ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ

ಶ್ರೀರಂಗಪಟ್ಟಣ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನುಮದಿನವನ್ನು ಅಭಿಮಾನಿಗಳು ವಿಶೇಷವಾಗಿ ಆಚರಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್
ಅಭಿಮಾನಿಗಳು ಶ್ರೀರಂಗಪಟ್ಟಣದ ಸಾಯಿಬಾಬಾ ಅನಾಥಾಶ್ರಮದಲ್ಲಿನ ಮಕ್ಕಳೊಂದಿಗೆ ದರ್ಶನ್ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು.

ಈ ಅನಾಥಾಶ್ರಮದಲ್ಲಿ ದರ್ಶನ್ ಅಭಿಮಾನಿಗಳು
ಕೇಕ್ ಕತ್ತರಿಸಿ ಎಲ್ಲರಿಗೂ ವಿತರಿಸಿದರು.

ನಂತರ ಅಲ್ಲಿನ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕಗಳನ್ನು ನೀಡಿದರು.ಅಲ್ಲದೆ ಊಟದ ವ್ಯವಸ್ಥೆಯನ್ನು ಮಾಡಿ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ Read More

ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಟಾಪನೆ‌

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಎಣ್ಣೆ ಹೊಳೆ ಕೊಪ್ಪಲು ಗ್ರಾಮದ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮುಗಿದಿದ್ದು ಪುನರ್ ಪ್ರತಿಷ್ಟಾಪನೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯ ಹಮ್ಮಿಕೊಳ್ಳಲಾಯಿತು.

ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ,ಮಾಜಿ ಸಂಸದ ಪುಟ್ಟರಾಜು, ಶಾಸಕ ಪಾಂಡುಪುರದ ಕೆ ಎಸ್ ಪುಟ್ಟಣ್ಣಯ್ಯ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ದೇವಸ್ಥಾನ ಪುನರ್ ಪ್ರತಿಷ್ಟಾಪನೆ‌ ನೆರವೇರಿತು.

ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿ ದೇವಸ್ಥಾನ ಅಭಿವೃದ್ಧಿಗೊಳಿಸಿದ್ದಾರೆ.

ಆಗಮಿಕರಾಗಿ ಶ್ರೀರಂಗಪಟ್ಟಣ ಕ್ಷೇತ್ರದ ಚಾಮುಂಡೇಶ್ವರಿ ಅಮ್ಮನವರ ಪ್ರಧಾನ ಅರ್ಚಕರಾದ ಲಕ್ಷ್ಮೀಶ್ ತಂಡದ ಪುರೋಹಿತ ವರ್ಗದವರು ಕುಂಭಾಭಿಷೇಕ ಮತ್ತಿತರ ಪೂಜಾ ಕಾರ್ಯ ನೆರವೇರಿಸಿದರು.

ಈ ವೇಳೆ ಎಚ್. ಡಿ ಕುಮಾರಸ್ವಾಮಿ ಅವರು ದೇಶ ಮತ್ತು ರಾಜ್ಯ ಸುಭಿಕ್ಷ ವಾಗಿರಲಿ ರೈತರಿಗೆ ಒಳ್ಳೆಯದಾಗಲಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಕಾಲಕಾಲಕ್ಕೆ ಮಳೆ ಬೆಳೆ ಆಗಲಿ ಎಂದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನುಡಿದರು.

ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಟಾಪನೆ‌ Read More

ಶ್ರೀರಂಗಪಟ್ಟಣದಲ್ಲಿ ದಸರಾ ಗೊಂಬೆಗಳ ವಿಶಿಷ್ಟ ಪ್ರದರ್ಶನ

ಶ್ರೀರಂಗಪಟ್ಟಣ: ದಸರಾ ಉತ್ಸವಕ್ಕೂ ಬೊಂಬೆಗಳ ಪ್ರದರ್ಶನಕ್ಕೂ ಶತಮಾನಗಳ ನಂಟಿದ.

ಶ್ರೀರಂಗಪಟ್ಟಣದ ಹಳೇ ಅಂಚೆ ಕಚೇರಿ ಬೀದಿಯ ನಾಗರತ್ನಮ್ಮ ನಾರಾಯಣಭಟ್ಟ ಭವನದಲ್ಲಿ ಏರ್ಪಡಿಸಿರುವ ದಸರಾ ಬೊಂಬೆಗಳ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.

ಪಟ್ಟಣದ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್ ಮತ್ತು ಮಂಗಳಾ ದಂಪತಿ ಈ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಸುಮಾರು 3 ಸಾವಿರಕ್ಕೂ ಹೆಚ್ಚು ಬೊಂಬೆಗಳನ್ನು ಓರಣವಾಗಿ ಜೋಡಿಸಲಾಗಿದೆ. ಮೂರು ದಿನಗಳ ಸತತ ಪರಿಶ್ರಮದಿಂದ ಬೊಂಬೆಗಳನ್ನು ಜೋಡಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳ ಜಾನಪದ ಕಲೆಗಳನ್ನು ಮತ್ತು ಸಂಸ್ಕೃತಿಯನ್ನು ಈ ಬೊಂಬೆಗಳು ಬಿಂಬಿಸುತ್ತಿವೆ.

ದಸರಾ ಉತ್ಸವದಲ್ಲಿ ಜಂಬೂ ಸವಾರಿಯ ಮೆರವಣಿಗೆ, ಮಂಗಳ ವಾದ್ಯ, ಸಪ್ತ ಮಾತೃಕೆಯರು, ನವ ದುರ್ಗೆಯರು, ಶ್ರೀನಿವಾಸ ಕಲ್ಯಾಣ, ವೈಕುಂಠ, ಕಂಚಿ ಗರುಡೋತ್ಸವ, ಶಿವ- ಪಾರ್ವತಿ, ಲಕ್ಷ್ಮಿನಾರಾಯಣ, ವಿಷ್ಣುವಿನ ದಶಾವತಾರ, ರಾಜಸ್ತಾನಿ ವಾದ್ಯವೃಂದ, ಸಿಪಾಯಿ, ಮೈಸೂರಿನ ಚನ್ನಯ್ಯ ಕುಸ್ತಿ ಅಖಾಡವನ್ನು ಬಿಂಬಿಸುವ ಬೊಂಬೆಗಳು ಮತ್ತೆ ಮತ್ತೆ ನೋಡಬೇಕೆನಿಸುತ್ತವೆ. ಶ್ರೀಕೃಷ್ಣ ಕುಟೀರವಂತೂ ನೋಡುಗರಲ್ಲಿ ಭಕ್ತಿ, ಭಾವ ಮೂಡಿಸುತ್ತದೆ.

ಆಧುನಿಕತೆಯನ್ನು ಬಿಂಬಿಸುವ ಕ್ರಿಕೆಟ್ ಕ್ರೀಡಾಂಗಣ, ಲಲನೆಯರ ಜಲಕ್ರೀಡೆ, ಹಣ್ಣು ಮತ್ತು ತರಕಾರಿ ಅಂಗಡಿ, ದಿನಸಿ ಅಂಗಡಿ, ಮೆಟಲ್ ಸ್ಪೋರ್, ಬೇಕರಿ, ಆಭರಣದ ಅಂಗಡಿ, ಪಾದರಕ್ಷೆ ಅಂಗಡಿಗಳು ಕೂಡ ಬೊಂಬೆ ಪ್ರದರ್ಶನದಲ್ಲಿದ್ದು ಒಂದು ಊರನ್ನೇ ಪ್ರಸ್ತುತ ಪಡಿಸುವಂತಿದೆ.

ಶಿವನ ಜಡೆಯಿಂದ ಧುಮುಕುವ ಗಂಗೆ ಎಲ್ಲರ ಗಮನ ಸೆಳೆಯುತ್ತಿವೆ.

ಪ್ರದರ್ಶನಕ್ಕೆ ಇರಿಸಿರುವ ಬೊಂಬೆಗಳ ಪೈಕಿ ಅರ್ಧದಷ್ಟು ಬೊಂಬೆಗಳನ್ನು ಕೃಷ್ಣಭಟ್‌ ಅವರ ಪತ್ನಿ ಮಂಗಳ ಅವರೇ ಸಿದ್ದಪಡಿಸಿರುವುದು ವಿಶೇಷ.ಅವರು ರಾಜಸ್ತಾನ ಇತರ ರಾಜ್ಯಗಳಿಂದ ಬೊಂಬೆಗಳು ತರಿಸಿದ್ದಾರೆ.

ಮಾರುಕಟೆಯಲಿ ಸಿಗುವ ಬೊಂಬೆಗಳಿಗೆ ಪಾರಂಪರಿಕ ಸ್ಪರ್ಶ ನೀಡಿ
ಆಕರ್ಷಕಗೊಳಿಸಲಾಗಿದೆ.

ನವರಾತ್ರಿ ಆಚರಣೆಯ ಆರಂಭದ ದಿನದಿಂದ ಪ್ರಾರಂಭವಾಗಿರುವ ಬೊಂಬೆಗಳ ಪ್ರದರ್ಶನ
ದಸರಾ ಮುಗಿದ ನಂತರವೂ ಕೆಲದಿನ ಇರಲಿದೆ.

ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆ ವರೆಗೆ ಬೊಂಬೆಗಳನ್ನು ನೋಡಲು ಮುಕ್ತ ಅವಕಾಶವಿದೆ. ಬೊಂಬೆಗಳನ್ನು ನೋಡಲು ಬರುವವರಿಗೆ ಸಿಹಿ ತಿನಿಸು, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಕೂಡಾ ಕೊಡುತ್ತಿರುವುದು ಇನ್ನೂ ವಿಶೇಷ.

ಮೂವತ್ತೈದು ವರ್ಷಗಳಿಂದ ನಮ್ಮ ತಾಯಿ ದಸರಾ ಬೊಂಬೆಗಳನ್ನು ಮನೆಯಲ್ಲಿ ಕೂರಿಸುತ್ತಿದ್ದರು.ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರತ್ಯೇಕ ಭವನದಲ್ಲಿ ದಸರಾ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ.

ಪ್ರತಿ ದಿನ 300ರಿಂದ 400 ಜನರು ಭೇಟಿ ನೀಡುತ್ತಿದ್ದಾರೆ. ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದು ಕೃಷ್ಣಭಟ್ ಅವರು ಹೇಳುತ್ತಾರೆ.

ಬೊಂಬೆ ಪ್ರದರ್ಶನ ವೀಕ್ಷಣೆ ಜತೆಗೆ ತಿಂಡಿ ಕೂಡಾ ಸಿಗುವ ಇಂತಹ ಅದ್ಭುತ ಪ್ರದರ್ಶನವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ.

ಶ್ರೀರಂಗಪಟ್ಟಣದಲ್ಲಿ ದಸರಾ ಗೊಂಬೆಗಳ ವಿಶಿಷ್ಟ ಪ್ರದರ್ಶನ Read More

ಶ್ರೀರಂಗಪಟ್ಟಣ ದಸರಾಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಅದ್ದೂರಿ ದಸರಾಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ನಾಡ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರು ಸರ್ವಾಲಾಲಂಕೃತಗೊಂಡ ಮಹೇಂದ್ರ ಆನೆಯ ಮೇಲೆ ಸಿಂಹಾಸನದೀಶ್ವರಿಯಾಗಿ ಗಜ ಗಾಂಭೀರ್ಯದಿಂದ ರಾಜಮಾರ್ಗದಲ್ಲಿ ಹೆಜ್ಜೆ ಹಾಕಿದಾಗ ಜಾನಪದ ಕಲಾ ತಂಡಗಳು,
ಡೊಳ್ಳು ಕುಣಿತ ಹಾಗೂ ಪೊಲೀಸ್ ವಾದ್ಯ ವೃಂದ ಸಾಥ್ ನೀಡಿದವು.ರಸ್ತೆಗಳ ಎರಡೂ ಬದಿ ಜನತೆ ನಿಂತು ಕಣ್ತುಂಬಿಕೊಂಡರು‌

ಇನ್ನು ಶ್ರೀರಂಗಪಟ್ಟಣದ ಇತಿಹಾಸವನ್ನು ಮೆಲುಕು ಹಾಕಿದ್ದೇ ಆದರೆ ಇವತ್ತಿನ ಶ್ರೀರಂಗಪಟ್ಟಣ ಪೌರಾಣಿಕ ಯುಗದಲ್ಲಿ ಆದಿರಂಗ ವಾಗಿ ಚಾರಿತ್ರಿಕವಾಗಿ ಅಷ್ಟಗ್ರಾಮ ಎಂದು ಕರೆಯಲ್ಪಡುತ್ತಿತ್ತು.

ಕಾವೇರಿ ನದಿ ಸುತ್ತುವರೆದು ಸೃಷ್ಠಿಯಾದ ಈ ಪಟ್ಟಣವು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 3 ಮೈಲಿಗಳಷ್ಟು ಉದ್ದ ಮತ್ತು ಉತ್ತರ-ದಕ್ಷಿಣವಾಗಿ ಒಂದು ಮೈಲಿಯಷ್ಟು ಅಗಲವನ್ನು ಹೊಂದಿರುವುದು ವಿಶೇಷವಾಗಿದೆ.

ಶ್ರೀರಂಗಪಟ್ಟಣವನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರ ಉದಯಾದಿತ್ಯ ಕ್ರಿ.ಶ. 1120ರಲ್ಲಿ ನಿರ್ಮಿಸಿದ್ದರೆ, ಕ್ರಿ.ಶ. 1454ರಲ್ಲಿ ನಾಗಮಂಗಲದ ದೊರೆ ತಿಮ್ಮಣ್ಣ‌ ಶ್ರೀರಂಗಪಟ್ಟಣಕ್ಕೆ ಸುತ್ತಲೂ ಕೋಟೆ ಕಟ್ಟಿಸಿದ. ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರೆದಿರುವ ಈ ಬಲವಾದ ಕೋಟೆ ಭಾರತದ ಎರಡನೇ ಅತ್ಯಂತ ಬಲಿಷ್ಟ ಕೋಟೆಯೆಂದು ಪರಿಗಣಿತವಾಗಿದೆ.

ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹಾಗೂ ಖ್ಯಾತ ಜ್ಯೋತಿಷಿ ವೇದ ಬ್ರಹ್ಮ ಶ್ರೀ ಭಾನುಪ್ರಕಾಶ್ ಶರ್ಮ ಗುರುಜಿಯವರ ಅವರ ನೇತೃತ್ವದಲ್ಲಿ ರಾಜ್ಯ, ರಾಷ್ಟ್ರಕ್ಕೆ ಅಭಿವೃದ್ಧಿ ಆಗಲಿ, ಸಕಾಲಕ್ಕೆ ಮಳೆ ಬೆಳೆಯಾಗಲಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಸಂಕಲ್ಪ ಮಾಡಿ ಅಮ್ಮನವರಿಗೆ ಪುಷ್ಪಾರ್ಚನೆಯನ್ನು ನೆರವೇರಿಸಿದರು.

ನಂತರ ಕಿರಂಗೂರಿನ ಬನ್ನಿ ಮಂಟಪದಿಂದ ಮೈಸೂರು ರಸ್ತೆ ಮಾರ್ಗವಾಗಿ ಶ್ರೀರಂಗಪಟ್ಟಣದ ಕೋಟೆ ಬಾಗಿಲಿನ ಒಳಗಿನಿಂದ ಪೇಟೆ ಬೀದಿಯಲ್ಲಿ ಬಂದು ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಮಹಾ ಮಂಗಳಾರತಿ ಮಾಡಿ ಅಧಿದೇವತೆಯನ್ನು ಲಾರಿಯ ಮೂಲಕ ದೇವಾಲಯಕ್ಕೆ ಸ್ಥಳಾಂತರಿಸಲಾಯಿತು.

ಮೆರವಣಿಗೆ ವೇಳೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಶ್ರೀರಂಗಪಟ್ಟಣ ದಸರಾಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ Read More