ಮೇಲೆ ಇಟ್ಟುಕೊಂಡು ಚಪ್ಪರಿಸಿದರೆ ಸಿಗುತಿದ್ದ ಆನಂದ ವರ್ಣಿಸಲು ಸಾಧ್ಯವಿಲ್ಲ.

ಅಂತಹ ತಿನಿಸು ಆಧುನಿಕತೆಯ ಕಾಲಚಕ್ರಕ್ಕೆ ಸಿಲುಕಿ ಡಬ್ಬದಿಂದ ಹೊರಬಂದು ಪ್ಲಾಸ್ಟಿಕ್ ಕವರ್ ನಲ್ಲಿ ಬಂಧಿಯಾಯಿತು.ಪ್ಲಾಸ್ಟಿಕ್ ಕವರ್ ಒಳಗೆ ಬಂಧಿಯಾದರೂ ತನ್ನ ಪವರ್ ಫುಲ್‌ ಬಣ್ಣ ದಿಂದಾಗಿ ಡಿಮ್ಯಾಂಡ್ ಕಡಿಮೆಯಾಗಿರಲಿಲ್ಲ.

ಹಳ್ಳಗಳಷ್ಟೇ ಅಲ್ಲಾ ನಗರದ ಪ್ರಮುಖ ರಸ್ತೆಗಳಲ್ಲೂ ನಿನ್ನೆ,ಮೊನ್ನೆ ತನಕ ಇದರ ವ್ಯಾಪಾರ ಜೋರಾಗಿಯೇ ಇತ್ತು.ನಾಲ್ಕೈದು ಅಡಿ ಎತ್ತರದ ಕೋಲುಗಳಿಗೆ ಈ ಬಣ್ಣದ ಮಿಟಾಯಿ ಕವರುಗಳನ್ನು ಆಕರ್ಷಕವಾಗಿ ಜೋಡಿಸಿ ಎರಡೂ ಕೈಗಳಲ್ಲಿ ಹಿಡಿದು‌ ಹೈ ಬೊಂಬಾಯ್ ಮಿಟಾಯ್ಯಾ ಎಂದು ರಾಗವಾಗಿ ಕೂಗುತ್ತಾ ಸಾಗುತ್ತಿದ್ದರೆ ಮನೆಯೊಳಗಿಂದ ಮಕ್ಕಳು ಮಹಿಳೆಯರು ಓಡೋಡಿ ಬರುತ್ತಿದ್ದರು.

ಆದರೇನು ಮಾಡುವುದು ಬಣ್ಣ ಕಳೆದುಕೊಂಡ ಬೊಂಬಾಯ್ ಮಿಟಾಯ್ ಬಳಿ‌ ಈಗ ಯಾರೂ ಸುಳಿಯುತ್ತಿಲ್ಲ.
ವ್ಯಾಪಾರಗಾರ‌ ದಿಕ್ಕು ಕಾಣದೆ‌ ಕೆನ್ನೆ ಮೇಲೆ‌ ಕೈ ಇಟ್ಟುಕೊಂಡು ದಿಕ್ಕು ತೋಚದೆ ಚಿಂತಿತನಾಗಿ ಅಲ್ಲೆ ಎಲ್ಲೋ ರಸ್ತೆ ಬದಿ ಕುಳಿತು ನೆಲ ನೋಡುತ್ತಾನೆ.

ಮಕ್ಕಳ, ಯುವಜನರ, ಮಹಿಳೆಯರ ನೆಚ್ಚಿನ ತಿನಿಸಾಗಿರುವ ಬಾಂಬೆ ಮಿಠಾಯಿ ಹೊಸ ರೂಪವನ್ನೇನಾದರೂ ಪಡೆದರೆ‌ ತಾನೂ ಉಳಿದು ತನ್ನ ನಂಬಿರುವ ಮಾಲೀಕನನ್ನೂ ಉಳಿಸುತ್ತದೆ. ಇಲ್ಲವೇ ಜನ ಹೊಂದಿಕೊಳ್ಳಬೇಕು ಹಾಗಾದಿದ್ದರೆ ಕ್ಯಾಂಡಿ ಕಾಲಗರ್ಭಕ್ಕೆ ಸೇರಿಬಿಟ್ಟೀತೋ ಏನೊ ಕಾಲವೇ ಉತ್ತರಿಸಬೇಕಿದೆ.

ಡಲ್ ಆದ ಮಕ್ಕಳ ಚಿತ್ತ ಸೆಳೆಯುತ್ತಿದ್ದ ಕಾಟನ್ ಕ್ಯಾಂಡಿ Read More

ರಾಜ್ಯದಲ್ಲಿ ತುಪ್ಪದ ಸ್ಯಾಂಪಲ್‌ಗಳ ಪರಿಶೀಲನೆ:ದಿನೇಶ್ ಗುಂಡೂರಾವ್

ಬೆಂಗಳೂರು: ನಂದಿನಿ ತುಪ್ಪ ಹೊರತುಪಡಿಸಿ, ರಾಜ್ಯದಲ್ಲಿ ಮಾರಾಟವಾಗುತ್ತಿರುವ ಉಳಿದ ತುಪ್ಪದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅದರ ಗುಣಮಟ್ಟ ಕಾಪಾಡಲು ಪರಿಶೀಲನೆ ಮಾಡಬೇಕು‌ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಪ್ರಸಾದಗಳ ಸ್ಯಾಂಪಲ್ ಪರಿಶೀಲನೆ ಅಲ್ಲ, ನೇರವಾಗಿ ತುಪ್ಪವನ್ನೇ ಪರಿಶೀಲನೆ ಮಾಡಬೇಕೆಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಸಚಿವರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಳಸುತ್ತಿರುವ ತುಪ್ಪದ ಬಗ್ಗೆ ತಪಾಸಣೆ ಮಾಡಲು ನಮ್ಮ ಆಹಾರ ಸುರಕ್ಷತಾ ಆಯುಕ್ತರಿಗೆ ಹೇಳಿದ್ದೇನೆ. ಈಗಾಗಲೇ ಸ್ಯಾಂಪಲ್ ಕಲೆಕ್ಟ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಿಳಿಸಿದರು.

ತಿರುಪತಿ ಲಡ್ಡು ತಯಾರಿಕೆಯಲ್ಲಿ ಕೊಬ್ಬಿನ ಅಂಶ ಬಳಕೆಯಾಗಿದೆ ಎಂಬ ವಿಚಾರದಿಂದ ರಾಜ್ಯದಲ್ಲೂ ಎಚ್ಚರಿಕೆ ವಹಿಸಲಾಗಿದೆ, ಇಲ್ಲಿ ಬಳಕೆಯಾಗುತ್ತಿರುವ ತುಪ್ಪದಲ್ಲಿ ಕೊಬ್ಬಿನ ಇದೆಯೆ ಎಂಬುದನ್ನು ಪರಿಶೀಲಿಸಲಾತ್ತಿದೆ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ತುಪ್ಪ ಬರುತ್ತದೆ, ಎಲ್ಲಾ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲಿಸಲು ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

ಪ್ರಸಾದದ ಪರಿಶೀಲನೆ ನಾವು ಮಾಡುತ್ತಿಲ್ಲ. ಬೇರೆ ಪದಾರ್ಥಗಳಲ್ಲಿ ಕಲಬೆರಕೆ ಆಗುವ ಸಾಧ್ಯತೆ ಕಡಿಮೆ. ಆದರೆ ಆಂಧ್ರ ಮುಖ್ಯಮಂತ್ರಿ ತುಪ್ಪದಲ್ಲಿ ಬೇರೆ ಬೇರೆ ಕೊಬ್ಬಿನಾಂಶ ಇತ್ತೆಂದು ಹೇಳಿರುವುದು ಆತಂಕಕಾರಿಯಾದ ವಿಚಾರ. ಒಬ್ಬ ಸಿಎಂ ಹೇಳಿದ ಮೇಲೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ ದೇವರ ಬಗ್ಗೆ ಶ್ರದ್ಧೆ ಇರೋರಿಗೆ ಈ ವಿಚಾರ ಬಹಳ ಆಘಾತಕಾರಿಯಾಗಿದೆ,ಹಾಗಾಗಿ ರಾಜ್ಯದಲ್ಲಿ ಪರಿಶೀಲನೆ ಮಾಡಿ ಎಂದು ಹೇಳಿದ್ದೇವೆ ಎಂದು ಸಚಿವರು ತಿಳಿಸಿದರು.

ಜನರಿಗೆ ಈ ವಿಚಾರದಲ್ಲಿ ಬಹಳ ಗೊಂದಲ ಶುರುವಾಗಿದೆ, ತಿರುಪತಿ ಲಡ್ಡು ವಿಚಾರದಲ್ಲಿ ಈ ರೀತಿ ಇದೆ ಎಂದು ಆದಾಗ ಯಾರನ್ನ ನಂಬಬೇಕು ಅನ್ನುವ ಪ್ರಶ್ನೆ ಎದುರಾಗಿದೆ. ನಾಳೆ ಪ್ರಸಾದವನ್ನು ಸ್ವೀಕರಿಸದೆ ಇರುವಂತ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ನಮ್ಮ ಕಡೆಯಿಂದ ಪರಿಶೀಲನೆ ಮಾಡಿಸುತ್ತಿದ್ದೇವೆ. ಮೊದಲು ವರದಿ ಬರಲಿ ನೋಡೋಣ ಏನೇನು ಕ್ರಮ ತೆಗೆದುಕೊಳ್ಳಬಹುದೊ ಅದನ್ನೆಲ್ಲಾ ತೆಗೆದುಕೊಳ್ಳಲಾಗುವುದು ಎಂದು ‌ದಿನೇಶ್ ಗುಂಡೂರಾವ್ ತಿಳಿಸಿದರು.

ರಾಜ್ಯದಲ್ಲಿ ತುಪ್ಪದ ಸ್ಯಾಂಪಲ್‌ಗಳ ಪರಿಶೀಲನೆ:ದಿನೇಶ್ ಗುಂಡೂರಾವ್ Read More